ಹಳಿಯಾಳ:- ಸಿರೆ ಪಕ್ಷ ಎಂದೇ ಪ್ರತಿಪಕ್ಷಗಳಿಂದ ಪ್ರತಿಸಲ ಟೀಕೆಗೆ ಒಳಗಾಗುತ್ತಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಆರ್.ರಮೇಶ ಕೇವಲ 7209 ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದು ಭಾರಿ ಮುಖಭಂಗ ಅನುಭವಿಸಿದ್ದಾರೆ.
ಮೂಲತಃ ಬೆಂಗಳೂರಿನ ಕೆ.ಆರ್.ರಮೇಶ ಓರ್ವ ರಿಯಲ್ ಎಸ್ಟೆಟ್ ಉದ್ಯಮಿಯಾಗಿದ್ದು ಹಳಿಯಾಳದಲ್ಲಿ 2016 ರಲ್ಲಿ ಹಳಿಯಾಳದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷವನ್ನು ಸೇರಿದ್ದರು ಅಲ್ಲದೇ ಅವರು ನಡೆಸುವ ಅನೇಕ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಸೀರೆ ಹಂಚುವುದು ಪ್ರಮುಖ ಕಾರ್ಯಕ್ರಮಗಳಾಗಿರುತ್ತಿದ್ದವು. ಈ ಕಾರಣದಿಂದಲೇ ಪ್ರತಿಪಕ್ಷಗಳು ಹಳಿಯಾಳ ಜೆಡಿಎಸ್ ಸೀರೆ ಪಕ್ಷ ಎಂದು ಲೇವಡಿ ಮಾಡುತ್ತಿದ್ದರು. ಹಳಿಯಾಳ ಕ್ಷೇತ್ರದಲ್ಲಿ ಜೆಡಿಎಸ್ನ ಹಿರಿಯ ರಾಜಕಾರಣಿ ದಾಂಡೇಲಿಯ ಟಿ.ಆರ್.ಚಂದ್ರಶೇಖರ ಅವರಿಗೆ ಸೀಗಬೇಕಾದ ಜೆಡಿಎಸ್ ಎಮ್ಎಲ್ಎ ಟಿಕೆಟ್ನ್ನು ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ ಹಾಗೂ ಇತರರ ಸಹಕಾರದಿಂದ ಅನೇಕ ಲಾಬಿ ನಡೆಸಿ ತಮಗೆ ಪಡೆದುಕೊಂಡು ಬಂದ ರಮೇಶ ಒಮ್ಮೆ ಹಳಿಯಾಳದಲ್ಲಿ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನವನ್ನು ಮಾಡಿದ್ದರು ಆದರೇ ಅಂದು ಬಂದ ಜನ ಸೀರೆ, ಪ್ಯಾಂಟ್ಶರ್ಟ್, ಒಂದು ದಿನದ ಸಂಬಳದ ಆಸೆಗೆ ಬಂದಿದ್ದರೆನ್ನುವುದು ಆ ದಿನ ಹಲವರು ಮಾಡಿದ ವಿಡಿಯೋಗಳಲ್ಲಿ ಬಹಿರಂಗಗೊಂಡಿತ್ತು ಅದು ಇಂದು ಮತದಾನದ ಮೂಲಕ ಬಹಿರಂಗಗೊಂಡಿದ್ದು ಈ ಹಿಂದೆ ಮಾಜಿ ಶಾಸಕ ಸುನೀಲ್ ಹೆಗಡೆ ಒಮ್ಮೆ ಜೆಡಿಎಸ್ ಪಕ್ಷವನ್ನು ಕ್ಷೇತ್ರದಲ್ಲಿ ಗೆಲ್ಲಿಸಿದ್ದರೇ ಇನ್ನೊಮ್ಮೆ 46ಸಾವಿರ ಮತ ಪಡೆದು ಕೇವಲ 4600 ಮತಗಳ ಅಂತರದಿಂದ ಸೋತಿದ್ದರು ಆದರೇ ಹಿರಿಯರನ್ನು ತಪ್ಪಿಸಿ ಹಣದ ಲಾಬಿ ನಡೆಸಿ ಟಿಕೆಟ್ ತಂದ ಟಿ.ಆರ್. ರಮೇಶ ವಿರುದ್ದ ಕ್ಷೇತ್ರದಲ್ಲಿ ಭಾರಿ ಅಪಸ್ವರ ಕೇಳಿ ಬಂದಿತ್ತು ಅಲ್ಲದೇ ಟಿ.ಆರ್. ಚಂದ್ರಶೇಖರ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸಿದರು. ಜೆಡಿಎಸ್ ಪಕ್ಷದಲ್ಲಿನ ಹಿರಿಯರು, ಹಳೆಯ ಕಾರ್ಯಕರ್ತರು, ಮುಖಂಡರನ್ನು ಗಣನೆಗೆ ತೆಗೆದುಕೊಳ್ಳದೆ ಏಕಾಧಿಪತ್ಯ ನಡೆಸುತ್ತಿದ್ದರಿಂದ ಬೇಸರಗೊಂಡ ಅವರು ರಮೇಶನನ್ನು ತೊರೆದಿದ್ದರು ತನ್ನದೆ ಶೈಲಿಯಲ್ಲಿ ರಾಜಕಾರಣ ಮಾಡಲು ಹೊರಟ ರಮೇಶಗೆ ಕೆಲವು ಮತಗಟ್ಟೆಗಳಲ್ಲಿ 1 ಓಟು ಬಂದಿಲ್ಲ ಮಾತ್ರವಲ್ಲದೇ ಹಲವು ಕಡೆಗಳಲ್ಲಿ 1-2-3 ಈ ರೀತಿ ಒಂದಂಕಿಯ ಮತಗಳನ್ನು ಪಡೆದು ಒಟ್ಟಾರೆ ಕೇವಲ 7209 ಮತ ಪಡೆದು ಠೇವಣಿಯನ್ನು ಕಳೆದುಕೊಂಡು ಭಾರಿ ಮುಖಭಂಗ ಅನುಭವಿಸಿದ್ದಾರೆ. ಇನ್ನುಳಿದಂತೆ ಪಕ್ಷೇತರ ಟಿ.ಆರ್.ಚಂದ್ರಶೇಖರ-2629, ಇಲಿಯಾಸ ಕಾಟಿ-411, ಯಮುನಾ ಗಾಂವಕರ-ಸಿಪಿಐಎಮ್-1127, ಎಮ್ಇಪಿ-ಬಡೇಸಾಬ ಕಕ್ಕೇರಿ-913, ಜಹಾಂಗೀರಬಾಬಾಖಾನ್-ಐಎನ್ಸಿಪಿ-559, ಶಿವಸೇನಾ-ಶಂಕರ ಫಾಕ್ರಿ-546 ಕೂಡ ಠೇವಣಿಯನ್ನು ಕಳೆದುಕೊಂಡಿದ್ದಾರೆ. ಪಕ್ಷೇತರರು ವಿವಿಧ ಪ್ರಾದೇಶಿಕ ಪಕ್ಷದವರಿಗಿಂತ ನೋಟಾ 1275 ಮತ ಚಲಾವಣೆಯಾಗಿರುವುದು ಗಮನಾರ್ಹವಾಗಿದೆ.
Leave a Comment