ಹಳಿಯಾಳ:
ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆ.ಡಿ.ಎಸ್ ಪಕ್ಷ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಸಚಿವ ಆರ್.ವಿ.ದೇಶಪಾಂಡೆ ಪುತ್ರ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ನೀಡಿರುವ ಪತ್ರಿಕಾ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಅವರ ಹೇಳಿಕೆಯನ್ನು ಜೆ.ಡಿ.ಎಸ್ ತ್ರೀವವಾಗಿ ಖಂಡಿಸುತ್ತದೆ ಎಂದು ಕ್ಷೇತ್ರಾಧ್ಯಕ್ಷ ನಾಗೇಂದ್ರ ಜಿವೋಜಿ ಹೇಳಿದರು.
ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಅಲ್ಪ ಸಂಖ್ಯಾತರನ್ನು ಒಡೆದು ಆಳುವ ನೀತಿ ನಮ್ಮಲಿಲ್ಲ ಜಾತ್ಯಾತೀತ ಪಕ್ಷವಾಗಿರುವ ಜೆಡಿಎಸ್ನಲ್ಲಿ ಅಭಿವೃದ್ಧಿಗೆ ಮಾತ್ರ ಪ್ರಾಧಾನ್ಯತೆ ನೀಡಲಾಗುತ್ತದೆ ಎಂದರು.
ದೇಶದಲ್ಲಿ 70 ವರ್ಷದಿಂದ ಅಧಿಕಾರ ನಡೆಸಿರುವ ಕಾಂಗ್ರೇಸ್ ಹಾಗೂ ಕ್ಷೇತ್ರದಲ್ಲಿ 40 ವರ್ಷ ಅಧಿಕಾರ ಅನುಭವಿಸಿರುವ ದೇಶಪಾಂಡೆ ಅಲ್ಪ ಸಂಖ್ಯಾತರ ಬೆಂಬಲದಿಂದಲೇ ಅಧಿಕಾರ ನಡೆಸಿದ್ದಾರೆ ಇದನ್ನು ಪ್ರಶಾಂತ ದೇಶಪಾಂಡೆ ಮರೆಯಬಾರದೆಂದರು ಜಿವೋಜಿ.
ಕೈಗಾರಿಕಾ ಮಂತ್ರಿಯಾಗಿ ಜಿಲ್ಲೆಗೊಂದು ಕಾರ್ಖಾನೆ ತರಲಿಲ್ಲಾ ಯುವಕರು ಉದ್ಯೋಗಕ್ಕಾಗಿ ವಲಸೆಹೊಗುತ್ತಿದ್ದಾರೆ. ಜೆ.ಡಿ.ಎಸ್ ಸಿರೆ ಹಂಚಿ ಚುನಾವಣೆಯಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಎನ್ನುವ ಸಚಿವರು ಇವರೆಂದು ಚುವನಾವಣೆಯಲ್ಲಿ ಹಣ ಹೆಂಡ ಹಂಚಿ ಸ್ಫರ್ಧಿಸಿಲ್ಲಾ ಎಂದು ತುಳಜಾಭವಾನಿ ಮೇಲೆ ಪ್ರಮಾಣ ಮಾಡಬೇಕೆಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಯಲ್ಲಪ್ಪಾ ಹೋನ್ನೊಜಿ, ಸುಭಾನಿ ಹುಬ್ಬಳ್ಳಿ, ನಸರುಲ್ಲಾ ಖಾನ, ಪ್ರಕಾಶ ಗಿರಿ, ರಾಜು ಮುಲ್ಲಾ, ಆನಂದ ವಡ್ಡರ, ಶಬ್ಬಿರ ಮನಿಯಾರ, ಸಾಹಿದ್ ಮುಲ್ಲಾ, ರಫಿಕ ಶೇಟ, ನಿಯಾಜ ಕಿತ್ತೂರ, ಇಬ್ರಾಹಿಂ, ಗೌಸ್ ಕಿತ್ತೂರ, ಮಹಾಬೂಬ ಮುಲ್ಲಾ, ಸುಬಾನಿ ಶೇಖ, ಇದ್ದರು.
Leave a Comment