ಹಳಿಯಾಳ:- ಹಳಿಯಾಳ ಪಟ್ಟಣದ ಪ್ರಸಿದ್ದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಸಚಿವ ದೇಶಪಾಂಡೆ ಹಾಗೂ ಕುಟುಂಬದವರು ಶತಚಂಡಿ ಹೋಮ ನೆರವೆರಿಸಿದರು. ಗೋಕಾಕ, ಹಂಪಿ, ಧಾರವಾಡ, ಕುಮಟಾ ಹೀಗೆ ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ 25ಜನ ಪುರುಹೋಹಿತರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ಗಣಪತಿ ಹೋಮ, ನವಗ್ರಹ ಹೋಮ, ಸಚಿವರ ಕುಲದೇವತೆ ಶ್ರೀ ತುಳಜಾಭವಾನಿ ದೇವಿ ಹೋಮ ಸೇರಿದಂತೆ ಭಾನುವಾರ ಶತಚಂಡಿ ಹೋಮ ನೆರವೆರಿಸಲಾಯಿತು. ಹಳಿಯಾಳ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಸಚಿವ ಆರ್.ವಿ.ದೇಶಪಾಂಡೆ, ಅವರ ಪತ್ನಿ ರಾಧಾಬಾಯಿ, ಮಕ್ಕಳಾದ ಪ್ರಶಾಂತ ಹಾಗೂ ಪ್ರಸಾದ ದೇಶಪಾಂಡೆ ಹೋಮ, ಪೂಜಾ-ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರು. ಪೂಜಾ ಕಾರ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ನಿವೃತ್ತ ನೌಕಾದಳ ಕಮಾಂಡರ್ ಉಮಾಕಾಂತ ದೇಶಪಾಂಡೆ, ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಪ್ರಮುಖರಾದ ಬಾಬಾ ದೇಶಪಾಂಡೆ, ಬಂಡು ಭದ್ರಿ, ಅನಿಲ ಚವ್ವಾಣ ಇತರರು ಇದ್ದರು. 1983ರಿಂದ ಸತತ ಗೆಲುವು ಸಾಧಿಸುತ್ತಾ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ದೇಶಪಾಂಡೆ 7ನೇ ಬಾರಿ ಸ್ಪರ್ದಿಸಿದ್ದಾಗ 2008ರಲ್ಲಿ ಸೋಲು ಕಂಡಿದ್ದರು ಬಳಿಕ 2013 ರಲ್ಲಿ ಮತ್ತೇ 8ನೇ ಬಾರಿ ಸ್ಪರ್ದಿಸಿ ಗೆಲುವು ಸಾಧಿಸಿದ್ದರು ಆ ಸಂದರ್ಭದಲ್ಲಿ ಕೂಡ ಅವರ ಕುಲದೇವರಾದ ಇದೆ ತುಳಜಾಭವಾನಿ ದೇವಸ್ಥಾನದಲ್ಲಿ ಹೋಮ ನೆರವೆರಿಸಲಾಗಿತ್ತು ಈಗ ಮತ್ತೇ 9ನೇ ಬಾರಿ ಸ್ಪರ್ದಿಸಿರುವ ದೇಶಪಾಂಡೆ 8ನೇ ಬಾರಿ ವಿಧಾನಸಭೇ ಪ್ರವೇಶಿಸಲು ಎಲ್ಲಿಲ್ಲದ ಕಸರತ್ತು ನಡೆಸಿದ್ದು ದೇವರ ಮೊರೆ ಕೂಡ ಹೋಗಿರುವುದು ಕಂಡು ಬರುತ್ತಿದ್ದು ದೈವಿ ಭಕ್ತರಾದ ಅವರು ದೇವರಲ್ಲಿ ಅಪಾರ ಭಕ್ತಿ ಹೊಂದಿದ್ದಾರೆ.
Leave a Comment