ಹಳಿಯಾಳ:- ಬುಡಕಟ್ಟು ಸಿದ್ದಿ ಸಮುದಾಯದ ಜನರಿಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ದಿಸುವ ಅವಕಾಶ ಮಾಡಿಕೊಟ್ಟು ಹಿಂದೂಳಿದ ಸಮಾಜಕ್ಕೆ ರಾಜಕೀಯವಾಗಿ ಅಭೀವೃದ್ದಿಪಡಿಸುವ ಕಾರ್ಯ ಎಮ್.ಇಪಿ ಪಕ್ಷ ಮಾಡಿದೆ ಎಂದು ಪಕ್ಷದ ರಾಜ್ಯ ವಕ್ತಾರ ಸಿಎಮ್ ಶಾಬಾಜಖಾನ್ ಹೇಳಿದರು. ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಎಮ್.ಇಪಿ ಅಭ್ಯರ್ಥಿ ಬಡೇಸಾಬ ಕಕ್ಕೇರಿ ಅವರ ಪಟ್ಟಣದಲ್ಲಿಯ ಚುನಾವಣಾ ಪ್ರಚಾರ ಕಾರ್ಯಾಲಯ ಉಧ್ಘಾಟಿಸಿ ಅವರು ಮಾತನಾಡಿದರು. ದಿನ ದಲಿತರ, ಬಡವರ, ಶ್ರಮಿಕ ವರ್ಗದವರ ಧ್ವನಿಯಾಗಿ ಕಾರ್ಯನಿರ್ವಹಿಸಲು ಎಮ್.ಇಪಿಇ ಪಕ್ಷ ಸಂಸ್ಥಾಪಕಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನವಹೇರಾ ಶೇಖ ಅವರು ಸಮಾಜಸೇವೆಯನ್ನು ಧ್ಯೇಯವಾಗಿರಿಸಿಕೊಂಡು ಚುನಾವಣೆ ನಂತರವು ರಾಜ್ಯದಲ್ಲಿ ಕಾರ್ಯನಿರ್ವಹಿಸಿ ಬಡವರ ಧನಿಯಾಗಲಿದ್ದು ಪ್ರಾಥಮಿಕ ದಿಂದ ಪದವಿಯವರೆಗೆ ಉಚಿತ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ ಎಂದು ಶಾಬಾಜಖಾನ್ ವಿವರಿಸಿದರು. ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು ಅದರಲ್ಲಿ 5 ನಾಮಪತ್ರ ತೀರಸ್ಕøತವಾಗಿವೆ, ಅಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ, ಕುಮಟಾ, ಭಟ್ಕಳ ಹಾಗೂ ಹಳಿಯಾಳ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದ್ದು ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು ನಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಶೇಷ ಆಚರಣೆಗಳನ್ನು ಹೊಂದಿರುವ ಹಳಿಯಾಳ ಕ್ಷೇತ್ರದಲ್ಲೇ ಇರುವ ಬುಡಕಟ್ಟು ಸಿದ್ದಿ ಸಮುದಾಯದವರಿಗೆ ಚುನಾವಣೆ ನಂತರವು ಎಮ್.ಇಪಿ ಪಕ್ಷದಿಂದ ಸಹಾಯ ಸಹಕಾರ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಲಾಗುವುದು ಎಂದರು. ಅಭ್ಯರ್ಥಿ ಬಡೇಸಾಬ ಮಾತನಾಡಿ 315 ಬೂತಗಳಲ್ಲಿ ಸಂಘಟನೆ ಮಾಡಲಾಗಿದ್ದು ಗ್ರಾಮೀಣ ಭಾಗದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅಲ್ತಾಫ ಶೇಖ, ಅನ್ವರ ಅರಳಿಕಟ್ಟಿ, ಇಬ್ರಾಹಿಂ ಮುಜಾವರ, ಸುಧಾ ಗಾವಡಾ, ಶಾಲಿಂಬಿ ಹಳಬ, ಇಮ್ತಿಯಾಜ ಶೇಖ, ಪರಶುರಾಮ ಬಿರ್ಜೆ ಮೊದಲಾದವರು ಇದ್ದರು.
Leave a Comment