ಹಳಿಯಾಳ:- ಚುನಾವಣೆ ಯುದ್ದ ಘೊಷಣೆಯಾಗಿದೆ ರಾಮ ಗೆಲ್ಲಬೇಕು, ರಾವಣ ಸಂಹಾರ ಆಗಬೇಕು ಹಳಿಯಾಳದ ಬಿಜೆಪಿಯಿಂದ ಸುನೀಲ್ ನಾಮಪತ್ರ ಸಲ್ಲಿಸಿ ಈ ಯುದ್ದ ಕಣಕ್ಕೆ ಧುಮುಕಿದ್ದು ಕ್ಷೇತ್ರದ ಜನತೆ ಮೋದಿಜಿಯವರ ಕೈ ಬಲಪಡಿಸಲು ಹಾಗೂ ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕರೆ ನೀಡಿದರು. ಗುರುವಾರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುನೀಲ್ ಹೆಗಡೆ ಅವರೊಂದಿಗೆ ನಾಮಪತ್ರ ಸಲ್ಲಿಸುವಾಗ ಉಪಸ್ಥಿತರಿದ್ದ ಅವರು ಬಳಿಕ ನಡೆದ ಮೆರವಣಿಗೆ ಹಾಗೂ ಬಹಿರಂಗ ಸಭೆ, ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರದಿಂದ ನಡೆದಿರೊವಷ್ಠು ಭ್ರಷ್ಠಾಚಾರ, ಅಧಿಕಾರಿಗಳಿಗೆ ಕಿರುಕುಳ, ರೈತ ಆತ್ಮಹತ್ಯೆ, ಅತ್ಯಾಚಾರ ಪ್ರಕರಣಗಳು ಎಲ್ಲಿಯೂ ನಡೆದಿಲ್ಲ ಆರ್ಥಿಕ ವ್ಯವಸ್ಥೆಯನ್ನು ದಿವಾಳಿ ಮಾಡಿರುವ ಸಿದ್ದರಾಮಯ್ಯ ಸರ್ಕಾರ ಮಾಡಿರೊವಷ್ಠು ಸಾಲ ಯಾವ ಸರ್ಕಾರವು ಮಾಡಿರುವ ಉದಾಹರಣೆಗಳಿಲ್ಲ ಎಂದು ಆರೋಪಿಸಿದ ಅವರು ಅಲ್ಲಾವುದಿನ್ ಮಾಯಾಜಾಲದಂತಿರುವ ಕಾಂಗ್ರೇಸ್ ಪಕ್ಷ ಅಭಿವೃದ್ದಿ ವಿರೋಧಿಯಾಗಿದೆ ಎಂದರು. ಟಿಪ್ಪು ಸುಲ್ತಾನ್ ಜಯಂತಿಗೆ, ಮೆರವಣಿಗೆಗೆ ಅವಕಾಶ ನೀಡುವ ಕಾಂಗೈ ಅಪ್ರತಿಮ ರಾಷ್ಟ್ರಭಕ್ತ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡದೆ ಇರುವುದು ಓಟ ಬ್ಯಾಂಕ್ ರಾಜಕಾರಣ ಮಾಡಿ ಧರ್ಮ ಒಡೆಯುವ ಕಾರ್ಯ ಮಾಡುತ್ತಿರುವ ಭ್ರಷ್ಠ ಕಾಂಗ್ರೇಸ್ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯಬೇಕಾಗಿದೆ ಎಂದರು. ರಾಜ್ಯದ ಅಭಿವೃದ್ದಿಗೆ ಕೇಂದ್ರ ಸರ್ಕಾರ 2.5 ಲಕ್ಷ ಕೋಟಿ ರೂ. ಅನುದಾನ ನೀಡಿದ್ದರು. ಆ ಬಗ್ಗೆ ಚಕಾರವೆತ್ತದ ಕಾಂಗ್ರೇಸ್ ಸರ್ಕಾರ ಕೇಂದ್ರ ನೀಡಿರುವ ಅನುದಾನ ಬಳಸಿರುವ ಲೆಕ್ಕವನ್ನು ನೀಡದೆ ಹಣ ಲೂಟಿ ಮಾಡುವಲ್ಲಿ ತೊಡಗಿದೆ ಎಂದು ಆರೋಪಿಸಿದರು. ಪ್ರತಿ ಚುನಾವಣೆಗೆ ಒಂದು ಗಿಮಿಕ್ ಮಾಡುವ ರಾಜ್ಯದ ಕಾಂಗ್ರೇಸ್ ಸರ್ಕಾರ ಹಾಗೂ ಕ್ಷೇತ್ರದ ಆರ್.ವಿ.ದೇಶಪಾಂಡೆ ಅವರು ಈ ಬಾರಿ ಸೋಲುವುದು ಖಚಿತವಾಗಿದ್ದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಹಳಿಯಾಳದಲ್ಲಿ ಪ್ರಥಮ ಬಾರಿಗೆ ಕಮಲ ಅರಳಲಿದೆ ಎಂದು ಭವಿಷ್ಯ ನುಡಿದರು. ಬಳಿಕ ಅವರು ಅಭ್ಯರ್ಥಿ ಪರ ಕೆಲವು ಭಾಗದಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಹೆಗಡೆ, ತಾಲೂಕಾಧ್ಯಕ್ಷರುಗಳಾದ ಶಿವಾಜಿ ನರಸಾನಿ, ಬಸವರಾಜ ಕಳಶೆಟ್ಟಿ, ತುಕಾರಾಮ ಮಾಂಜ್ರೇಕರ, ಮುಖಂಡರಾದ ವಿಜಯ ಬೋಬಾಟಿ, ಸಂತಾನ ಸಾವಂತ, ವಿ.ಎಮ್.ಪಾಟೀಲ್, ಸಂಜಯ ಪಾಟಿಲ್ ಮೊದಲಾದವರು ಇದ್ದರು.
Leave a Comment