ಹೊನ್ನಾವರ . ಶಿಬಿರವು, ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ಅದನ್ನು ಕೆರೆಕೋಣಿನಲ್ಲಿ ನಡೆದ ಶಿಬಿರವು ಸಾಕ್ಷೀಕರಿಸಿದೆ ಮಾತ್ರವಲ್ಲ, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ಹೊರ ಪ್ರಪಂಚವನ್ನೇ ಮರೆತು ಬಿಟ್ಟಿದ್ದಾರೆ, ಅದಕ್ಕೆ ಸ್ವಲ್ಪ ಮಟ್ಟಿನ ವಿರಾಮ ನೀಡಿ 60ಕ್ಕಿಂತ ಹೆಚ್ಚಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ಹಲವಾರು ವಿಭಾಗದಲ್ಲಿ ಅನುಭವವನ್ನು ಆಸ್ವಾದಿಸಿದ್ದು ಒಳ್ಳೆಯ ಬೆಳವಣಿಗೆ ಎಂದು ಎಸ್.ಕೆ.ಪಿ. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಪ್ಪ ಹೇಳಿದರು. ಅವರು ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾವರ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ, ಹೊನ್ನಾವರ ಆಶ್ರಯದಲ್ಲಿ ಡಾ. ದಿನಕರ ದೇಸಾಯಿ ಗ್ರಾಮ ಪಂಚಾಯತ ಗ್ರಂಥಾಲಯ, ಕೆರೆಕೋಣ್ನಲ್ಲಿ 10 ದಿನಗಳ ಕಾಲ ನಡೆದ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಶಿಬಿರದ ಸಂಪನ್ಮೂಲ ವ್ಯಕ್ತಿ ಕಲಾವಿದ ಬಿ.ವಿ. ಭಂಡಾರಿ ಮಾತನಾಡಿ, ಮಕ್ಕಳ ಮನೋಭಾವನೆ ಅರ್ಥ ಮಾಡಿಕೊಳ್ಳುವುದರ ಮೂಲಕ ಅವರಿಗೆ ಬೇರೆ ಬೇರೆ ವಿಷಯವನ್ನು ಮುಟ್ಟಿಸುವ ಕೆಲಸವನ್ನು ಮಾಡಲಾಗಿದೆ. ಅವರ ಸಾಮಥ್ರ್ಯಕ್ಕನುಗುಣವಾಗಿ ಸ್ಪಂದಿಸಿದ್ದು ಶಿಬಿರದ ಮುಖ್ಯಾಂಶಗಳಲ್ಲೊಂದು ಎಂದು ಹೇಳಿ ಶಿಬಿರದಲ್ಲಿ ಅನುಭವಿಸಿದ ಖುಷಿ ಕ್ಷಣಗಳನ್ನು ಹಂಚಿಕೊಂಡರು.
ಮಂಜುನಾಥ ಅಣ್ಣಪ್ಪ ಶೆಟ್ಟಿ ಮಾತನಾಡಿ ಇಂತಹ ಶಿಬಿರಗಳು ಮಕ್ಕಳ ಮನೋಭಾವವನ್ನು ಹೆಚ್ಚಿಸುತ್ತದೆ ಮತ್ತು ಮಕ್ಕಳಿಗೆ ಪರಸ್ಪರರ ಅನುಭವವೂ ಪ್ರಾಪ್ತಿಯಾಗುತ್ತದೆ ಆ ನಿಟ್ಟಿನಲ್ಲಿ ಶಿಬಿರ ಸಂಪೂರ್ಣ ಯಶಸ್ಸನ್ನು ಪಡೆದಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಸಂಗೀತಾ ನಾಯ್ಕ, ಹಡಿನಬಾಳ, ಶಿಬಿರಾರ್ಥಿಗಳಾದ ಕುಮಾರಿ ಧನ್ಯಾ ಜಿ. ನಾಯ್ಕ, ಕುಮಾರಿ ಮೌಲ್ಯ ಬೆಂಗಳೂರು, ಅನಿಶಾ, ಅನನ್ಯ, ಸಜಲ್ ಶಿಬಿರದ ಅನಿಸಿಕೆಗಳನ್ನು ಹಂಚಿಕೊಂಡರು.
ಅಂಗನವಾಡಿ ಮೇಲ್ವಿಚಾರಕಿ ಇಂದಿರಾ ಹರಿಕಂತ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಭಾರತಿ ಭಟ್, ಜ್ಯೋತಿ ಪಟಗಾರ, ಜ್ಯೋತಿ ಶೆಟ್ಟಿ, ಯೋಗಾಸನ ಸಂಪನ್ಮೂಲ ವ್ಯಕ್ತಿ ಲತಾ ಅಯ್ಯಪ್ಪ ನಾಯ್ಕ, ಶಿಬಿರದ ಮೇಲ್ವಿಚಾರಕಿ ಶ್ಯಾಮಲಾ ಶೆಟ್ಟಿ ಉಪಸ್ಥಿತರಿದ್ದರು.
ಎಮ್ ಎಸ್ ಶೆಟ್ಟಿ ಸ್ವಾಗತಿಸಿದರು, ರಾಮಾ ಭಂಡಾರಿ ವಂದಿಸಿದರು. ಮಹೇಶ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
Leave a Comment