ಹಳಿಯಾಳ : ಪಟ್ಟಣದ ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ ವಿಶೇಷ ಪೂಜೆ ಪುನಸ್ಕಾರ, ಮಹಾಭಿಷೇಕ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದೇವಿ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ, ಟ್ರಸ್ಟಿ ಸುರೇಶ ದೇಸಾಯಿ ರವರ ನೇತೃತ್ವದಲ್ಲಿ ಟ್ರಸ್ಟಿಗಳು ಗ್ರಾಮದ ಪ್ರಮುಖರು, ಹಿರಿಯರ ಉಸ್ತುವಾರಿಯಲ್ಲಿ ಪಟ್ಟಣದ ಹಾಗೂ ಹೊರಭಾಗಗಳಿಂದ ಸಾವಿರಾರು ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಹಿಳೆಯರು 2 ದಿನ ಶ್ರೀದೇವಿಗೆ ಉಡಿ ತುಂಬುವ ಮೂಲಕ ವಾರ್ಷಿಕೊತ್ಸವ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ, ಮಾಜಿ ಶಾಸಕ ಸುನೀಲ್ ಹೆಗಡೆ, ಮಾಜಿ ವಿಪ ಸದಸ್ಯ ವಿಡಿ ಹೆಗಡೆ, ಪ್ರಮುಖರಾದ ಉಮೇಶ ದೇಶಪಾಂಡೆ, ನಾರಾಯಣ ಹುನ್ಸವಾಡಕರ, ಶಿವು ಶೆಟ್ಟರ, ಚೂಡಪ್ಪಾ ಬೋಬಾಟಿ, ಉದಯ ಹೂಲಿ, ಕಸಬಾಗಲ್ಲಿ ಹಿರಿಯರಾದ ಪುಣ್ಣಪ್ಪಾ ಜಕ್ಕಪ್ಪನವರ, ಗುತ್ತೀಗೇರಿ ದೇಸಾಯಿಗಲ್ಲಿ ಹಿರಿಯರು ಹಾಗೂ ಸಾರ್ವಜನೀಕರು ಪಾಲ್ಗೊಂಡಿದ್ದರು.
Leave a Comment