ಹಳಿಯಾಳ:-
ರಾಜಕೀಯ ಹೈವೊಲ್ಟೆಜ್ ಕ್ಷೇತ್ರ ಹಳಿಯಾಳದಲ್ಲಿ ತನ್ನ ಅಸ್ತಿತ್ವ ಪಡೆದುಕೊಳ್ಳಲು ದಶಕಗಳಿಂದ ಹೆಣಗಾಡುತ್ತಿದ್ದ ಬಿಜೆಪಿ ಪಕ್ಷ ಈ ಬಾರಿ ಮೊದಿ ಅಲೆಯಲ್ಲಿ ಮೇಲೆಳಬಹುದೇ ? ಅಥವಾ ತನ್ನದೇ ಆದ ರಾಜಕೀಯ ವರ್ಚಸ್ಸು ಹೊಂದಿರುವ ಕಾಂಗ್ರೇಸ್ನ ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರು ಕಡಿಮೆ ಅಂತರದಲ್ಲಿಯಾದರೂ ಗೆಲುವು ಸಾಧಿಸಬಹುದೇ ? ಒಟ್ಟಾರೆ ಹಳಿಯಾಳ ಚಿತ್ರಣ ಸಮಬಲ ಹೋರಾಟ ಕಾಣಸಿಗುತ್ತಿದ್ದು ಗುಟ್ಟು ಬಿಟ್ಟುಕೊಡದ ಮತದಾರನ ಮನದಾಳ ಮಾತ್ರ ದಿ.15ರಂದೇ ಗೊತ್ತಾಗಲಿದೆ. ಕಳೆದ ಒಂದು ತಿಂಗಳಿಂದ ಹಳಿಯಾಳ ಕ್ಷೇತ್ರದಲ್ಲಿ ರಾಜಕೀಯದ್ದೇ ಸದ್ದು ಅಭ್ಯರ್ಥಿಗಳು, ಕಾರ್ಯಕರ್ತರು, ಮುಖಂಡರ ಪ್ರಚಾರದ ಅಬ್ಬರ ಕಾಂಗ್ರೇಸ್ ನಾವು ಸಾಕಷ್ಟು ಅಭಿವೃದ್ದಿ ಮಾಡಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದಿಂದ ಹಳಿಯಾಳದಲ್ಲಿ ಆದ ಅಭಿವೃದ್ದಿ, ಕಾಳಿನದಿ ನೀರಾವರಿ ವಿಷಯವನ್ನು ಒಟ್ಟೂ ಅಭಿವೃದ್ದಿ ಮಂತ್ರ ಜಪಿಸುತ್ತಾ ದೇಶಪಾಂಡೆ ಅವರು ತಮ್ಮ 9ನೇ ಬಾರಿಯ ಚುನಾವಣೆ ಆಟ ಆಡಿದ್ದು ಮೊದಿ ಅಲೆಗೆ ಅವರು ತರಗುಟ್ಟಿರುವುದು ಅಲ್ಲದೇ ಕಾಂಗ್ರೇಸ್ ನೆಚ್ಚಿಕೊಂಡಿರುವ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಮತಗಳು ಹರಿದು ಹಂಚಿ ಹೊದಲ್ಲಿ ಅವರ ಗೆಲುವಿಗೆ ತೊಡಕಾಗಲಿರುವುದು ಅಷ್ಟೆ ಸತ್ಯವಾಗಿದೆ. ಇನ್ನೂ ಹಿಂದುತ್ವದ ಅಜೆಂಡಾ, ಮೊದಿ ಅಲೆಯಲ್ಲಿ ಹಳಿಯಾಳ ಕ್ಷೇತ್ರವನ್ನು ಹುಚ್ಚೆಬ್ಬಿಸುವಂತೆ ಮಾಡಿರುವ ಮಾಜಿ ಶಾಸಕ ಸುನೀಲ್ ಹೆಗಡೆ ಹಳಿಯಾಳ ಕ್ಷೆತ್ರದಲ್ಲಿ ಸದಾ 3ನೇ ಸ್ಥಾನದಲ್ಲಿರುತ್ತಿದ್ದ ಬಿಜೆಪಿಯ ಕಮಲವನ್ನು ಕ್ಷೇತ್ರದಲ್ಲಿ ಅರಳಿಸಲೇಬೇಕೆಂದು ಪಣತೊಟ್ಟು ನಿಂತು ಹಿಂದುತ್ವ ಹಾಗೂ ಮೋದಿ ಹೆಸರು ಜಪಿಸುತ್ತಾ ತಮ್ಮ ಅಗ್ರೇಸ್ಸಿವ್ ಭಾಷಣದ ಮೂಲಕ ತನ್ನಾ ಕಟ್ಟಾ ವಿರೋಧಿ ಕಾಂಗ್ರೇಸ್ಸನ ಆರ್.ವಿ.ದೇಶಪಾಂಡೆ ಅವರ ಕಾಂಗ್ರೇಸ್ಸನ ಭದ್ರಕೊಟೆಗೆ ಲಗ್ಗೆ ಹಾಕಿ ಮತ ಕಬಳಿಸುವಲ್ಲಿ ಸಫಲವಾಗಿರುವುದು ಕಂಡು ಬಂದಿದೆ. ಅಲ್ಲದೇ ಬಹುತೇಕ 60ರಿಂದ 80% ಯುವ ಮತದಾರರು ಮೊದಿ ಮೊಡಿಗೆ ಒಳಗಾಗಿದ್ದು ಬಿಜೆಪಿ ಪರ ಮತ ಚಲಾಯಿಸಿದ್ದಾರೆನ್ನಲಾಗಿದೆ ಹಾಗೂ ಈ ಬಾರಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತ ಗಳಿಸುವಲ್ಲಿ ಬಿಜೆಪಿಯೂ ಸ್ವಲ್ಪಮಟ್ಟಿಗೆ ಸಫಲವಾಗಿದೆ ಎನ್ನುವುದು ಕ್ಷೇತ್ರದ ಜನತೆಯ ಮಾತಾಗಿದ್ದು ಹೀಗೆನಾದರೂ ಆಗಿದ್ದರೇ ಮೋದಿ ಅಲೆ ಎಲ್ಲೆಡೆ ಕೆಲಸ ಮಾಡಿದ್ದರೇ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಮಲ ಅರಳುವುದಂತೂ ಗ್ಯಾರಂಟಿ ಆಗಿದೆ. ಒಟ್ಟೂ ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೇಸ್ ನಡುವೆ ನೇರಾ ನೇರ ಹಣಾಹಣಿ ನಡೆದಿದ್ದು ಸಮಬಲ ಹೋರಾಟ ನಡೆದಿದ್ದು ಇಲ್ಲಿ ಯಾರೇ ಗೆದ್ದರೂ ಅತಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬುದು ಕ್ಷೇತ್ರದ ಜನತೆ ಮಾತಾಗಿದೆ. ಇನ್ನೂ ಜೆಡಿಎಸ್ ಅಭ್ಯರ್ಥಿ ಕೆ.ಆರ್.ರಮೇಶ, ಪಕ್ಷೇತರ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಅವರು ಪಡೆಯುವ ಮತಗಳ ಆಧಾರದ ಮೇಲೆ ದೇಶಪಾಂಡೆ ಹಾಗೂ ಹೆಗಡೆ ಸೋಲು ಗೆಲುವನ್ನು ಪರಾಮರ್ಶಿಸಲಾಗುತ್ತಿದ್ದು ಕಾಂಗ್ರೇಸ್ನ ನೆಚ್ಚಿನ ಓಟಬ್ಯಾಂಕ್ ಮುಸ್ಲಿಂ ಸಮುದಾಯದ ಮತಗಳನ್ನು ಜೆಡಿಎಸ್ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಪಡೆದರೇ ಬಿಜೆಪಿ ಗೆಲುವಿನ ನಗೆ ಬಿರಲಿದೆ ಎನ್ನುವುದು ಹಳಿಯಾಳ ರಾಜಕೀಯದಲ್ಲಿ ಕೆಳಿ ಬರುತ್ತಿರುವ ಮಾತಾಗಿದೆ.
Leave a Comment