ಹಳಿಯಾಳ:- ರೈತ ಸಮುದಾಯದ ಹಿತಾಸಕ್ತಿಯನ್ನು ಗಮದಲ್ಲಿಟ್ಟುಕೊಂಡು ಕೆಡಿಸಿಸಿ ಬ್ಯಾಂಕನವರು ಈಗಾಗಲೇ 303ಕೋಟಿ ರೂ. ಬೃಹತ್ ಮೊತ್ತವನ್ನು ರೈತರ ಖಾತೆಗಳಿಗೆ ಜಮೆ ಮಾಡಿದ್ದು ಸರ್ಕಾರದಿಂದ ಈ ಮೊತ್ತ ಈವರೆಗೆ ಕೆಡಿಸಿಸಿ ಬ್ಯಾಂಕ್ಗೆ ಭರಣ ಆಗದೆ ಇರುವುದರಿಂದ ಇನ್ನೂಳಿದ ರೈತರಿಗೆ ಸಮಸ್ಯೆಯಾಗುತ್ತಿದ್ದು ರೈತರು ಸಹಕರಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೊಟ್ನೆಕರ ಮನವಿ ಮಾಡಿದ್ದಾರೆ. ಪಟ್ಟಣದ ತಮ್ಮ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ರೈತರ ಸಾಲಮನ್ನಾ ಮೊತ್ತ 50ಸಾವಿರ ರೂ. ಸರ್ಕಾರದಿಂದ ರೈತರಿಗೆ ಬರಬೇಕಿದೆ ಆದರೇ ರೈತರ ಕಾಳಜಿಯಿಂದ ಕೆಡಿಸಿಸಿ ಬ್ಯಾಂಕ್ ಸಾವಿರಾರು ರೈತರಿಗೆ ಈಗಾಗಲೇ 213 ಹಾಗೂ ಅಡಿಕೆ ಬೆಳೆಗಾರರಿಗೆ 90 ಕೋಟಿ ಹೀಗೆ 303ಕೋಟಿ ರೂ. ಹಣವನ್ನು ಖಾತೆಗೆ ಜಮೆ ಮಾಡಿದ್ದು ಇದು ಬ್ಯಾಂಕ್ ಮೇಲೆ ಹೊರೆಯಾಗಿದ್ದು ಬಿಲ್ಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಸರ್ಕಾರದಿಂದ ಮಂಜೂರಾಗುವ ಹಂತದಲ್ಲಿದ್ದು ಸಚಿವ ಆರ್.ವಿ.ದೇಶಪಾಂಡೆ ಅವರು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚರ್ಚಿಸಿದ್ದು ಈ ಹಣ ಬಿಡುಗಡೆಯಾದ ಬಳಿಕ ಮತ್ತೇ ಬಾಕಿ ಉಳಿದ ರೈತರಿಗೂ ಹಣ ಜಮೆ ಆಗಲಿದ್ದು ಯಾರು ಗೊಂದಲಕ್ಕೆ ಒಳಗಾಗಬಾರದೆಂದು ಅವರು ವಿನಂತಿಸಿದ್ದಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬ್ಯಾಂಕಿನ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು ಸರಿಯಾದ ಕ್ರಮವಲ್ಲ ಎಂದಿರುವ ಘೊಟ್ನೇಕರ ಸರ್ಕಾರದೊಂದಿಗೆ ಬ್ಯಾಂಕ್ ಪತ್ರವ್ಯವಹಾರ ಮಾಡುತ್ತಿದ್ದು ಅಲ್ಲದೇ ಹಣ ತುಂಬಿರೊ ರೈತರಿಗೆ ಸಾಲ ಮರುಪಾವತಿ ಮಾಡಲಾಗುತ್ತಿದ್ದು ಯಾವ ರೈತರಿಗೂ ತೊಂದರೆ ಆಗದಂತೆ ಬ್ಯಾಂಕ್ ಕಾಳಜಿ ವಹಿಸಿದೆ ಎಂದಿದ್ದಾರೆ. ಸಕ್ಕರೆ ಕಾರ್ಖಾನೆಯ ವಿಷಯದಲ್ಲಿ ಕೇಂದ್ರದ ಮೊದಿ ಸರ್ಕಾರ ಎಡವುತ್ತಿದ್ದು ಬೇರೆ ದೇಶಗಳಿಂದ ಸಕ್ಕರೆ ಆಮದು ಮಾಡಿಕೊಂಡು ನಮ್ಮ ದೇಶದ ಕಾರ್ಖಾನೆಗಳಿಗೆ ದ್ರೋಹ ಎಸಗುತ್ತಿದ್ದು ಮುಂದಿನ ವರ್ಷಗಳಲ್ಲಿ ಮೋದಿ ನಿತಿಯಿಂದ ಹಲವು ಸಕ್ಕರೆ ಕಾರ್ಖಾನೆಗಳು ಮುಚ್ಚಿದರು ಆಶ್ಚರ್ಯ ಪಡಬೇಕಾಗಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಕೃಷ್ಣಾ ಪಾಟೀಲ್ ಇದ್ದರು.
Leave a Comment