ಹಳಿಯಾಳ :- ಕೇಂದ್ರ ಸರ್ಕಾರ ಮಾಡಿರುವ ನೋಟು ಅಮಾನ್ಯ ನೀತಿಯಿಂದ ಇಂದಿಗೂ ಜನಸಾಮಾನ್ಯರು ತೀರಾ ಕಷ್ಟ ಅನುಭವಿಸುತ್ತಿದ್ದು ಬ್ಯಾಂಕ್ಗಳಲ್ಲಿರುವ ತಮ್ಮ ಹಣ ತಾವು ಪಡೆಯಲು ತೊಂದರೆ ಅನುಭವಿಸುತ್ತಿದ್ದು ಬಿಜೆಪಿ ಮುಖಂಡರಿಗೆ ಜನರ ಸಮಸ್ಯೆ ಅರ್ಥವಾಗುತ್ತಿಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಪ್ರಶ್ನೀಸಿದ್ದಾರೆ. ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಮದುವೆ, ಗೃಹ ಪ್ರವೇಶ ಇನ್ನಿತರ ಶುಭ ಕಾರ್ಯಕ್ರಮಗಳ ಸಮಯವಾಗಿದ್ದು ಕಾರ್ಯಕ್ರಮಗಳಿಗೆ ಬ್ಯಾಂಕಿನಲ್ಲಿರುವ ತಮ್ಮ ಹಣವನ್ನು ತಾವು ಪಡೆಯಲು ಹೆಣಗಾಡಬೇಕಾದ ದುಸ್ಥಿತಿಯನ್ನು ಕೇಂದ್ರ ಸರ್ಕಾರ ಜನರಿಗೆ ನೀಡಿದ್ದು ಇದರಿಂದ ಜನಸಾಮಾನ್ಯರು ತೀರಾ ಕಷ್ಟ ಅನುಭವಿಸುತ್ತಿದ್ದು ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಹಣವೇ ದೊರೆಯುತ್ತಿಲ್ಲ ಅಲ್ಲದೇ ಹತ್ತಾರು ದಿನಗಳಿಂದ ಎಟಿಎಮ್ ಯಂತ್ರಗಳ ಬಾಗಿಲನ್ನು ಮುಚ್ಚಿದ್ದು ಜನತೆ ಹಣದ ಅಭಾವ ಅನುಭವಿಸಬೇಕಾಗಿದೆ ಎಂದರು. ರೈತ, ಜನಪರ ಎನ್ನುವ ಬಿಜೆಪಿಗರಿಗೆ ಭಾಗಶಃ ಜನತೆ ಅನುಭವಿಸುತ್ತಿರುವ ಹಣದ ಅಭಾವದ ಈ ತೊಂದರೆ ಅರ್ಥವಾಗುತ್ತಿಲ್ಲವೇ ಕುಡಲೇ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಹಣ ದೊರೆಯುವಂತೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು ಅಲ್ಲದೇ ಜನರಿಗೆ ಹಣ ಪಡೆಯಲು ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಘೊಟ್ನೇಕರ ಆಗ್ರಹಿಸಿದರು.
Leave a Comment