ಹಳಿಯಾಳ: ಪಟ್ಟಣದ ಶಿವಾಜಿ ವೃತ್ತದ ಬಳಿಯ ಮುಖ್ಯ ಬೀದಿಯಲ್ಲಿರುವ ಬಿಜೆಪಿ ಘಟಕ ಕಚೇರಿಯಲ್ಲಿ ಕಾಲ್ ಸೆಂಟರ್ ಉದ್ಗಾಟಿಸಲಾಯಿತು. ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ಉದ್ಗಾಟನೆ ನೆರವೆರಿಸಿ ರಾಜ್ಯ ಸರ್ಕಾರದ ಆಡಳತ ವೈಪಲ್ಯ ಹಾಗೂ ಕೇಂದ್ರ ಸರ್ಕಾರದ ಜನಪರ ಆಡಳಿತವನ್ನು ಮತದಾರರಿಗೆ ಮನವರಿಕೆ ಮಾಡಲು ಕಾರ್ಯಕರ್ತರು ಸಮರೋಪಾದಿಯಲ್ಲಿ ಕಾರ್ಯಪ್ರವೃತರಾಗ ಬೇಕೆಂದು ಕರೆ ನೀಡಿದರು. ಆದಷ್ಟು ಯುವ ಸಮೂಹವನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಸೇರಿಸಲು ಪ್ರೇರೆಪಿಸಬೇಕು. ಸಾಮಾಜಿಕ ಜಾಲ ತಾಣದ ಮೂಲಕ ಬಿಜೆಪಿ ಯೋಜನೆಗಳನ್ನು ಎಲ್ಲರಿಗೂ ಮುಟ್ಟಿಸಲು ಕಾಳಜಿ ವಹಿಸಬೇಕೆಂದರು. ಬಿಜೆಪಿ ಮುಖಂಡರದಾದ ಅನಿಲ ಪುತ್ನಾಳ, ಅನಿಲ ಗಿರಿ, ಪ್ರದೀಪ ಹಿರೇಕರ, ಸಂತಾನ ಸಾವಂತ, ಸಂತೋಷ ಘಟಕಾಂಬ್ಳೆ, ಹನುಮಂತ ಚಲಾವದಿ. ರಾಜು ಹಳ್ಳೂಕರ, ಆನಂದ ಕಂಚನಾಳಖರ, ಮೋಹನ ಮೌಲಂಗಿ, ಗಣವಂತ ಗಡಕರ, ನಾರಾಯಣ ಅಂತ್ರೋಳಕರ ಇದ್ದರು.
Leave a Comment