ಹೊನ್ನಾವರ: ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತಾಲೂಕಿನ ಹಳದಿಪುರ ವ್ಯಾಪ್ತಿಯ ಭೂ ಸ್ವಾಧಿನಗೊಳ್ಳುವ ರಸ್ತೆ ಎಡ-ಬಲ ಪ್ರದೇಶದ ಮನೆ,ಅಂಗಡಿ ತೆರವಿಗೆ ಯಾವುದೇ ಮುಂಜಾಗೃತ ನೊಟಿಸ್ ನೀಡದೇ ಏಕಾಏಕಿಯಾಗಿ ಬಲಾತ್ಕಾರವಾಗಿ ತೆರವುಗೊಳಿಸುತ್ತಿರುವ ಬಗ್ಗೆ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪಾದಯಾತ್ರೆಯ ಮೂಲಕ ಸ್ಥಳಿಯರ ಸಮಸ್ಯೆ ಆಲಿಸಿದರು.
ಯಾವುದೇ ನೋಟಿಸ್ ಮುನ್ನೇಚ್ಚರಿಕೆ ನೀಡದೆ ,ಪರಿಹಾರ ನೀಡದೆ ಎಕಾಎಕಿ ಜೆ.ಸಿ.ಬಿ ಮತ್ತು ಹಿಟಾಚಿಗಳನ್ನು ತಂದು ಬಲಾತ್ಕಾರವಾಗಿ ತೆರವುಗೊಳಿಸಿದ್ದಕ್ಕೆ ಆಯ್ಆರ್ಬಿ ಅಧಿಕಾರಿ ನವಿನ್ ಮತ್ತು ರೇವಣ್ಣ ಅವರನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ಶಾಸಕ ದಿನಕರ್ ಶೆಟ್ಟಿ ಪತ್ರಕರ್ತರೊಂದಿಗೆ ಮಾತನಾಡಿ ಕರ್ಕಿ-ಹಳದಿಪುರದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಎಡ-ಬಲzಲ್ಲಿರುವÀ ಅಂಗಡಿ,ಮನೆಗಳನ್ನು ಚತುಷ್ಪತ್À ರಸ್ತೆಗಾಗಿ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಹೆದ್ದಾರಿ ಪ್ರಾದಿಕಾರದವರು ರೆಡ್ ನೋಟಿಸ್ ಹೊರಡಿಸಿ ತೆರವುಗೊಳಿಸುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿತ್ತು. ಈ ಹಿನ್ನಲೆ ಸ್ಥಳಕ್ಕೆ ತಾನು ಭೇಟಿ ನೀಡಿದ ಸಂದರ್ಬದಲ್ಲಿ ಸ್ಥಳಿಯರು ನನ್ನ ಗಮನಕ್ಕೆ ತಂದು ಅಧಿಕಾರಿಗಳು ಯಾವುದೇ ನೋಟಿಸ್ ನೀಡದೇ ಹಿಟಾಚಿ ಮೂಲಕ ತೆರವುಕಾರ್ಯ ಆರಂಭಿಸಿದ್ದಾರೆ ಎಂದು ಅಳಲನ್ನು ತೊಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದೇನೆ ಅವರು ಎರಡು ದಿನಗಳ ಕಾಲವಕಾಶ ನೀಡಿದ್ದಾರೆ ಎಂದರು.
ಇನ್ನು ಹೆದ್ದಾರಿ ಅಂಚಿನ ನಿವಾಸಿಗಳು ಹೇಳೋದೆನಂದರೆ ನಾವು ಸಂಬಂಧಪಟ್ಟ ಇಲಾಖೆಗೆ ಹಲವುಬಾರಿ ಸರ್ವೆ ನಂಬರ್ ನೀಡಿದ್ದೇವೆ. ಆದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಇಲಾಖೆಯಿಂದ ತೆರವುಗೊಳಿಸುವ ಬಗ್ಗೆಯಾಗಲಿ ಜಾಗದ ಪರಿಹಾರ ಮೊತ್ತದ ನೀಡುವುದರ ಬಗ್ಗೆಯು ತಿಳಿಸಿಲ್ಲ. ಅಲ್ಲದೇ ಜಾಗದ ಅಂದಾಜು ಪಟ್ಟಿ ಮಾಡದೇ,ಮೂನ್ಸೂಚನೇ ನೀಡದೇ ಏಕಾಏಕಿ ಜೆ.ಸಿ.ಬಿ, ಹಿಟಾಚಿಗಳನ್ನು ಅಂಗಡಿ ಮುಂಗಟ್ಟು,ಮನೆಗಳ ಮುಂದೆ ತಂದು ಬಲಾತ್ಕಾರವಾಗಿ ತೆರವುಗೊಳಿಸಿದ್ದಾರೆ. ಒಂದು ನೋಟಿಸ್ ನೀಡಿದ್ದರು ಸಹ ನಾವೇ ತೆರವುಗೊಳಿಸಿಕೊಳ್ಳುತ್ತಿದ್ದೇವು ಎಂದು ಇಲಾಖಾ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದರು.
ಈ ಸಂಧರ್ಬದಲ್ಲಿ ಸಹಾಯಕ ಆಯುಕ್ತರು ಸಾಜಿ ಮುಲ್ಲಾ ಖಾಜಿ, ತಹಸಿಲ್ದಾರ್ ವಿ.ಆರ್ ಗೌಡ, ಗ್ರಾಮ ಲೆಕ್ಕಾಧಿಕಾರಿ ವೈಭವಿ, ಬಿಜೆಪಿ ಮುಖಂಡರಾದ ದೀಪಕ್ ಶೇಟ್, ಎಮ್ ಎಸ್ ಹೆಗಡೆ ಕಣ್ಣಿ, ಗಣೇಶ ಪೈ ಹಳದಿಪುರ ಮತ್ತಿತರರು ಹಾಜರಿದ್ದರು.
Leave a Comment