ಹೊನ್ನಾವರ : ಪಟ್ಟಣದ ಹತ್ತು ಸಮಸ್ತರ ಮಠ ಶ್ರೀ ರಾಮ ಮಂದಿರದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಮಾಜದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹಾಗೂ ಅವರ ಪಟ್ಟದ ಶಿಷ್ಯರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಸಪ್ತದಿನಾತ್ಮಕ ವಾಸ್ತವ್ಯ ಮಹೋತ್ಸವ ಹಾಗೂ ಸನ್ಯಾಸ ದೀಕ್ಷಾ ಸುವರ್ಣ ಮಹೋತ್ಸವ ಸಮಾರಂಭ ಜೂನ್ 17 ರಿಂದ 23 ರ ವರೆಗೆ ನಡೆಯಲಿದೆ ಎಂದು ಜಿ.ಎಸ್.ಬಿ ಸಮಾಜದ ಹಿರಿಯರಾದ ಮುರಳಿಧರ ಶ್ಯಾನಭಾಗ ಮಾಹಿತಿ ನೀಡಿದರು.
Leave a Comment