ದಾಂಡೇಲಿ :-
ಹಳೇ ದಾಂಡೇಲಿ ನಗರ ಸಭೆಯಿಂದ ಈ ಭಾಗದ ಜನರಿಗೆ ಮುಕ್ತಿ ಯಾವಾಗ ಎಂಬುದೇ ಯಕ್ಷ ಪ್ರಶ್ನೇಯಾಗಿದೆ ಎಂದು ಈ ಭಾಗದ ರಹವಾಸಿ
ಶಿವಾನಂದ ಆರ್ ನಾಯ್ಕ ಹೇಳಿದ್ದಾರೆ..
ಪ್ರತಿ ವರ್ಷದಂತೆ ಮಳೆಗಾಲದಲ್ಲಿ ನಗರ ಸಭೆಯವರು ಪ್ರತಿ ವಾರ್ಡಿನಲ್ಲು ಗಟಾರ ಸ್ವಚ್ಛತೆ ಗೊಳಿಸುತ್ತಾರೆ ಆದರೆ ಕಳೆದ ವರ್ಷದಿಂದ ಹಳೇ ದಾಂಡೇಲಿ ವಾರ್ಡ ನಂಬರ 25 ಭಾಗದ ಜನರಿಗೆ ಮಳೆಗಾಲದಲ್ಲಿ ಮನೆಯ ಮುಂದೆ ಈಜುವುದೇ ಭಾಗ್ಯ ಎಂದಾಗಿದೆ ಎಂದಿದ್ದಾರೆ.
ಈ ಒಂದು ಗಟಾರಿನ ಸಮಸ್ಯೆ ಇಂದ ಅಲ್ಲಿನ ಜನರು ಸೋತು ಹೋಗಿದ್ದಾರೆ ಕಳೆದ ಕೆಲವು ದಿನಗಳ ಹಿಂದೆ ವಾರ್ಡಿನ ಸದಸ್ಯರು ಸೇರಿ ಜಿಲ್ಲಾಧಿಕಾರಿಗಳಿಗೆ ವಾಟ್ಸಫ್ ಮೂಲಕ ದೂರು ಕೊಟ್ಟರು ಪ್ರಯೋಜನಕ್ಕೆ ಬರಲಿಲ್ಲ ಈಗಲಾದರು ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಂಡು ಮಳೆ ನೀರನ್ನು ಸುಗಮವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕಾಗಿದೆ ಇಲ್ಲವಾದಲ್ಲಿ ನಗರಸಭೆ ಎದುರು ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದ್ದಾರೆ..
Leave a Comment