ಹಳಿಯಾಳ:- ಜಾತಿ, ಧರ್ಮ ಆದಾರಿತವಾಗಿ ರಾಜಕಾರಣ ಮಾಡುತ್ತಿರುವ ಕಾಂಗ್ರೇಸ್ ಪಕ್ಷ ಮುಕ್ತ ಭಾರತ ನಿರ್ಮಾಣವಾದರೇ ಮಾತ್ರ ಭಾರತ ದೇಶ ವಿಕಾಸ ಹೊಂದಲು ಸಾಧ್ಯವೆಂದು ಮಹಾರಾಷ್ಟ್ರ ಸರ್ಕಾರದ ಸಹಕಾರಿ ಮತ್ತು ಜವಳಿ ಖಾತೆ ಸಚಿವ ಸುಭಾಷ್ ದೇಶಮುಖ ಹೇಳಿದರು. ತಾಲೂಕಿನ ಮುರ್ಕವಾಡ ಜಿ.ಪಂ ಕ್ಷೇತ್ರದ ಮುರ್ಕವಾಡ ಗ್ರಾಮದಲ್ಲಿ ನಡೆದ ಬಿಜೆಪಿ ಗ್ರಾಮೀಣ ಮಟ್ಟದ ಸಮಾವೇಶದಲ್ಲಿ ಹಳಿಯಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪರವಾಗಿ ಬೈಕ್ ರ್ಯಾಲಿಯಲ್ಲಿ ಹಾಗೂ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಬಳಿಕ ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಮೊದಲು ಯುದ್ದಗಳು ಶಸ್ತ್ರಗಳ ಮೂಲಕ ನಡೆಯುತ್ತಿದ್ದವು ಈಗ ಬಂದಿರುವ ಈ ಚುನಾವಣಾ ಯುದ್ದದಲ್ಲಿ ಮತದಾರರು ಬಟನ್ ಒತ್ತುವುದರ ಮೂಲಕ ಬಿಜೆಪಿಯನ್ನು ಚುನಾವಣಾ ಯುದ್ದದಲ್ಲಿ ಗೆಲ್ಲಿಸಬೇಕೆಂದರು. ಮೋದಿಜಿಯವರು ಎಂದಿಗೂ ಜಾತಿ, ಮತ, ಧರ್ಮ ಆಧಾರಿತ ರಾಜಕಾರಣ ಮಾಡಿಲ್ಲ ಎಂದಿಗೂ ಅವರು ಆ ಬಗ್ಗೆ ಮಾತನಾಡುವುದೆ ಇಲ್ಲ ಬದಲಾಗಿ ಕೇವಲ ದೇಶದ ವಿಕಾಸ ಸರ್ವತೋಮುಖ ಅಭಿವೃದ್ದಿ ಪ್ರಪಂಚದಲ್ಲಿ ಭಾರತ ದೇಶವನ್ನು ಪವರ್ಫುಲ್ ದೇಶವನ್ನಾಗಿ ಮಾಡುವುದೇ ಅವರ ಗುರಿಯಾಗಿದ್ದು ಸಬ್ ಕಾ ಸಾತ್ ಸಬಕಾ ವಿಕಾಸ ಘೊಷಣೆಯಡಿ ದಿನದ 18 ತಾಸು ಕಾರ್ಯ ನಿರ್ವಹಿಸುತ್ತಿರುವ ಅವರು ಎಲ್ಲರಿಗೂ ಮಾದರಿಯಾಗಿದ್ದು ಕರ್ನಾಟಕ ಹಾಗೂ ಹಳಿಯಾಳ ಅಭಿವೃದ್ದಿಯಾಗಬೇಕಾದರೇ ಇಲ್ಲಿಂದ ಕಾಂಗ್ರೇಸ್ ಪಕ್ಷವನ್ನು ತೊಲಗಿಸಬೇಕೆಂದು ಕರೆ ನೀಡಿದರು. ಬಳಿಕ ಅವರು ತೇರಗಾಂವ ಜಿಪಂ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಅಭ್ಯರ್ಥಿ ಸುನೀಲ್ ಪತ್ನಿ ಸುವರ್ಣಾ ಹೆಗಡೆ, ಮುಖಂಡರಾದ ಅಪ್ಪಾರಾವ ಪುಜಾರಿ, ನಾಗರಾಜ ಗೌಡಾ, ಶ್ರೀಕಾಂತ ಸೊನಾರ, ಸುಭಾಷ ಪೆಂಟರ್, ರಾಜು ಸಡೇಕರ, ಈರಣ್ಣಾ ನಾವಲಗಿ, ಜಯಲಕ್ಷ್ಮೀ ಚವ್ವಾಣ, ಬಾಬುರಾವ ಗೌಡಾ, ರವಿ ಕಲಾಲ, ಮೋಹನ, ಅರುಣ ಗೌಡಾ, ಶ್ರೀನಾಥ ಪಾಟೀಲ್, ಮೋಹನ ಇನ್ನಿತರರು ಇದ್ದರು.
Leave a Comment