ಹೊನ್ನಾವರ: ಭಟ್ಕಳ-ಹೊನ್ನಾವರ ಹಾಗೂ ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿದೆ.ಈ ಹಿನ್ನಲೆ À ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.
ಭಟ್ಕಳದ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ ಹಾಗೂ ಕುಮಟಾ ಬಿಜೆಪಿ ಅಭ್ಯರ್ಥಿ ದಿನಕರ್ ಶೆಟ್ಟಿ ಗೆಲುವಿನ ಫಲಿತಾಂಶ ಹೊರ ಬೀಳುತ್ತಲೇ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಟೆಂಪೋ,ರಿಕ್ಷಾ,ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ ಪಟ್ಟಣದ ಶರಾವತಿ ವೃತ್ತದಲ್ಲಿ ಜಮಾವಣೆಗೊಂಡರು. ಶರಾವತಿ ವೃತ್ತ ಅಕ್ಷರಸಹಃ ಕೇಸರಿಮಯವಾಗಿತ್ತು. ಎಲ್ಲಿ ನೋಡಿದರಲ್ಲಿ ಹನುಮಾನ್,ಶಿವಾಜಿ ಹಾಗೂ ಕಮಲ ಭಾವುಟಗಳು ರಾರಾಜಿಸುತ್ತಿದ್ದವು. ವಿಜಯಶಾಲಿಯಾದ ಅಭ್ಯರ್ಥಿಗಳ ಪರ ಜಯಘೋಷ ಕೂಗಿದರು. ಜೈ ಬಿಜೆಪಿ, ಜೈ ಮೋದಿ ಎಂದು ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ,ಸಿಹಿ ಹಂಚಿ ಬಿಜೆಪಿ ಗೆಲುವಿನ ಸಂಭ್ರಮ ಆಚರಿಸಿದರು. ಮತ ಭಟ್ಕಳದ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ ಗೆಲವು ಘೋಷಣೆಯಾಗುತ್ತಿದ್ದಂತೆ ಅವರು ಕೇಂದ್ರ ಸಚಿವ ಅನಂತಕುಮಾರ್ ಜೊತೆಗೂಡಿ ಹೊನ್ನಾವರ ಪಟ್ಟಣದ ಗೆರುಸೊಪ್ಪಾ ವೃತ್ತದ ಬಳಿ ಅಪಾರ ಕಾರ್ಯಕರ್ತರೊಂದಿಗೆ ವಿಜಯೋತ್ಸವದಲ್ಲಿ ಪಾಲ್ಗೊಂಡರು.ಈ ಸಮಯದಲ್ಲಿ ನೂತನ ಶಾಸಕ ಸುನಿಲ್ ನಾಯ್ಕ ಅವರಿಗೆ ಹಾರ ಹಾಕಿ ಸಂಭ್ರಮದಿಂದ ಎತ್ತಿಕೊಂಡಾಡಿ ಕುಣಿದು ಕುಪ್ಪಳಿಸಿದರು.ನಂತರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂಧರ್ಬದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು,ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
Leave a Comment