ಆತ ಮೂರನೇ ತರಗತಿಯ ವಿದ್ಯಾರ್ಥಿ, ಚಿತ್ರ ಬಿಡಿಸುವುದು ಎಂದರೆ ಆತನಿಗೆ ಪಂಚಪ್ರಾಣ. ಆ ವಯಸ್ಸಿನಲ್ಲಿಯೇ ಆತ ಪೆನ್ಸಿಲ್ ಹಿಡಿದು ಚಿತ್ರ ಬಿಡಿಸುತ್ತ ಕುಳಿತನೆಂದರೆ ಬೇರೇನೂ ಬೇಡ ಎಂಬಂತೆ ಕುಳಿತಿರುತ್ತಿದ್ದ. ಆದರೆ ಅವನು ಓದೋದು ಬರೆಯೋದು ಬಿಟ್ಟು ಚಿತ್ರ ಬಿಡಿಸ್ತಾ ಕುಳಿತಿರ್ತಾನೆ ಅನ್ನೋದು ಮೊದಲಿಂದಲೂ ಆ ಹುಡುಗನ ಪಾಲಕರಿಂದ ಬರುತ್ತಿದ್ದ ಮಾತು. ಆತ ಚಿತ್ರ ಬಿಡಿಸದಂತೆ ಮನೆಯಲ್ಲಿ ಕೆಲವು ಬಾರಿ ತಾಕೀತು ಮಾಡಿದ್ದೂ ಇದೆ ಎಂಬುದು ಹುಡುಗನಿಂದ ನನಗೆ ತಿಳಿದಿತ್ತು. ಆದರೆ ಏನು … [Read more...] about ಅಯ್ಯೋ..! ಹೀಗೆ ಮಾಡಿರದಿದ್ದರೆ ಮಕ್ಕಳು ಪ್ರತಿಭಾವಂತರೇ ಆಗಿರುತ್ತಿದ್ದರು.
ಮನೆ
ಅಧಿಕಾರಿಗಳು ಯೋಚಿಸಿ ಕೆಲಸ ಮಾಡಿ- ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ರಾಜಕೀಯ ಬೆರೆಸಬೇಡಿ – ಸಂಸದ ಅನಂತಕುಮಾರ ಹೆಗಡೆ.
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಆಗಿರುವ ನಷ್ಟದ ಕುರಿತು ಜಿಲ್ಲಾದ್ಯಂತ ಸಮೀಕ್ಷೆ ನಡೆಸಲಾಗುತ್ತಿದೆ. ಸದ್ಯ ದುರಸ್ಥಿ ಕಾರ್ಯಕ್ಕೆ ಜಿಲ್ಲೆಗೆ 10 ಕೋಟಿ ರೂ. ತಕ್ಷಣಕ್ಕೆ ಮುಂಗಡ ಹಣ ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಮೊತ್ತದ ಪರಿಹಾರ ಜಿಲ್ಲೆಗೆ ದೊರೆಯಲಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಭರವಸೆ ನೀಡಿದರು. ನೆರೆಹಾವಳಿಯಿಂದ ಹಳಿಯಾಳದಲ್ಲಿ ಉಂಟಾದ ಹಾನಿಯ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ … [Read more...] about ಅಧಿಕಾರಿಗಳು ಯೋಚಿಸಿ ಕೆಲಸ ಮಾಡಿ- ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ರಾಜಕೀಯ ಬೆರೆಸಬೇಡಿ – ಸಂಸದ ಅನಂತಕುಮಾರ ಹೆಗಡೆ.
ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ,ನೋಟಿಸ್ -ಪರಿಹಾರ ನೀಡದೆ ತೆರವು
ಹೊನ್ನಾವರ: ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತಾಲೂಕಿನ ಹಳದಿಪುರ ವ್ಯಾಪ್ತಿಯ ಭೂ ಸ್ವಾಧಿನಗೊಳ್ಳುವ ರಸ್ತೆ ಎಡ-ಬಲ ಪ್ರದೇಶದ ಮನೆ,ಅಂಗಡಿ ತೆರವಿಗೆ ಯಾವುದೇ ಮುಂಜಾಗೃತ ನೊಟಿಸ್ ನೀಡದೇ ಏಕಾಏಕಿಯಾಗಿ ಬಲಾತ್ಕಾರವಾಗಿ ತೆರವುಗೊಳಿಸುತ್ತಿರುವ ಬಗ್ಗೆ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪಾದಯಾತ್ರೆಯ ಮೂಲಕ ಸ್ಥಳಿಯರ ಸಮಸ್ಯೆ ಆಲಿಸಿದರು.ಯಾವುದೇ ನೋಟಿಸ್ ಮುನ್ನೇಚ್ಚರಿಕೆ ನೀಡದೆ ,ಪರಿಹಾರ ನೀಡದೆ ಎಕಾಎಕಿ ಜೆ.ಸಿ.ಬಿ ಮತ್ತು ಹಿಟಾಚಿಗಳನ್ನು ತಂದು … [Read more...] about ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ,ನೋಟಿಸ್ -ಪರಿಹಾರ ನೀಡದೆ ತೆರವು
ಹಳಿಯಾಳದಲ್ಲಿ ಬೆಳಗಿನ ಜಾವ ಮನೆಗೆ ನುಗ್ಗಿ ಮನೆ ಯಜಮಾನನ ಮೇಲೆ ಹಲ್ಲೆ ನಡೆಸಿ ದರೊಡೆ, ಸರಣಿ ಕಳ್ಳತನಕ್ಕೆ ಯತ್ನ ಬೆಚ್ಚಿ ಬಿದ್ದ ಹಳಿಯಾಳದ ಜನತೆ
ಹಳಿಯಾಳ : ಹಳಿಯಾಳ ಪಟ್ಟಣದ ಮುಖಭಾಗವಾದ ಬಸ್ ನಿಲ್ದಾಣದ ಹಿಂದಿನ ಪ್ರತಿಷ್ಠಿತ ಕೆಎಚ್ ಬಿ ಕಾಲೊನಿಯಲ್ಲಿ ಬೆಳಗಿನ ೩.೩೦ರಿಂರ ೪ಗಂಟೆ ಒಳಗೆ ಮನೆ ಬಾಗಿಲು ಒಡೆದು ಮನೆಗೆ ನುಗ್ಗಿದ ೪ ಜನ ದರೊಡೆಕೊರರ ತಂಡ ಮಾಲಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಗನಾಣ್ಯ, ಬಂಗಾರ , ಮಾಂಗಲ್ಯ ಸಹಿತ ಬೈಕ್ ದರೊಡೆ ಮಾಡಿ ಪರಾರಿಯಾದ ಘಟನೆ ನಡೆದಿದೆ.ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎಮ್ ಕೆ ಶಾಸ್ತ್ರಿ ಅವರ ಮನೆ ದರೊಡೆ. ಸುಮಾರು ೬ ಲಕ್ಷ ರೂ ಮೌಲ್ಯದ … [Read more...] about ಹಳಿಯಾಳದಲ್ಲಿ ಬೆಳಗಿನ ಜಾವ ಮನೆಗೆ ನುಗ್ಗಿ ಮನೆ ಯಜಮಾನನ ಮೇಲೆ ಹಲ್ಲೆ ನಡೆಸಿ ದರೊಡೆ, ಸರಣಿ ಕಳ್ಳತನಕ್ಕೆ ಯತ್ನ ಬೆಚ್ಚಿ ಬಿದ್ದ ಹಳಿಯಾಳದ ಜನತೆ
ಸಚಿವ ಆರ್.ವಿ.ದೇಶಪಾಂಡೆಯವರ ಹಳಿಯಾಳದ ಮನೆ ಎದುರು ಪ್ರತಿಭಟನೆ
ಹಳಿಯಾಳ :- ಅಸಂವಿಧಾನಿಕ, ಅವಾಸ್ತವಿಕ, ಸುಳ್ಳು ಅಂಕಿ ಅಂಶಗಳಿಂದ ಕೂಡಿರುವ, ಪ್ರಜಾಸತ್ತಾತ್ಮಕವಾಗಿ ಚರ್ಚೆಯೇ ಆಗದೆ ಇರುವ ಹಾಗೂ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿರುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಜಿಲ್ಲಾ ಸಮೀತಿಯ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ಹಳಿಯಾಳದ ಮನೆ ಎದುರು ಪ್ರತಿಭಟನೆ … [Read more...] about ಸಚಿವ ಆರ್.ವಿ.ದೇಶಪಾಂಡೆಯವರ ಹಳಿಯಾಳದ ಮನೆ ಎದುರು ಪ್ರತಿಭಟನೆ