ಹಳಿಯಾಳ:- ಜೈನ ಧರ್ಮಕ್ಕೆ ಅಗೌರವ ಉಂಟು ಮಾಡುವ ಪದ ಬಳಸಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕೂಡಲೇ ಜೈನ ಸಮಾಜದ ಕ್ಷಮೆ ಕೊರಬೇಕೆಂದು ಹಳಿಯಾಳದ ಜೈನ ಸಮುದಾಯ ಆಗ್ರಹಿಸಿದೆ. ತಾಲೂಕಿನ ತೇರಗಾಂವ ಹಾಗೂ ಹವಗಿ ಗ್ರಾಮದ ಜೈನ ಧರ್ಮಿಯರು ಪ್ರತಿಭಟನಾ ಮೇರವಣಿಗೆ ಮೂಲಕ ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಆಗಮಿಸಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು. ಸಮಾಜದಲ್ಲಿ ಸದಾ ಶಾಂತಿ ಸಮಾನತೆಯನ್ನು ಬಯಸುವ ಸರ್ವಜ್ಞ ಪ್ರಣೀತವಾದ ಜೈನ ಧರ್ಮಕ್ಕೆ ರಾಜಕೀಯ ಇಚ್ಚಾಶಕ್ತಿಯ ಮೆರೆಗೆ ಅವಹೇಳನ ಪದ ಬಳಸಿ ದಿಗಂಬರತ್ವಕ್ಕೆ ಅವಮಾನ ಮಾಡಿರುವ ಅನಂತಕುಮಾರ ಹೆಗಡೆ ನಡೆ ಸರಿಯಾದುದಲ್ಲ ಕೂಡಲೇ ಅವರು ತಮ್ಮ ಮಾತುಗಳಿಗೆ ಕ್ಷಮೆ ಯಾಚಿಸಿ ಇನ್ನೂ ಮುಂದೆ ತಮ್ಮ ನಡೆ-ನುಡಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಧರಣೇಂದ್ರ ಶಾಸ್ತ್ರೀ, ಮುದಕಪ್ಪಾ ಮುನವಳ್ಳಿ, ಬಸವರಾಜ ಲಕ್ಕನಗೌಡರ, ಅಜಿತ ಅಂಬಿಪ್ಪಿ, ಶಾಂತಿನಾಥ ಚಿನಗಿ, ಗುಂಡು ಲಕ್ಕನಗೌಡರ, ಶಾವಂತ ಸಿಗೆಹಳ್ಳಿ, ಗೋಪಾಲ ಧೂಳಿ ಮೊದಲಾದವರು ಇದ್ದರು.
Leave a Comment