ಹೊನ್ನಾವರ:
ಸಂಸ್ಕ್ರತ ಭಾರತಿ, ಸಂಸ್ಕ್ರತ ವಿಶ್ವ ವಿದ್ಯಾಲಯ ಬೆಂಗಳೂರು ಹಾಗೂ ಸಿಲೆಕ್ಟ್ ಫೌಂಡೆಶನ್ ಗೆರುಸೊಪ್ಪಾ ಇವರ ಸಹಯೋಗದಲ್ಲಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕ್ರತ ಭಾಷಾ ಭೋದನ ವರ್ಗ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿತಿಯಾಗಿ ಆಗಮಿಸಿದ್ದ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಮಾತನಾಡಿ, ಭಾಷೆ ಎನ್ನುವುದು ಮನುಷ್ಯನ ಮೊದಲ ಸಂಸ್ಕ್ರತಿ, ಸಂಸ್ಕ್ರತ ಎನ್ನುವುದು ಪಕ್ವಗೊಂಡ ಭಾಷೆ,ನಾವು ನಮ್ಮ ತಾಯಿ ಭಾಷೆಯನ್ನು ಪೀತಿಸುವುದರ ಜೊತೆಗೆ ಎಲ್ಲಾ ಭಾಷೆಯನ್ನು ಪ್ರೀತಿಸಬೇಕು ಎಂದರು.
ನಗರಬಸ್ತಿಕೇರಿ ಗ್ರಾಮ ಪಂಚಾಯತ್ ಅದ್ಯಕ್ಷೆ ಅನ್ನಪೂರ್ಣಾ ಶಾಸ್ತ್ರಿ ಮಾತನಾಡಿ ಸಂಸ್ಕ್ರತ ಎನ್ನುವುದು ಉತ್ತಮ ಸಂಸ್ಕಾರವಾಗಿದೆ. ಪುನಃ ಸನಾತನ ಧರ್ಮದ ಸ್ಥಾಪನೆಯಾಗಬೇಕೆಂದರೆ ಇಂತಹ ಸಂಸ್ಕ್ರತ ಶಿಬಿರಗಳು ಹೆಚ್ಚು ಹೆಚ್ಚು ನಡೆಯುತ್ತಲಿರಬೇಕು. ಸಂಸ್ಕ್ರತ ಕಲಿಯುವುದರ ಒಟ್ಟಿಗೆ ಒಳ್ಳೆಯ ಸಂಸ್ಕಾರ ಕಲಿಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ವಿಜಿ ಹೆಗ್ಡೆ ಗುಡ್ಗೆ ಮಾತನಾಡಿ ಸಂಸ್ಕ್ರತ ಭಾಷೆ ಸುಲಭ ಭಾಷೆ, ಅತಿ ಕಡಿಮೆ ಅವಧಿಯಲ್ಲಿ ಕಲಿಯಬಹುದು, ಇದನ್ನು ಕಲಿತರೆ ಯಾವುದೇ ರೀತಿಯಲ್ಲಾದರು ಪ್ರಯೋಜನವಾಗುತ್ತದೆ. ದೈನಂದಿನ ಸಂಭಾಷಣೆಯಲ್ಲಿ ಜನಸಾಮನ್ಯರು ಸಂಸ್ಕ್ರತ ಕಲಿಯಬಹುದು,ಬಂಗಾರಮಕ್ಕಿಯಲ್ಲಿ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ನಮ್ಮ ಅದೃಷ್ಟವೇ ಸರಿ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಯಿಂದ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
Leave a Comment