ಹೊನ್ನಾವರ: ಪ್ರೇರಣಾ ಟ್ರಸ್ಟ್ ಮೊಳ್ಕೋಡ್ ಹಾಗೂ ಕರ್ನಾಟಕ ಕ್ರಾಂತಿರಂಗ ಮೊಳ್ಕೋಡ್ ಘಟಕದ ವತಿಯಿಂದ ತಾಲೂಕಿನ ಮೊಳ್ಕೋಡ್ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.
ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರೇರಣಾ ಟ್ರಸ್ಟ ಘಟಕದ ವತಿಯಿಂದ ನೀಡಿದ ಶಾಲಾ ಬ್ಯಾಗ್ನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ನಂತರ ಅವರು ಮಾತನಾಡಿ “ಪ್ರೇರಣಾ ಟ್ರಸ್ಟ ವತಿಯಿಂದ ಶಿಕ್ಷಣಕ್ಕೆ ವಿಶೇಷ ಕಾಳಜಿ ವಹಿಸುತ್ತಿರುವುದು ನಿಜಕ್ಕೂ ಸಂತೋಷದ ವಿಷಯ ಆ ಮೂಲಕ ಬಡ ವಿದ್ಯಾರ್ಥಿಗಳನ್ನು ಶಿಕ್ಷಣಕ್ಕೆ ಪೋತ್ಸಾಹ ನೀಡುವ ಕೆಲಸ ಆಗುತ್ತಿದೆ. ಈ ವಿಷಯದಲ್ಲಿ ಇಲ್ಲಿಯ ಯುವಕರು ಇತರರಿಗೆ ಸ್ಪೂತಿರ್Àಯಾಗಿದ್ದಾರೆ. ಈ ಸಂಸ್ಥೆ ಇನ್ನು ಉತ್ತಮÀ ರೀತಿಯಲ್ಲಿ ಕೀರ್ತಿ ಹೊಂದಲಿ ಕ್ಷೇತ್ರದಾಂದ್ಯಂತ ವಿಸ್ತರಣೆಯಾಗುವ ಮೂಲಕ ಹೆಚ್ಚಿನ ಸಾಧನೆ ಹೊರಹೊಮ್ಮಲಿ” ಎಂದು ಶುಭ ಹಾರೈಸಿದರು.
ಇದೇ ಸಂಧರ್ಬದಲ್ಲಿ ಶಾಸಕರಿಗೆ ಮೊಳ್ಕೋಡ್ ಗ್ರಾಮಕ್ಕೆ ಉತ್ತಮವಾದ ರಸ್ತೆ ನಿರ್ಮಿಸಿಕೊಡಬೇಕೆಂದು ಮನವಿಯನ್ನು ಸಲ್ಲಿಸಲಾಯಿತು. ಈ ಬಗ್ಗೆ ಶಾಸಕ ಸುನಿಲ್ ಪ್ರತಿಕ್ರಿಯಿಸಿ ರಸ್ತೆ ಆದಷ್ಟು ಶೀಘ್ರದಲ್ಲಿ ಮಾಡಿಕೊಡುವ ಭರವಸೆ ನೀಡಿದರು.
ಕರ್ನಾಟಕ ಕಾಂತ್ರಿರಂಗದ ತಾಲೂಕ ಅಧ್ಯಕ್ಷ ಎಸ್.ಡಿ.ಹೆಗಡೆ ಮಾತನಾಡಿ ಮೋಳ್ಕೊಡ್ ಉರಿನ 12 ಜನ ಯುವಕರು ಸೇರಿಕೊಂಡು ಒಂದು ಸಂಘಟನೆ ಕಟ್ಟುವ ಮೂಲಕ ಉತ್ತಮ ಕೆಲಸಕ್ಕೆ ಮುನ್ನಡಿ ಇಟ್ಟಿದ್ದಾರೆ. ತಾವು ಗಳಿಸಿದ ದುಡಿಮೆಯ ಹಣದಲ್ಲಿಯೆ ಸಮಾಜಕ್ಕೆ ಒಳಿತಾಗುವುದಲ್ಲದೇ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೋತ್ಸಾಹ ನೀಡುವ ಕೆಲಸ ನಿಜಕ್ಕೂ ಅಭಿನಂದನಾರ್ಹ ಎಂದರು. ಪ್ರೇರಣಾ ಟ್ರಸ್ಟ ಹೆಸರಿನಂತೆ ಚಟುವಟಿಕೆ ಸೃಜನಶೀಲತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಈ ಯುವಕರ ತಂಡದಿಂದ ಇದರ ಜೊತೆ ಸಾಮಾಜಿಕ ಚಟುವಟಿಕೆಯಲ್ಲಿಯೂ ಗುರುತಿಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದರು.
ಇಡಗುಂಜಿ ಗ್ರಾಮ ಪಂಚಾಯತ ಉಪಾಧ್ಯಕ್ಷÀ ಗಣಪತಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕೇಶವ ನಾಯ್ಕ ಬಳ್ಕೂರು, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಸ್.ಎನ್.ಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ನಾಯ್ಕ, ಮಹೇಶ ನಾಯ್ಕ , ಎಂ ಎನ್ ಗೌಡ ಉಪಸ್ದಿತಿರಿದ್ದರು.
Leave a Comment