• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ಗೋವಧಾಲಯ ಇಲ್ಲ ಬೇಕಿದ್ದರೇ ಡಿಸಿಗೆ ದೂರು ನೀಡಿ- ಪುರಸಭೆಗೆ ಬಂದು ಆಮ್ನೇ ಸಾಮ್ನೆ ಚರ್ಚೆ ಮಾಡಿ-ಮಾಜಿ ಶಾಸಕ ಸುನೀಲ್ ಹೆಗಡೆಗೆ ಪುರಸಭೆ ಸದಸ್ಯ ಸುರೇಶ ತಳವಾರ ಸವಾಲ್

May 25, 2018 by Yogaraj SK Leave a Comment

ಹಳಿಯಾಳ:- ಹಳಿಯಾಳದಲ್ಲಿ ಎಲ್ಲಿಯೂ ಯಾವುದೇ ಗೋ ವಧಾಲಯ ಕಾರ್ಯನಿರ್ವಹಿಸುತ್ತಿಲ್ಲ ಈ ಬಗ್ಗೆ ಮಾಜಿ ಶಾಸಕ ಸುನೀಲ್ ಹೆಗಡೆ ತಾಕತ್ತಿದ್ದರೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿ ಹಾಗೂ ಪುರಸಭೆಗೆ ಬಂದು “ಆಮ್ನೆ ಸಾಮ್ನೆ”(ಎದುರು-ಬದುರು) ಚರ್ಚೆ ಮಾಡಲಿ ಹೊರತು ಹೇಳಿಕೆ ಕೊಡುವುದನ್ನು ಬಿಡಲಿ ಎಂದು ಪುರಸಭೆ ಹಿರಿಯ ಸದಸ್ಯ ಸುರೇಶ್ ತಳವಾರ ಸವಾಲ್ ಎಸೆದಿದ್ದಾರೆ. ಪಟ್ಟಣದ ಪುರಸಭೆಯ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸುನೀಲ್ ಹೆಗಡೆ ನೀಡಿದ ಪತ್ರಿಕಾ ಹೇಳಿಕೆಗಳಿಗೆ ಆಕ್ರೋಶದಿಂದ ಪ್ರತ್ಯುತ್ತರ ನೀಡುತ್ತಾ ಪುರಸಭೆಯಲ್ಲಿ ಸದಸ್ಯರು ದಲಾಲಗಿರಿ ಮಾಡುತ್ತಿದ್ದಾರೆಂದು ಹೆಗಡೆ ನೀಡಿದ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿ ಹೆಗಡೆ ಸದಸ್ಯರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿದರು.  ಈ ಹಿಂದೆ ನೀವು ಹಾಗೂ ನಿಮ್ಮ ತಂದೆ ವಿಡಿ ಹೆಗಡೆ ಅವರು ಇಲ್ಲಿ ಕಾರ್ಯನಿರ್ವಹಿಸಿದ್ದು ಅವರು ದಲಾಲಗಿರಿ ಮಾಡಿದ್ದರೇ ಎಂದು ಕಿಡಿ ಕಾರಿದ ತಳವಾರ 2002ರಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರಾಗಿದ್ದ ಸುನೀಲ್ ಹೆಗಡೆ ಎರಡೂವರೆ ವರ್ಷ ಅಧಿಕಾರ ಮಾಡಿ ಬಳಿಕ ಪೂರ್ಣ ಅವಧಿ ಸದಸ್ಯರಾಗಿ ಇರದೆ ಅರ್ಧಕ್ಕೆ ರಾಜಿನಾಮೆ ನೀಡಿ ಹೋದ ಹೆಗಡೆಗೆ ಪುರಸಭೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದರು.  ಚುನಾವಣೆ ಸೋತಿರುವ ಹಾಗೂ ಹಳಿಯಾಳ ಪಟ್ಟಣದಲ್ಲಿ ಕಡಿಮೆ ಮತ ಗಳಿಸಿರುವ ಅವರಿಗೆ ಪುರಸಭೆಯ ಬಗ್ಗೆ ಚಿಂತೆ ಕಾಡುತ್ತಿದ್ದು ಸಚಿವ ಆರ್.ವಿ.ದೇಶಪಾಂಡೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರ ಅಭಿವೃದ್ದಿ ಕಾರ್ಯ ನೋಡಲಾಗದೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದು ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ ಇರದ ಹಿಂದುತ್ವ ಅಜೆಂಡಾ ಬಿಜೆಪಿಗೆ ಬಂದ ಮೇಲೆ ಬಂದಿದೆಯಾ ಪೊಳ್ಳು ಹಿಂದುತ್ವದ ಡೊಂಬರಾಟ ಹಳಿಯಾಳದಲ್ಲಿ ನಡೆಯಲ್ಲ ಮುಂದಿನ ಪುರಸಭೆ ಸೇರಿದಂತೆ ಎಲ್ಲ ಚುನಾವಣೆಗಳನ್ನು ಕಾಂಗ್ರೇಸ್ ಪಕ್ಷವೇ ಗೆಲ್ಲಲಿದ್ದು ಚುನಾವಣೆಯಲ್ಲಿ ಹೆಗಡೆ ತಮ್ಮ ಶಕ್ತಿ ತೊರಿಸಲಿ ಎಂದು ಸವಾಲ್ ಹಾಕಿದರು.  ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಮಾತನಾಡಿ ಗೋ,ದನದ ಮಾಂಸದ ಮಾರುಕಟ್ಟೆ ಸರ್ಕಾರಿ ಜಾಗೆಯಲ್ಲಿ ಇಲ್ಲ ಖಾಸಗಿ ಜಾಗೆಯಲ್ಲಿ ಇರಬಹುದು ಅದು ನಮ್ಮ ಗಮನಕ್ಕೆ ಇಲ್ಲ ಇನ್ನೂ ಚಿಕನ್ ಅಂಗಡಿಗಳು ಹಲವಾರು ಬಿಜೆಪಿ ಮುಖಂಡರ ಒಡೆತನದ ಜಾಗೆಯಲ್ಲಿಯೇ ನಡೆಯುತ್ತಿದ್ದು ಬಡವರ ಹೊಟ್ಟೆ ಮೇಲೆ ಹೊಡೆಯುವ ಕಾರ್ಯ ನಾವು ಮಾಡಲ್ಲ ಚಿಕನ್ ಅಂಗಡಿಕಾರರಿಗೆ ಪ್ರತ್ಯೇಕ ಮಾರುಕಟ್ಟೆಗೆ ಕ್ರೀಯಾಯೋಜನೆ ಮಾಡಿದ್ದು ಸದ್ಯದಲ್ಲೇ ಆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.  ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಹಾಗೂ ಪುರಸಭೆ ಸದಸ್ಯರಾದ ಫಯಾಜ ಶೇಖ ಹಾಗೂ ಇನಾಯಿತುಲ್ಲಾ ಬೇಪಾರಿ ಮಾತನಾಡಿ ಪಟ್ಟಣದಲ್ಲಿ ಸರ್ಕಾರಿ ಸ್ಥಳದಲ್ಲಿ ಎಲ್ಲೂ ಗೋಮಾಂಸ ಮಾರುಕಟ್ಟೆ ಇಲ್ಲ ಎಂದ ಅವರು ಪತ್ರಕರ್ತರ ಪ್ರಶ್ನೇಗೆ ಉತ್ತರಿಸುತ್ತಾ ಮೇದಾರಗಲ್ಲಿಯ ಹಿಂದಿನ ಕಸಾಯಿಗಲ್ಲಿಯ ರಸ್ತೆಯ ಮಧ್ಯೆ ಇರುವ ದನದ ಮಾಂಸ ಮಾರುಕಟ್ಟೆಯ ಕಟ್ಟಡ ಶತಮಾನಗಳಿಂದ ಇದ್ದು ಅದನ್ನು ತೆರವುಗೊಳಿಸುವ ಪ್ರಶ್ನೇಯೇ ಇಲ್ಲ ಎಂದರು. ಪುರಸಭೆ ಮಾಜಿ ಉಪಾಧ್ಯಕ್ಷ ಉಮೇಶ ಬೊಳಶೆಟ್ಟಿ, ನಾಮನಿರ್ದೇಶಿತ ಸದಸ್ಯ ಅನಿಲ ಫರ್ನಾಂಡಿಸ್ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: ಎರಡೂವರೆ ವರ್ಷ ಅಧಿಕಾರ ಮಾಡಿ, ಗೋವಧಾಲಯ ಇಲ್ಲ, ಚರ್ಚೆ ಮಾಡಿ, ಚಿಕನ್ ಅಂಗಡಿಗಳು, ಡಿಸಿಗೆ ದೂರು ನೀಡಿ, ದಲಾಲಗಿರಿ, ಪುರಸಭೆ ಸದಸ್ಯ, ಪುರಸಭೆಗೆ ಬಂದು ಆಮ್ನೇ ಸಾಮ್ನೆ, ಬೇಕಿದ್ದರೇ, ಮಾಜಿ ಶಾಸಕ, ಸುನೀಲ್ ಹೆಗಡೆಗೆ, ಸುರೇಶ ತಳವಾರ ಸವಾಲ್, ಹಳಿಯಾಳದಲ್ಲಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar