ಹೊನ್ನಾವರ:
ಸಮರ್ಥ ಚಾರಿಟೇಬಲ್ ಟ್ರಸ್ಟ ವತಿಯಿಂದ ತಾಲೂಕಿನ ನಗರೆ, ನಿರ್ವತಿಕೊಡ್ಲ, ತನ್ಮಡಗಿ, ಚೀನಕೋಡ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್ಬುಕ್ ವಿತರಣಾ ಕಾರ್ಯಕ್ರಮ ಜರುಗಿತು.
ನಗರೆ ಶಾಲೆಯಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಂಡಡಿದ್ದು ಈ ಸಂಧರ್ಬದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಜಿ.ಐ ಗೌಡ ಮಾತನಾಡಿ ರಾಮ ಗೌಡ ಅವರ ಅಧ್ಯಕ್ಷತೆಯಲ್ಲಿ ಸಮರ್ಥ ಟ್ರಸ್ಟ ವತಿಯಿಂದ ಗ್ರಾಮಿಣ ಭಾಗದಲ್ಲಿರುವ ಶಾಲಾ ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ದೃಷ್ಟಿಯಿಂದ ಉಚಿತವಾಗಿ ಶಾಲಾ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಸಮಾಜ ಸೇವಾ ಕಾರ್ಯ ಮಾಡುತ್ತಾ ಬಂದಿದ್ದಾರೆ. ಯಾವುದೇ ಪ್ರಚಾರದ ಭರಾಟೆ ಇಲ್ಲದೆ ಅತ್ಯತ್ತಮ ಕೆಲಸ ಮಾಡುವ ಮೂಲಕ ಇತರಿರಿಗೆ ಮಾರ್ಗದರ್ಶಕರಾಗಿದ್ದಾರೆ. ಟ್ರಸ್ಟನ ಸಮಾಜಮುಖಿ ಕಾರ್ಯ ಇನ್ನು ಹೆಚ್ಚಿನ ರೀತಿಯಲ್ಲಿ ಮುಂದುವರೆಯಲಿ.ಜಿಲ್ಲೆಯಾದ್ಯಂತ ಉತ್ತಮ ಹೆಸರುಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.ಟ್ರಸ್ಟ ವತಿಯಿಂದ ಶಾಲಾ ಪರಿಕರ ಪಡೆದ ವಿಧ್ಯಾರ್ಥಿಗಳು ವಿದ್ಯಾಬ್ಯಾಸದಲ್ಲಿ ಉತ್ತಮ ಸಾಧನೆ ಮಾಡಿ ಎಂದು ಕಿವಿಮಾತು ಹೇಳಿದರು.
ಟ್ರಸ್ಟನ ಸದಸ್ಯ ಹನುಮಂತ ಗೌಡ ಮಾತನಾಡಿ ಸಮರ್ಥ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷರಾದ ರಾಮಾ ಗೌಡÀ ಜನ್ಮ ದಿನದಂದು ನಗರೆ ಶಾಲೆ ಸೇರಿದಂತೆ 4 ಶಾಲೆಗಳಲ್ಲಿ ನೊಟ್ಬುಕ್ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಪ್ರತಿ ವರ್ಷವೂ ಸಹ ಈ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ. ರಾಮ ಗೌಡ ಅವರು ಟ್ರಸ್ಟನಲ್ಲಿ ಮುಖ್ಯಪಾತ್ರ ನಿರ್ವಹಿಸುವವರು ನಾವು ಅವರೊಂದಿಗೆ ಕೈ ಜೋಡಿಸಿದ್ದೇವೆ. ಈ ಹಿಂದೆ ಅಂಗನವಾಡಿ ವಿದ್ಯಾರ್ಥಿಗಳಿಗೂ ಸೌಲಭ್ಯ ಒದಗಿಸಿದ್ದರು. ಆದರೆ ಈ ಬಾರಿ ಅಂಗನವಾಡಿಗಳಿಗೆ ಶಾಶ್ವತ ವಸ್ತುಗಳನ್ನು ಕೊಡುಗೆ ನೀಡುವ ಉದ್ದೇಶವಿದೆ. ಯಾವುದೇ ರಾಜಕೀಯ ಪ್ರತಿಫಲಾಪೆಕ್ಷೆ ಇಲ್ಲದೇ ನಿಶ್ವಾರ್ಥವಾಗಿ ಸೇವೆ ಮಾಡುತ್ತಾ ಬಂದಿದ್ದು ಮುಂದೆಯೂ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ನಾಗರತ್ನ ಶೇಟ್, ಸದಸ್ಯರಾದ ಉದಯ ನಾಯ್ಕ ಟ್ರಸ್ಟನ ಸದಸ್ಯರು ಉಪಸ್ದಿತರಿದ್ದರು.
Leave a Comment