ಹೊನ್ನಾವರ:
ತಾಲೂಕಿನ ಅಡಕಾರ ಬಸ್ ನಿಲ್ದಾಣದ ಬಳಿ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೆ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ.
ಮಾಗೋಡ ಕೊಡ್ಲಗದ್ದೆಯ ನಿವಾಸಿಯಾದ ರಾಮಚಂದ್ರ ಗೋವಿಂದ ನಾಯ್ಕ ಮೃತಪಟ್ಟದ್ದಾನೆ ಬೈಕ್ ಸವಾರ. ಇವರು ತಮ್ಮ ಬೈಕಿನಲ್ಲಿ ಹೊನ್ನಾವರದಿಂದ ಗೇರುಸೊಪ್ಪಾ ಕಡೆಗೆ ಹೋಗುತ್ತಿದ್ದಾಗ ಇನ್ನೊಂದು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಕಿಶೋರ್ ರಾಧಾಕೃಷ್ಣ ಕೊಚರೇಕರ್ ದಂಪತಿ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment