ಹಳಿಯಾಳ:- ಕ್ಷೇತ್ರದಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ದಿ ಕಾರ್ಯಗಳು ಈ ಅವಧಿಯಲ್ಲಿ ಆಗಿದ್ದು ಸಾವಿರಾರು ಕೋಟಿ ಅನುದಾನದ ಹೊಳೆಯನ್ನು ಹರಿಸಿರುವ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮತ್ತೊಮ್ಮೆ ಆಯ್ಕೆ ಮಾಡಿ ಕ್ಷೇತ್ರದ ಅಭಿವೃದ್ದಿಗೆ ಅವಕಾಶ ಮಾಡಿಕೊಡಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಮನವಿ ಮಾಡಿದರು. ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಅಭ್ಯರ್ಥಿ ದೇಶಪಾಂಡೆ ಪರ ನಿರಂತರ ಚುನಾವಣಾ ಪ್ರಚಾರ ನಡೆಸುತ್ತಿರುವ ಅವರು ಕ್ಷೇತ್ರದಲ್ಲಿ ಈ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಬಹುತೇಕ ಎಲ್ಲ ಅಂಶಗಳನ್ನು ಈಡೇರಿಸಲಾಗಿದೆ ಅಲ್ಲದೇ ಕಾಳಿನದಿ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದ್ದು ರೈತರ ಬಹುದಿನಗಳ ಕನಸನ್ನು ನನಸು ಮಾಡಲಾಗಿದೆ ಎಂದರು. ಈ ಭಾಗದಲ್ಲಿ ಮತ್ತೇ ಅಭೀವೃದ್ದಿ ಕಾಣಬೇಕಾದರೇ ಹಿರಿಯರು, ಪ್ರಭಾವಿಗಳಾದ ಸಚಿವ ದೇಶಪಾಂಡೆ ಅವರನ್ನೇ ಆಯ್ಕೆ ಮಾಡುವಂತೆ ಮನವಿ ಮಾಡಿದರು. ಅಲ್ಲದೇ ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಮುಖಂಡರಾದ ಟಿಕೆ ಗೌಡಾ, ಬಿಡಿ ಚೌಗಲೆ, ವಾಮನ ಮಿರಾಶಿ, ಅನಿಲ ಚವ್ವಾಣ, ಸಂಜು ಮಿಶಾಳೆ ಮೊದಲಾದವರು ಇದ್ದರು.
Leave a Comment