ಹೊನ್ನಾವರ: ಯಕ್ಷಗಾನ ಕಲೆಯ ಔನತ್ಯಕ್ಕಾಗಿ ಶ್ರಮಿಸುತ್ತಿರುವ ಕೆರೆಮನೆಯ ಶ್ರೀಮಯ ಯಕ್ಷಗಾನ ರಂಗ ಶಿಕ್ಷಣ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹತ್ತು ದಿನಗಳ ಉಚಿತ ಯಕ್ಷಗಾನ ತರಬೇತಿ ಶಿಬಿರವನು ್ನಏಪ್ರಿಲ್ ತಿಂಗಳನಲ್ಲಿ 21 ರಿಂದ 30 ವರೆಗೆ ಗುಣವಂತೆಯ ಯಕ್ಷಾಂಗಣದಲ್ಲಿ ಆಯೋಜಿಸಿದ್ದಾರೆ.
ಕರಾವಳಿಯ ಗಂಡುಕಲೆ ಎಂದೇ ಖ್ಯಾತಿವೆತ್ತ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ವರ್ಗಾಯಿಸುವ ಉದ್ದೇಶದೊಂದಿಗೆ ಕಲೆಯಲ್ಲಿ ಹೊಸ ಪೀಳಿಗೆಯನ್ನು ಸೃಷ್ಟಿಸುವ ಆಶಯಗಳೊಂದಿಗೆ ಕಳೆದ 33 ವರ್ಷಗಳಿಂದಲೂ ತೊಡಗಿಸಿಕೊಂಡಿರುವ ಕಲಾಕೇಂದ್ರ, ತರಬೇತಿಗಾಗಿ ಬರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಟ ಮತ್ತು ವಸತಿಯನ್ನು ಕಲ್ಪಿಸುವ ಜೊತೆಗೆ ನುರಿತ ಶಿಕ್ಷಕರಿಂದ ಯಕ್ಷಗಾನದ ಹೆಜ್ಜೆ ಮತ್ತು ಅಂಗೋಪಾಂಗಗಳಕುರಿತು ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ನಿರ್ದೇಶಕರಾದ ಶಿವಾನಂದ ಹೆಗಡೆ ಕೆರೆಮನೆಯವರು ತಿಳಿಸಿದ್ದಾರೆ.
ಆಸಕ್ತರು ಸಂಪರ್ಕಿಸಬೇಕಾದ ವಿಳಾಶ ಕೆರೆಮನೆ ಶಿವಾನಂದ ಹೆಗಡೆ, ನಿರ್ದೆಶಕರು ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಗುಣವಂತೆ, ಹೊನ್ನಾವರ,ಉತ್ತರಕನ್ನಡ-581348 ದೂ:9480516300 ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Leave a Comment