ಹಳಿಯಾಳ : ಹಳಿಯಾಳ ಪಟ್ಟಣದ ಮುಖಭಾಗವಾದ ಬಸ್ ನಿಲ್ದಾಣದ ಹಿಂದಿನ ಪ್ರತಿಷ್ಠಿತ ಕೆಎಚ್ ಬಿ ಕಾಲೊನಿಯಲ್ಲಿ ಬೆಳಗಿನ ೩.೩೦ರಿಂರ ೪ಗಂಟೆ ಒಳಗೆ ಮನೆ ಬಾಗಿಲು ಒಡೆದು ಮನೆಗೆ ನುಗ್ಗಿದ ೪ ಜನ ದರೊಡೆಕೊರರ ತಂಡ ಮಾಲಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಗನಾಣ್ಯ, ಬಂಗಾರ , ಮಾಂಗಲ್ಯ ಸಹಿತ ಬೈಕ್ ದರೊಡೆ ಮಾಡಿ ಪರಾರಿಯಾದ ಘಟನೆ ನಡೆದಿದೆ.
ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ
ಎಮ್ ಕೆ ಶಾಸ್ತ್ರಿ ಅವರ ಮನೆ ದರೊಡೆ. ಸುಮಾರು ೬ ಲಕ್ಷ ರೂ ಮೌಲ್ಯದ ೧೮೦ ಗ್ರಾಂ (೧೮ ತೊಲೆ) ಬಂಗಾರ, ಪತ್ನಿಯ ಕೊರಳಿಗೆ ಕೈಹಾಕಿ ಮಾಂಗಲ್ಯ ಕಿತ್ತುಕೊಂಡು, ನಗದು ೫ ಸಾವಿರ ಹಾಗೂ ಅವರದ್ದೇ ಬೈಕ್ ಕದ್ದು ಪರಾರಿಯಾದ ದರೊಡೆಕೊರರು.
ಮನೆಯಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳು
ಇರುವಾಗಲೇ ದರೊಡೆ. ಬಡಿಗೆಯಿಂದ ಶಾಸ್ತ್ರೀಯವರ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ ದರೊಡೆಕೊರರು.
ಘಟನೆಯಿಂದ ಭಯಭಿತರಾದ ದಂಪತಿ ಮಕ್ಕಳಿಗೆ ಹಾಗೂ ತಮಗೆ ಜೀವಕ್ಕೆ ಅಪಾಯ ಮಾಡದಂತೆ ದರೊಡೆಕೊರರ ಬಳಿ ಅಂಗಲಾಚಿದ್ದಾರೆ.
ಹಳಿಯಾಳದಲ್ಲಿ ನೂರಾರು ಕಳ್ಳತನ ಪ್ರಕರಣಗಳು ನಡೆದಿವೇ ಆದರೇ ಮನೆಯಲ್ಲಿ
ಕುಟುಂಬದವರು ಇರುವಾಗಲೇ ಹಲ್ಲೆ ನಡೆಸಿ ದರೊಡೆ ಮಾಡಿದ ಘಟನೆ ಇದೆ ಮೊದಲು..
ನಡೆದಿದ್ದು ಹಳಿಯಾಳದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಮುಖಕ್ಕೆ ಮಾಸ್ಕ ಬಳಸದೆ ಬಂದಿದ್ದ. ನಾಲ್ವರು ದರೊಡೆಕೊರರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು
ದರೊಡೆಗೊಳಗಾದ ಶಾಸ್ತ್ರೀಯವರು ಮಾಹಿತಿ ನೀಡಿದ್ದಾರೆ.
ಅಲ್ಲದೇ ಹಳಿಯಾಳದಲ್ಲಿ ಸರಣಿ ಕಳ್ಳತನಕ್ಕೆ ಯತ್ನಸಿದ್ದು
ಕೆಎಚ್ ಬಿ ಕಾಲೊನಿ ಬಳಿಕ ಬೆಳಗಾವಿ ರಸ್ತೆಯ ಚಿಕ್ಕ ನೀರಾವರಿ ಕಚೇರಿ ಆವರಣದಲ್ಲಿಯ. ಮನೆ ಹಾಗೂ ಕಚೇರಿ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು ಇಲ್ಲಿ ಮನೆಯಲ್ಲಿ ಯಾರು ಇಲ್ಲದ್ದರಿಂದ ಬೀಗ ಮುರಿದು ೩ ತೊಲೆ ಬಂಗಾರ ಹಾಗೂ ಸ್ವಲ್ಪ ನಗದು ದೊಚಲಾಗಿದೆ.
ಹಳಿಯಾಳ ಪೊಲಿಸ್ ಠಣೆಯಲ್ಲಿ ಪ್ರಕರಣ ದಾಖಲಾಗಿದ್ದು.. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದು ..
ಜಿಲ್ಲಾ ಕೇಂದ್ರ ಕಾರವಾರದಿಂದ ಬೆರಳಚ್ಚು ತಂತ್ರಜ್ಞರು, ಶ್ವಾನದಳ ಬಂದು ಪರಿಶಿಲನೆ ನಡೆಸಿದೆ.
ದರೊಡೆಕೊರರು ಬಾಗಿಲು ಮುರಿದು ಒಳಗೆ ನುಗ್ಗಿದಾಗ ಎಚ್ಚರಗೊಂಡ ದಂಪತಿಗಳು ದರೊಡೆಕೊರರನ್ನು ಪ್ರಶ್ನೀಸಿ ಅವರನ್ನು ತಡೆಯಲು ಯತ್ನಿಸಿದಾಗ ಹಲ್ಲೆಗೆ ಮುಂದಾದ ದರೊಡೆಕೊರರು
ಶಾಸ್ತ್ರೀಯವರ ಮೇಲೆ ಬಡಿಗೆಯಿಂದ ಹಲ್ಲೆ ನಡೆಸಿದಾಗ ಭಯಭಿತರಾದ ಅವರ ಪತ್ನಿ ಪತಿಗೆ ಏನು ಮಾಡಬೇಡಿ ನಿಮಗೆ ಬೇಕಾದನ್ನು ತೆಗೆದುಕೊಂಡು ಹೊಗಿ ಎಂದು
ಸಮಯ ಪ್ರಜ್ಞೆ ಮೆರೆದಿದ್ದು
ಮತ್ತೇ ಏನಾದರೂ ಪ್ರತಿರೋಧ ವ್ಯಕ್ತ ಪಡಿಸಿದ್ದರೇ ಗಂಭೀರ ಘಟನೆ ನಡೆಯುತ್ತಿತ್ತು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ
ಪಿಎಸ್ ಐ ಆನಂದಮೂರ್ತಿ, ಸಿಪಿಐ ಸುಂದರೇಶ ಹೊಳೆನ್ನವರ ಭೆಟಿ ನೀಡಿ ಪರಿಶೀಲನೆ ನಡೆಸಿದ್ದು.. ತನಿಖೆ ನಡೆಸುತ್ತಿದ್ದಾರೆ..
Leave a Comment