ಹಳಿಯಾಳ : ಬಿಜೆಪಿ ಪಕ್ಷದವರು ಹಿಂದೂ ಅಜೆಂಡಾ ಮೇಲೆ ಆರಿಸಿ ಬರುತ್ತೇವೆ ಎಂದು ಕಣಸು ಕಾಣುತ್ತಿದ್ದು ಅದು ಅವರ ಭ್ರಮೆಯಾಗಿದ್ದು ನನಸಾಗಲು ಸಾಧ್ಯವಿಲ್ಲ ಹಿಂದೂ ಅಜೆಂಡಾ ಎಲ್ಲೂ ಕೆಲಸ ಮಾಡಲ್ಲ ಎಂದು ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಸುನಿಲ್ ಹೆಗಡೆ ಅವರು ಇತ್ತೀಚೆಗೆ ದಾಂಡೇಲಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಸಚಿವ ದೇಶಪಾಂಡೆ ವಿರುದ್ದ ಆಧಾರ ರಹಿತ ಆರೋಪಗಳನ್ನು ಮಾಡಿರುವ ಬಗ್ಗೆ ಕಿಡಿ ಕಾರಿ ಆರೋಪಗಳನ್ನು ಸಾಬಿತು ಪಡಿಸಲಿ ಎಂದು ಸವಾಲ್ ಹಾಕಿದರು. ಸಚಿವ ದೇಶಪಾಂಡೆ ಅವರು ಸರ್ಕಾರಿ ವೆಚ್ಚದಲ್ಲಿ ತಮ್ಮ ಕುಟುಂಬದವರನ್ನು ವಿಶೇಶ ಪ್ರವಾಸಕ್ಕೆ ಕೊಂಡೊಯ್ದಿದ್ದಾರೆ ಸೇರಿದಂತೆ ಪ್ರಮುಖ ಹಲವಾರು ಆರೋಪಗಳನ್ನು ಮಾಜಿ ಶಾಸಕ ಸುನಿಲ್ ಹೆಗಡೆ ಮಾಡಿದ್ದು ಸುನೀಲ್ ಹೆಗಡೆ ಈ ಬಗ್ಗೆ ದಾಖಲೆ ಸಮೇತ ಆರೋಪವನ್ನು ಸಾಬಿತುಪಡಿಸಬೇಕು ಇಲ್ಲದಿದ್ದರೇ ದೇಶಪಾಂಡೆ ಕುಟುಂಬದವರು ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದಾರೆಂದು ಎಚ್ಚರಿಕೆ ನೀಡಿದರು. ಕ್ಷೇತ್ರದ ಮಾಜಿ ಶಾಸಕರು ಏನೆ ಆರೋಪಗಳನ್ನು ಮಾಡುವುದಿದ್ದರು ದಾಖಲೆ ಸಹಿತ ಆರೋಪಗಳನ್ನು ಮಾಡಲಿ ನಾವು ಸ್ವಾಗತಿಸುತ್ತೇವೆ ಅಲ್ಲದೇ ಬಹಿರಂಗ ವೇದಿಕೆಗೆ ಬಂದು ಚರ್ಚಿಸಲು ಸಿದ್ದವಿರುವುದಾಗಿ ಘೊಷಿಸಿದ ಕಾಂಗ್ರೇಸ್ಸಿಗರು ವ್ಯರ್ಥ ಆರೋಪಗಳನ್ನು ಮಾಡದೆ ಜನರಿಗೆ ಆರಾಮಾಗಿ ಚುನಾವಣೆ ಎದುರಿಸಲು ಬಿಡಿ ಎಂದು ಮನವಿ ಮಾಡಿದರು. ಕಾಂಗ್ರೇಸ್ ಪಕ್ಷದ ಹಾಗೂ ಸಚಿವ ದೇಶಪಾಂಡೆಯವರು ನಡೆಸಿರುವ ಅಭಿವೃದ್ದಿ ಕಾರ್ಯದ ವಿರುದ್ದ ಬಿಜೆಪಿ ಪಕ್ಷದವರಿಗೆ ಮಾತನಾಡಲು ಬಂಡವಾಳ ಇಲ್ಲದೆ ಇರುವುದರಿಂದ ಚುನಾವಣೆ ಸಮಯದಲ್ಲಿ ಇಲ್ಲಸಲ್ಲದ ಬಾಲಿಶ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಮತದಾರರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದು ಅದು ಕಾರ್ಯರೂಪಕ್ಕೆ ಬರದು ಜನತೆ ಎಲ್ಲವನ್ನು ಅರಿತಿದ್ದು ಉತ್ತಮರಿಗೆ, ಅಭಿವೃದ್ದಿ ಪರರಿಗೆ ಮತ ನೀಡಲಿದ್ದಾರೆಂದು ಕೊರ್ವೆಕರ ಸಚಿವ ದೇಶಪಾಂಡೆ ಗೆಲುವು ಶತಸಿದ್ದ ಎಂದರು. ನಾವು ಕೆಲಸಗಾರರು ಯಾರ ಬಗ್ಗೆಯೂ ವೃಥಾ ಟಿಕೆ ಟಿಪ್ಪಣಿ ಮಾಡಿ ಕಾಲ ಹರಣ ಮಾಡುವುದಿಲ್ಲ ಹಳಿಯಾಳ ಕ್ಷೇತ್ರದಲ್ಲಿ ಚುನಾವಣೆಯ ಬಳಿಕ ಮೆ15ರ ಫಲಿತಾಂಶದ ಬಳಿಕ ವಿರೋಧ ಪಕ್ಷಗಳು ಎಂದಿಗೂ ಚುನಾವಣೆ ಎದುರಿಸಲು ಮುಂದೆ ಬರುವುದಿಲ್ಲ ಎಂದು ಕೊರ್ವೆಕರ ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಸತ್ಯಜೀತ ಗಿರಿ, ಮಾಲಾ ಬ್ರಗಾಂಜಾ, ಅನಿಲ ಫರ್ನಾಂಡಿಸ್, ರವಿ ತೊರಣಗಟ್ಟಿ, ಶಿವಪುತ್ರಪ್ಪಾ ನುಚ್ಚಂಬ್ಲಿ, ಬಾಬು ಮಿರಾಶಿ, ಪಿಶಪ್ಪಾ ಮೇತ್ರಿ, ಅನರಾಜ ಗೊಂದಳಿ, ವಿನೊದ ಮೆತ್ರಿ, ಗುಲಾಬಷಾ ಲತಿಫನವರ ಇತರರು ಇದ್ದರು.
Leave a Comment