ಹಳಿಯಾಳ: ಭಾರತ ದೇಶದ ಹತ್ತನೇ ಮತ್ತು ಕರ್ನಾಟಕ ರಾಜ್ಯದ ಏಕೈಕ ಹಳಿಯಾಳದ ತಾಲೂಕಿನ ಕರ್ಲಕಟ್ಟಾದಲ್ಲಿರುವ ಶನಿಧಾಮದಲ್ಲಿ ಹನುಮಾನ್ ಜಯಂತಿ ಅಂಗವಾಗಿ ವಿಶೇಷ ಪೂಜೆ, ಹೋಮ, ಹವನ ಕಾರ್ಯಕ್ರಮಗಳು ಯೋಗಿ ಮೇಘನಾಥಜಿ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆದವು. ದ್ವಾದಶ(12) ಜ್ಯೋತಿರ್ಲಿಂಗÀಗಳು, ಹನುಮಾನ್ ಮಂದಿರ ಹೊಂದಿರುವ ಶನಿಧಾಮದಲ್ಲಿ ಹನುಮಾನ್ ಜಯಂತಿಯನ್ನು ಶೃಧ್ದಾಭಕ್ತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಸೇರಿದಂತೆ ತಾಲೂಕಿನ ಸಾವಿರಾರು ಭಕ್ತರು ಶನಿಧಾಮಕ್ಕೆ ಭೆಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಭಜನಾ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆದವು. ಈ ಸಂದರ್ಭದಲ್ಲಿ ಮಾಯಿ ಶಾಂತಿನಾಥಜೀ, ಎವಿಎಮ್ ಗ್ರಾನೈಟ್ಸ್ನ ಮಹಾವೀರ ಪ್ರಸಾದ ಮಲಾನಿ, ಶ್ಯಾಮಾ, ವಿವೇಕ ಮಲಾನಿ, ಜಿ.ಪಂ ಸದಸ್ಯ ಕೃಷ್ಣಾ ಪಾಟೀಲ್, ಸೇರಿದಂತೆ ರಾಜಸ್ಥಾನಿ, ಮಾರವಾಡಿ ಸಮಾಜದವರು ಇದ್ದರು.
Leave a Comment