ಕುಮಟಾದ ನಿವಾಸಿ ನಾರಾಯಣ ಮಡಿವಾಳ ಎನ್ನುವವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು..
ಅದೇ ಪ್ರಕಾರವಾಗಿ ಅವರು ಅಲ್ಲಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಚಿಕಿತ್ಸೆಗೆ O+ 10 unit ರಕ್ತ ಕೂಡಲೇ ನೀಡುವಂತೆ ವೈದ್ಯರು ತಿಳಿಸಿದಾಗ ಕುಟುಂಬದವವರು ಮಂಗಳೂರಿನಲ್ಲಿ ಯಾರನ್ನು ಕೇಳುವುದು ಎಂದು ದಿಕ್ಕು ತೋಚದಂತಾದರು.ನಂತರ ಕುಮಟಾದ *ರಕ್ತ ನೀಡಿ ಜೀವ ಉಳಿಸಿ* ವಾಟ್ಸಪ್ ಗ್ರೂಪ್ ಗೆ ಅವರು ಮೆಸೇಜ್ ಮಾಡಿ ಸಹಾಯ ಮಾಡಲು ಕೇಳಿಕೊಳ್ಳುತ್ತಾರೆ. ಮೇಸೇಜ್ ನೋಡಿದ ಶ್ರೀಧರ ರವರು ಕೂಡಲೇ ಎಚ್ಚೆತ್ತು ಎಲ್ಲ ಮಿತ್ರರ ಸಹಾಯ ಕೇಳುತ್ತಾರೆ ಅನೇಕ ಯುವಕರು ರಕ್ತದಾನ ಮಾಡಲು ಮುಂದೆ ಬಂದು ಶ್ರೀಧರ ಸಂಪರ್ಕ ಮಾಡುತ್ತಾರೆ ನಂತರ ಸೋಮವಾರ ಶ್ರೀಧರ (ಅಂಕೋಲಿ) ಆ 10 ಜನ ಯುವಕರನ್ನು ಮಂಗಳೂರಿಗೆ ಕರೆದುಕೊಂಡು ಹೋಗಿ ರಕ್ತದಾನ ಮಾಡಿಸಿ ಅವರ ಸಂಕಷ್ಟಕ್ಕೆ ನೆರವಾಗಿದ್ದಾರೆ.. ಸರ್ವೋತ್ತಮ, ಗಣಪತಿ ನಾಯ್ಕ, ಮಹೇಶ್, ಚರಣ, ಶ್ರೀಕಾಂತ್, ವಿನೋದ ಪಟಗಾರ, ನಾಗರಾಜ ಮೆಸ್ತ, ಶ್ರೀಧರ ಕುಮಟಾ ಕರ, ಮೋಹನದಾಸ, ಪ್ರಸಾದ ಗೋಳಿ ಈ ಯುವಕರು ರಕ್ತದಾನ ಮಾಡಿ ಮಡಿವಾಳರಿಗೆ ನೆರವಾದರು.. ಈ ಯುವಕರ ಕಾರ್ಯಕ್ಕೆ ಅವರೆಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.
Leave a Comment