ಹೊನ್ನಾವರ : ತಾಲೂಕಿನ ಗೇರಸೊಪ್ಪಾ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಶಾಸಕ ಮಂಕಾಳು ವೈದ್ಯರಿಗೆ ಬಹಿರಂಗ ಪತ್ರ ಬರೆದು ಕಳಿಸಿದ್ದಾರೆ. ತಮ್ಮ ಶಾಸಕತ್ವದ ಅವಧಿಯಲ್ಲಿ ಸರಕಾರಿ ಪ್ರೌಢಶಾಲೆ ಗೇರಸೊಪ್ಪಾದ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿದ್ದು ತಮ್ಮ ಯಾವುದೇ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ತಿಳಿಸಿದ್ದಾರೆ.
ಮುಖ್ಯವಾಗಿ ಶಾಸಕರ ಬೆಂಬಲಿಗರಾದ ಗೋವಿಂದ ಎಸ್.ನಾಯ್ಕ ಹಾಗೂ ರಾಘು ನಾಯ್ಕರು ಶಾಲಾ ಆವರಣದ ಮಣ್ಣು ತೆಗೆದು ಹೈ ವೋಲ್ಟೆಜ್ನ ಲೈಟ್ ಕಂಬ ಶಾಲೆಯ ಮೇಲೆ ಬೀಳುವ ಸ್ಥಿತಿ ನಿರ್ಮಿಸಿದ್ದಾರೆ. ಈ ಕುರಿತು ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೇ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಪವನ ಮಂಜುನಾಥ ಹೆಗಡೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಆ ಶಾಲೆಯ ಇಂಗ್ಲೀಷ್ ಶಿಕ್ಷಕಿ ಸವಿತಾರವರು ಒತ್ತಡ ಹೇರಿದ್ದರು. ಈ ಕುರಿತು ತನಿಖೆ ಮಾಡಿಲ್ಲ. ವಿದ್ಯಾರ್ಥಿ ಕುಟುಂಬಕ್ಕೆ ಯಾವುದೇ ನ್ಯಾಯ ಒದಗಿಸಿಲ್ಲ. ಆದ್ದರಿಂದ ಆ ಶಾಲೆಯ ಹಳೆ ವಿದ್ಯಾರ್ಥಿಗಳು ವೈದ್ಯರಿಗೆ ಮತ ಹಾಕುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Leave a Comment