ಹೊನ್ನಾವರ:
ರಾಜ್ಯ ಕಾಂಗೈ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರದಲ್ಲಿಯೂ ಪ್ರಚಾರ ಸಮಿತಿ ಅಧ್ಯಕ್ಷರನ್ನು ಹಾಗೂ ಎಲ್ಲಾ ಬ್ಲಾಕ್ಗಳಿಗೆ ಅಧ್ಯಕ್ಷರನ್ನು ನೇಮಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಕಾಂಗೈ ಪ್ರಚಾರ ಸಮಿತಿ ಅಧ್ಯಕ್ಷ ಎಮ್.ಎನ್. ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರಾಧ್ಯಕ್ಷರಾಗಿ ಹೆಚ್.ಎಮ್. ನಾಯ್ಕ, ಕುಮಟಾ ಕ್ಷೇತ್ರ ಮಹೇಶ ಅಚುತ್ ನಾಯ್ಕ, ಭಟ್ಕಳ ಕ್ಷೇತ್ರ ಯೋಗೇಶ ರಾಯ್ಕರ್, ಕಾರವಾರ ಕ್ಷೇತ್ರ ಸುರೇಶ ರಾಮಚಂದ್ರ ನಾಯ್ಕ, ಹಳಿಯಾಳ ಕ್ಷೇತ್ರ ಐ.ಸಿ. ಕಮಕರ್, ಶಿರಸಿ-ಸಿದ್ಧಾಪುರ ಕ್ಷೇತ್ರ ಜಿ.ವಿ. ಕುಚಿನಾಡು ನೇಮಕ ಮಾಡಲಾಗಿದೆÉ.
ಬನವಾಸಿ ಬ್ಲಾಕ ಕಿರಣ ಬಸವರಾಜ ನಾಯ್ಕ, ಮುಂಡಗೋಡ ಬ್ಲಾಕ ಲಿಂಗರಾಜ ಬಸವರಾಜ ಕನ್ನೂರು, ಯಲ್ಲಾಪುರ ಬ್ಲಾಕ್ ಸಿರಿಸ್ ಎಸ್. ಪ್ರಭು, ಕುಮಟಾ ಬ್ಲಾಕ್ ರಾಜು ನಾರಾಯಣ ಅಂಬಿಗ, ಹೊನ್ನಾವರ ಬ್ಲಾಕ್ ಕಿರಣ ಭಂಡಾರಿ, ಮಂಕಿ ಬ್ಲಾಕ್ ಚಂದ್ರಕಾಂತ ಕೊಚರೇಕರ್, ಭಟ್ಕಳ ಬ್ಲಾಕ್ ನಾರಾಯಣ ಬಡಿಯಾ ನಾಯ್ಕ, ಕಾರವಾರ ಬ್ಲಾಕ್ ಪ್ರಾಂಕಿ ಗುಡಿನೋ, ಅಂಕೋಲಾ ಬ್ಲಾಕ್ ಸಯ್ಯದ್ ಮಹಮ್ಮದ್ ಸಯ್ಯದ್ ಇಬ್ರಾಹಿಂ ಮಹಮ್ಮದ್ ಪಪ್ಪು, ಹಳಿಯಾಳ ಬ್ಲಾಕ್ ಉಮೇಶ ಬೋಳಾ ಶೆಟ್ಟಿ, ದಾಂಡೇಲಿ ಬ್ಲಾಕ್ ವಿ.ಆರ್. ಹೆಗಡೆ, ಜೋಯಿಡಾ ಬ್ಲಾಕ್ ಸತೀಶ ಬಾಳಾ ಶಿರಸಿ ಬ್ಲಾಕ್ ಇಬ್ರಾಹಿಂ ನಬಿಸಯ್ಯದ್, ಸಿದ್ಧಾಪುರ ಬ್ಲಾಕ್ ವಸಂತ ನಾಯ್ಕ ನೇಮಕ ಗೊಂಡಿದ್ದಾರೆ.
ಪ್ರತಿ ವಾರ್ಡನಲ್ಲಿ ಇಬ್ಬರನ್ನು ಪ್ರಚಾರ ಸಮಿತಿಗೆ ನೇಮಕ ಮಾಡಿಕೊಂಡು ಪಕ್ಷದ ಸೂಚನೆ ಮತ್ತು ಸ್ಥಳೀಯ ಹಿರಿಯ-ಕಿರಿಯ ನಾಯಕರುಗಳ ಸಹಕಾರದೊಂದಿಗೆ ಪಕ್ಷದ ಸಂಘಟನೆ ಮತ್ತು ಪ್ರಚಾರ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಂಡು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಜಿಲ್ಲಾ ಕಾಂಗೈ ಪ್ರಚಾರ ಸಮಿತಿ ಅಧ್ಯಕ್ಷ ಎಮ್.ಎನ್. ಸುಬ್ರಹ್ಮಣ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment