ಹೊನ್ನಾವರ:
ನಮ್ಮ ಜಿಲ್ಲಾ ಸಮಿತಿಯವರು ನಿರ್ಣಯಿಸಿದಂತೆ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮದೇ ಸಮುದಾಯದವರಾದ ಮಂಕಾಳು ವೈದ್ಯ ಇವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸಲು ನಾವು ಪಕ್ಷಾತೀತವಾಗಿ ಬೆಂಬಲಿಸುತ್ತೇವೆ ಎಂದು ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಜಿಲ್ಲಾಧ್ಯಕ್ಷ ಸದಾನಂದ ಹರಿಕಂತ್ರ ಹೇಳಿದರು.
ಅವರು ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.ನಾವು ಯಾವುದೇ ಪಕ್ಷದಿಂದ ಬಂದವರಲ್ಲ. ಪಕ್ಷಾತೀತವಾಗಿ ನಮ್ಮ ಸಮುದಾಯದ ಎಲ್ಲರೂ ಮಂಕಾಳ ವೈದ್ಯರಿಗೆ ಬೆಂಬಲ ನೀಡುತ್ತೇವೆ. ನಮ್ಮ ಸಮುದಾಯದ ಹಿತದೃಷ್ಟಿಯಿಂದ ಮಂಕಾಳು ವೈದ್ಯರಿಗೆ ಮತ್ತೋಮ್ಮೆ ಗೆಲ್ಲಿಸಬೇಕಾಗಿದೆ. É್ಲಹರಿಕಂತ್ರ,ಮೊಗೇರ,ಅಂಬಿಗ,ಗಾಬಿತ್,ಖಾರ್ವಿ,ದಾಲ್ಚಿ ಸಮಾಜ ಸೇರಿ 40ಸಾವಿರಕ್ಕೂ ಅಧಿಕ ನಾಡದೋಣಿ ಮತ್ತು ಸಾÀಂಪ್ರದಾಯಿಕ ಮೀನುಗಾರರ ಸಮುದಾಯವಿದೆ.ನಮ್ಮಲ್ಲಿಯ ರಾಜಕೀಯ ಚಿಂತನೆಗಳು,ಒಗ್ಗಟ್ಟು ಕಡಿಮೆಯಿರುವುದರಿಂದ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಸಮುದಾಯದ ಅಭ್ಯರ್ಥಿಗೆ ಬೆಂಬಲಿಸಿದ್ದೆ ಆದರೆ ನಮ್ಮ ಸಮುದಾಯದ ಅಭ್ಯರ್ಥಿಯನ್ನು ನಿರಾಯಾಸವಾಗಿ ಗೆಲ್ಲಿಸಬಹುದು. ಈ ದೃಷ್ಟಿಯಿಂದ ಈ ಬಾರಿ ಪಕ್ಷಭೇಧÀ ಮರೆತು ಹೊನ್ನಾವರ, ಭಟ್ಕಳ, ಮುರುಡೇಶ್ವರ ಭಾಗದ ನಮ್ಮ ಸಮುದಾಯದ ನಾಯಕರು ಸೇರಿ ಮಂಕಾಳು ವೈದ್ಯರನ್ನು ಬಹುಮತದಿಂದ ಗೆಲ್ಲಿಸಿ ತರಬೇಕೆಂದು ವಿನಂತಿಸಿಕೊಂಡರು.
ಈ ಐದು ವರ್ಷದಲ್ಲಿ ಹಾಲಿ ಶಾಸಕ ಮಂಕಾಳು ವೈದ್ಯರಿಂದ ನಿಮ್ಮ ಸಮುದಾಯಕ್ಕೆ ಯಾವ ಮಟ್ಟದ ಅಭಿವೃದ್ದಿಯಾಗಿದೆ ಎಂದು ಮಾದ್ಯಮದವರ ಪ್ರಶ್ನೆ ಕೇಳಿದಾಗ ಉತ್ತರಿಸಿದ ಸದಾನಂದ ಹರಿಕಂತ್ರ ಶಾಸಕ ಮಂಕಾಳ ವೈದ್ಯರು ಹಿಂದಿನ ಯಾವುದೇ ಶಾಸಕರು ಮಾಡದ ಅಭಿವೃದ್ದಿ ಕಾರ್ಯ, ಸಹಾಯವನ್ನು ಕ್ಷೇತ್ರದ ಜನತೆಗೆ ಮಾಡಿದ್ದಾರೆ. ಸರ್ಕಾರದ ಅನೇಕ ಸೌಲಭ್ಯವನ್ನು ಒದಗಿಸಿದ್ದಾರೆ. ದೋಣಿ ತಂಗುದಾಣ, ಮೀನುಗಾರಿಕಾ ರಸ್ತೆ, ಸಮುದ್ರ ತಡೆಗೋಡೆ, ಬಂದರು ನಿರ್ಮಿಸಿದ್ದಾರೆ. ಮೀನುಗಾರರ ನಾಡದೊಣಿಗಳಿಗೆ ಸೀಮೆಎಣ್ಣೆ ಒದಗಿಸಿದ್ದಾರೆ. ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯಧನ ಒದಗಿಸಿದ್ದಾರೆ. ಮೀನುಗಾರರು ಮೀನುಗಾರಿಕೆಗೆ ತೆರಳಿದಾಗ ಮೃತಪಟ್ಟ ಕುಟುಂಬದವರಿಗೆ ಸರ್ಕಾರದಿಂದ ವೈಯಕ್ತಿಕ ಸಹಾಯಧನ ನೀಡಿದ್ದಾರೆ ಎಂದರು.
ಕಳೆದ ಚುನಾವಣೆಯಲ್ಲಿ ಇಟ್ಟ ಬÉೀಡಿಕೆಗಳನ್ನು ಈಡೇರಿಸಿದ್ದಾರೆಯೆ ಎಂದು ಪ್ರಶ್ನಿಸಿದಾಗ ಉತ್ತರಿಸಿ, ನಮ್ಮ ಸಮುದಾಯದ 99% ಬೇಡಿಕೆಗಳು ಈಡೆರಿಸಿದ್ದಾರೆ. ಈಬಾರಿಯು ಸರ್ಕಾರದ ಸೌಲಭ್ಯಗಳ ಈಡೇರಿಕೆ ಸೇರಿದಂತೆ ಹಲವಾರು ಬೇಡಿಕೆ ಮುಂದಿಟ್ಟಿದ್ದೇವೆ ಅದನ್ನು ಈಡೇರಿಸುವ ಭರವಸೆ ನಮಗಿದೆ ಎಂದರು.
ಮೀನುಗಾರ ಸಮುದಾಯದ ಮತವಿಭಜನೆಯಾಗಬಹುದೆಂಬ ವದಂತಿಗಳಿಗೆ ನಿಮ್ಮ ಪ್ರತಿಕ್ರಿಯೆ ಎನು? ಎಂದು ಕೇಳಿದ ಪಶ್ನೆಗೆ ಉತ್ತರಿಸಿದ ಸೋಮನಾಥ ಮೋಗೇರ ಮಾತನಾಡಿ ಕೆಲವರು ವಾಟ್ಸಾಪ್ಗಳಲ್ಲಿ ಈ ಕುರಿತು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ . ಈಗ ಸಾರ್ವಜನಿಕರಿಗೆ ಸತ್ಯ ಯಾವುದೆಂದು ತಿಳಿದಿದೆ. ಮತ ಪಡೆಯಲು ಯಾವುದೆ ತೊಂದರೆಯಾಗುದಿಲ್ಲ ಎಂದರು.
ನಿಮ್ಮ ಸಮುದಾಯದ ಯುವ ಮತದಾರರ ಬೆಂಬಲಪಡೆದಿದ್ದಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸೋಮನಾಥ ಮೋಗೆರ, ನಾವು ಎಲ್ಲಾ ಯುವಕರ ಬೆಂಬಲವನ್ನು ಪಡೆದಿದ್ದೆವೆ ಈಗಾಗಲೇ ನಮ್ಮ ಸಮುದಾಯದವರ ಮನೆಗಳಿಗೆ ಭೇಟಿ ನೀಡಿ ಜಾಗ್ರತಿ ಮೂಡಿಸಿ ಮಂಕಾಳ ವೈದ್ಯರನ್ನು ಗೆಲ್ಲಿಸಬೇಕೆಂದು ಕೇಳಿಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ ಮೊಗೇರ, ನಾಗೇಶ ಮೊಗೇರ, ಮಾದೇವ ಮೊಗೇರ, ಕೃಷ್ಣ ಹರಿಕಂತ್ರ, ರಾಜೇಶ ಹರಿಕಂತ್ರ, ಮಂಕಿಯ ಉಮೇಶ್ ಮೇಸ್ತ, ಪರಮೇಶ್ವರ ಮೊಗೇರ, ವಸಂತ ಹರಿಕಂತ್ರÀ ಉಪಸ್ಥಿತರಿದ್ದರು.
Leave a Comment