ಹೊನ್ನಾವರ .ವಿಶ್ವದಾದ್ಯಂತ ತೀವ್ರ ಖಂಡನೆಗೊಳಪಟ್ಟ ಘಟನೆಯಾದ ಇತ್ತೀಚೆಗೆ ಕಾಶ್ಮೀರದ ಕಥುವಾದಲ್ಲಿ 8 ರ ಹರೆಯದ ಮುಗ್ಧ ಬಾಲೆ ಆಸಿಫಾಳನ್ನು ಅತ್ಯಾಚಾರಗೈದು ಬರ್ಬರವಾಗಿ ಕೊಲೆಮಾಡಿದ ದುಷ್ಟರನ್ನು ಪತ್ತೆ ಹಚ್ಚಿ ಗಲ್ಲು ಶಿಕ್ಷೆ ನೀಡಬೇಕೆಂದು ಎಸ್.ಎಸ್.ಎಫ್ ಸಂಘಟನೆಯವರು ಹೊನ್ನಾವರ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಪ್ರಕರಣವನ್ನು ನೆನಪಿಸಿದ ಆಸಿಫಾಳ ರೇಪ್& ಮರ್ಡರ್ ಕೇಸಿನಲ್ಲಿ ಆರೋಪಿಗಳು ಏನೂ ಅರಿಯದ ಮುಗ್ಧಬಾಲಕಿಯನ್ನು ಪೈಶಾಚಿಕವಾಗಿ ಹತ್ಯೆಗೈದಿರುವುದನ್ನು ತೀವೃವಾಗಿ ಖಂಡಿಸಿದ ಎಸ್.ಎಸ್.ಎಪ್ ಉತ್ತರಕನ್ನಡ ಜಿಲ್ಲಾಸಮಿತಿ ಹಾಗೂ ಟೊಂಕಾ ಶಾಖೆ ಈ ಅಮಾನವೀಯ ಕೃತ್ಯದ ಹಿಂದಿರುವವರು ಯಾವುದೇ ಕಾರಣಕ್ಕೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು, ಹತ್ಯೆಯಾದ ಬಾಲಕಿ ಆಸಿಫಾ ಹಾಗೂ ಅವಳ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಮತ್ತು ಮುಂದೆ ಯಾರೂ ಇಂತಹ ಪೈಶಾಚಿಕ ಕೃತ್ಯಗಳಿಗೆ ಕೈ ಹಾಕದ ರೀತಿಯಲ್ಲಿ ಆರೋಪಿಗಳಿಗೆ ಗರಿಷ್ಠ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿದರು.
ಮನವಿ ಸಲ್ಲಿಸಿದ ನಂತರ ಮಾತನಾಡಿದ ಉತ್ತರಕನ್ನಡ ಸುನ್ನಿ ಸಂಘಟನೆಗಳ ಪ್ರಧಾನ ಕಾರ್ಯದರ್ಶಿ ಎ.ಕೆ.ರಝಾ ಅಮ್ಜದ ಅವರು ಜಗತ್ತಿನಲ್ಲಿ ತಾಂಡವವಾಡುತ್ತಿರುವ ಅತ್ಯಾಚಾರ, ಕೊಲೆ,ಸುಲಿಗೆ, ಭ್ರಷ್ಟಾಚಾರ, ಭಯೋತ್ಪಾದನೆ, ಕೋಮುಗಲಭೆಗಳಿಗೆ ಶಾಶ್ವತ ಪರಿಹಾರ ನೀಡಲು ಇಸ್ಲಾಮಿನ ಕಾನೂನುಗಳ ಪಾಲನೆಯಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಎಸ್.ಎಸ್.ಎಪ್. ಉತ್ತರಕನ್ನಡ ಜಿಲ್ಲಾಧ್ಯಕ್ಷ ಆಲವಿ ತಂಬಳ, ಕಾರ್ಯದರ್ಶಿ ಪಝಲ್ ಶಿರಸಿ, ಕೋಶಾಧಿಕಾರಿ ಅನ್ಸಾರ್ ಟೊಂಕಾ, ಸದಸ್ಯರಾದ ಪಯಾಜ್, ಸಲ್ಮಾನ್, ಎಸ್.ಜೆ.ಎಮ್ ಕಾರ್ಯದರ್ಶಿ ರಝಾಕ್ ಸನದಿ ಯಲ್ಲಾಪುರ, ಸಿನಾನ್ ತಗ್ಗರಕೋಡ್, ಪಕೇರ್ ಹಂಝಾ, ಕಾಸಿಂ, ಎಸ್.ಎಸ್.ಎಪ್.ಟೊಂಕಾ ಶಾಖೆಯ ಅಧ್ಯಕ್ಷರಾದ ಮೂನಾಫ್ ಅಬ್ದುಲ್ ಸಾಬ್, ಕಾರ್ಯದರ್ಶಿ ಆಶ್ಫಾಕ್ ಸಾಬ್, ಸದಸ್ಯರಾದ ನಿಸಾರ್ ಮುಂತಾದವರು ಹಾಜರಿದ್ದರು.
Leave a Comment