ಹಳಿಯಾಳ ; ಭಾರತ ಕಮ್ಯೂನಿಷ್ಠ ಪಕ್ಷ(ಮಾಕ್ರ್ಸವಾದಿ) ಸಿಪಿಐ(ಎಮ್) ಪಕ್ಷದ ಹಳಿಯಾಳ ಜೋಯಿಡಾ ಮತಕ್ಷೇತ್ರದ ಅಭ್ಯರ್ಥಿಯಾಗಿ ಯಮೂನಾ ಗಾಂವಕರ ಶನಿವಾರ ಮಿನಿವಿಧಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಯವರಿಗೆ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಪಕ್ಷದ ವಿಧಾನ ಸಭಾ ಚುನಾವಣಾ ಸಂಚಾಲಕ ಹರೀಶ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ, ಸಹ ಸಂಚಾಲಕ ಆರ್.ಎಮ್.ಮುಲ್ಲಾ, ರಾಜೇಶ ಗಾವಡಾ ಇದ್ದರು. ನಾಮ ಪತ್ರ ಸಲ್ಲಿಸಿದ ಬಳಿಕ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಹಳಿಯಾಳ ಕ್ಷೇತ್ರದ ಸಮಾನ, ಸಮಗ್ರ ಅಭಿವೃದ್ದಿ ನನ್ನ ಗುರಿಯಾಗಿದೆ. ಕುಣಬಿ, ಅಘೋಷಿತ ಆದಿವಾಸಿಗಳಿಗಾಗಿ ಹಲವಾರು ಹೋರಾಟಗಳನ್ನು ಮಾಡಿದ್ದು ನಿರುದ್ಯೋಗಿಗಳು ಉದ್ಯೋಗಕ್ಕಾಗಿ ವಲಸೆ ಹೊಗುವಂತಹ ದುಸ್ಥಿತಿ ಕ್ಷೇತ್ರದಲ್ಲಿದ್ದು ಕೈಗಾರಿಕಾ ಮಂತ್ರಿ ದೇಶಪಾಂಡೆ ಸಾಧನೆ ಶೂನ್ಯವಾಗಿದೆ. ಪರಿಸರವಾದ ಹಾಗೂ ಕಸ್ತೂರಿ ರಂಗನ ವರದಿ ನೆಪವೊಡ್ಡಿ ಉದ್ಯಮ ತರಲಾಗುವುದಿಲ್ಲ ಎಂದು ಹೇಳುತ್ತಿರುವುದು ದುರ್ದೈವದ ಸಂಗತಿ ಎಂದರು. ಚುನಾವಣೆಗಾಗಿ ನಮ್ಮ ಹೋರಾಟವಲ್ಲ ಕೂಲಿ ಕಾರ್ಮಿಕರು, ನಿರುದ್ಯೋಗಿಗಳ ಪರ ಹಾಗೂ ಕೋಮುವಾದಿಗಳು, ಭ್ರಷ್ಠಾಚಾರಿಗಳ ವಿರುದ್ದ ನಮ್ಮ ಹೊರಾಟ ನಿರಂತರವಾಗಿ ನಡೆಯಲಿದೆ ಎಂದು ಯಮೂನಾ ಹೇಳಿದರು. ನಾಮಪತ್ರ ಸಲ್ಲಿಸುವ ಮೊದಲು ಹುತಾತ್ಮ ರೈತ ಹೊರಾಟಗಾರರಾದ ಕಾರವಾರದ ಗಣು ಮಾಬಳು ನಾಯಕ ಹಾಗೂ ಹಳಿಯಾಳದ ತೇಗ್ನಳ್ಳಿ ಗ್ರಾಮದ ಮಾರುತಿ ಗಣೇಶ ಪವಾರ ರವರಿಗೆ ಶೃದ್ದಾಂಜಲಿ ಸಲ್ಲಿಸಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರಿಗೆ ಗೌರವ ಸಲ್ಲಿಸಿ ಸಂವಿಧಾನ ಉಳಿವಿಗಾಗಿ ನಮ್ಮ ಹೋರಾಟ ಎಂಬ ಘೊಷಣೆಯಡಿ ಚುನಾವಣಾಧಿಕಾರಿ ಬಳಿ ಬಂದು ನಾಮಪತ್ರ ಸಲ್ಲಿಸಲಾಯಿತು.ಆಸ್ತಿ
ವಿವರಣೆ :- ಯಮೂನಾ ಗಾಂವಕರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸ್ವಂತ ಹೆಸರಿನಲ್ಲಿ 7ಲಕ್ಷ 73ಸಾವಿರ ರೂ. ಹಾಗೂ ಪತಿ ಅಸಿಸ್ಟಂಟ್ ಪ್ರೋಫೆಸರ್ ಸದಾನಂದ ಅವರ ಹೆಸರಿನಲ್ಲಿ 31ಲಕ್ಷ 99ಸಾವಿರ ರೂ. ಚರಾಸ್ತಿ ತೊರಿಸಿದ್ದಾರೆ. ಇನ್ನೂ ತಮ್ಮ ಹೆಸರಿನಲ್ಲಿ 8ಸಾವಿರ ರೂ. ಬೆಲೆಯ ಹಾಗೂ ಗಂಡನ ಹೆಸರಿನಲ್ಲಿ 15ಸಾವಿರ ರೂ. ಬೆಲೆ ಸ್ಥಿರಾಸ್ಥಿ ನಮೂದಿಸಿದ್ದಾರೆ. ಪ್ರಮುಖ ಅಂಶವೆಂದರೇ ಯಮೂನಾ ಅವರು ತಮ್ಮ ಹೆಸರಿನಲ್ಲಿ 50ಸಾವಿರ ರೂ. ಬೆಲೆಯ ಹಾಗೂ ಪತಿಯ ಹೆಸರಿನಲ್ಲಿ 2 ಲಕ್ಷ ರೂ. ಬೆಲೆ ಬಾಳುವ ಪುಸ್ತಕದ ಲೆಕ್ಕವನ್ನು ಪ್ರಮಾಣ ಪತ್ರದಲ್ಲಿ ನಮೂದಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.
Leave a Comment