ಹೊನ್ನಾವರ:
ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ತಹಸಿಲ್ದಾರ್ ಕಛೇರಿಯಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಖುದ್ದು ಸ್ಥಳದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸಮಸ್ಯೆಗೆ ಪರಿಹಾರ ನೀಡಿದರು.ಸಾರ್ವಜನಿಕರು ವೃದ್ದಾಪ್ಯ ವೇತನ, ವಿಧವಾ ವೇತನ, ಅಕ್ರಮ ಸಕ್ರಮ ಭೂ ಪರಿವರ್ತನೆ, ಅರಣ್ಯ ಇಲಾಖೆ ಸಂಭಂದಿತ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ವಲಯ ಅರಣ್ಯ ಅಧಿಕಾರಿಗಳನ್ನು ಕರೆಯಿಸಿ ತಕ್ಷಣ ಸಮಸ್ಯೆಗೆ ಪರಿಹಾರ ಒದಗಿಸುವಂತೆ ತಾಕಿತು ಮಾಡಿದರು. ಶಾಸಕರು ತಹಸಿಲ್ದಾರ್ ಕಛೇರಿಯ ರೆಕಾರ್ಡ ರೂಮ್, ಪಹಣಿ ಪತ್ರಿಕೆ ವಿಭಾಗ, ಭೂ ಸುಧಾರಣಾ ಕೊಠಡಿ, ಆಹಾರ ಪೂರೈಕೆ ವಿಭಾಗದ ಕೊಠಡಿಗಳ ದಾಖಲೆ ಪತ್ರ ಪರಿಶೀಲಿಸಿದರು. ಸರ್ವೆ ಇಲಾಖೆ ಅಧಿಕಾರಿಗಳ ಬಗ್ಗೆ ಸಾರ್ವಜನಿಕರು ತಿವೃ ಅಸಮಾಧಾನ ವ್ಯಕ್ತಪಡಿಸಿದ ಕಾರಣ ಶಾಸಕರು ಹದಿನೈದು ದಿನಗಳ ಒಳಗಾಗಿ ಜನರು ಸಲ್ಲಿಸಿದ ಅರ್ಜಿಗಳ ವಿಲೇವಾರಿ ಮಾಡಿ ಪರಿಹಾರ ಒದಗಿಸುವಂತೆ ಖಡಕ್ ಎಚ್ಚರಿಕೆ ನೀಡಿದರು. ಶಾಸಕರ ಬಳಿ ಸ್ಥಳಿಯರಾದ ಸುರೇಶ್ ಸಾರಂಗ್ ಬಂದರು ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಇಲಾಖೆಯ ಅಧಿಕಾರಿಗಳು ವಾರದಲ್ಲಿ ನಾಲ್ಕು ದಿನ ಕಾರವಾರದಲ್ಲೇ ಇರುತ್ತಾರೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಕಛೇರಿ ಬಳಿ ಹೋದಾಗ ನಮಗೆ ಸ್ಪಂದಿಸುವುದಿಲ್ಲ. ಈ ಬಗ್ಗೆ ಶಾಸಕ ದಿನಕರ ಶೆಟ್ಟಿ ಖುದ್ದು ಕಛೇರಿಗೆ ಭೆಟಿ ನೀಡಿ ಜನರ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಲೊಕೇಶ ಮೇಸ್ತ, ಉಮೇಶ್ ನಾಯ್ಕ, ಎಮ್.ಎಸ್. ಹೆಗಡೆ ಕಣ್ಣಿಮನೆ, ಮಾಜಿ ಪ.ಪಂ ಅಧ್ಯಕ್ಷ ಸದಾನಂದ ಭಟ್ಟ, ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ , ಪ.ಪಂ ಸದಸ್ಯರಾದ ನಾಗೇಶ್ ಮೇಸ್ತ, ಸುರೇಶ್ ಶೇಟ್, ಬಂದರು ಅಧಿಕಾರಿಗಳು ಉಪಸ್ಥಿತರಿದ್ದರು.
Àiï.ಎಸ್. ಹೆಗಡೆ ಕಣ್ಣಿಮನೆ, ಮಾಜಿ ಪ.ಪಂ ಅಧ್ಯಕ್ಷ ಸದಾನಂದ ಭಟ್ಟ, ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ , ಪ.ಪಂ ಸದಸ್ಯರಾದ ನಾಗೇಶ್ ಮೇಸ್ತ, ಸುರೇಶ್ ಶೇಟ್, ಬಂದರು ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment