ಹಳಿಯಾಳ: ಹಳಿಯಾಳ ಜೋಯಿಡಾ ಮತಕ್ಷೇತ್ರದ ಬಿಜೆಪಿ ಪಕ್ಷದ 2ನೇ ಪಾರ್ಟಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಪತ್ನಿ ಸುವರ್ಣಾ ಹೆಗಡೆ ಮಂಗಳವಾರ ಪಟ್ಟಣದ ಮಿನಿವಿಧಾನಸೌಧಕ್ಕೆ ಆಗಮಿಸಿ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಯವರಿಗೆ 2 ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಮುಖಂಡರಾದ ಕೋಮಲ ಪಂಡಿತ, ಜಯಲಕ್ಷ್ಮೀ ಚವ್ವಾಣ, ಸದಾನಂದ ಗುಪಿತ, ಸುಭಾಷ ಮುರುಕುಂಬಿ ಇದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುವರ್ಣಾ ಹಳಿಯಾಳ ಕ್ಷೇತ್ರದ ಜನ ಕಾಂಗ್ರೇಸ್ನ ದುರಾಡಳಿತ, ಕ್ಷೇತ್ರದಲ್ಲಿ ಭ್ರಷ್ಟಾಚಾರದಿಂದ ಬೇಸತ್ತಿರುವ ಜನ ಕೇಂದ್ರದ ಮೋದಿಜಿಯವರ ಆಡಳಿತವನ್ನು ಮೆಚ್ಚಿದ್ದು ಬಿಜೆಪಿ ಪಕ್ಷಕ್ಕೆ ಬೆಂಬಲಿಸುತ್ತಿದ್ದು ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಹೈಕಮಾಂಡ ಆದೇಶದ ಮೆರೆಗೆ ತಾವು ಇಂದು ನಾಮಪತ್ರ ಸಲ್ಲಿಸಿರುವುದಾಗಿ ಅವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ವಿಜಯ ಬೋಬಾಟಿ, ಅನಿಲ ಮುತ್ನಾಳೆ, ಸಂತಾನ ಸಾವಂತ, ವಿಲಾಸ ಯಡವಿ ಇದ್ದರು.
Leave a Comment