ಹೊನ್ನಾವರ: ಪಟ್ಟಣದ ಕರ್ಕಿಕೋಡಿ ನಿವಾಸಿ ಸಹಕಾರಿ ಧುರೀಣ ಗಣಪತಿ ವಿ. ನಾಯ್ಕ (ಜಿ.ವಿ.ನಾಯ್ಕ) ಇವರು ತಮ್ಮ ಸ್ವಗ್ರಹದಲ್ಲಿ ಹ್ರದಯಾಗಾತದಿಂದ ನಿಧನರಾಗಿದ್ದಾರೆ. ಇವರಿಗೆ 82 ವರ್ಷ ವಯಸ್ಸಾಗಿತ್ತು. 3 ದಶಕಗಳ ಕಾಲ ಸಹಕಾರ ಸಂಘಗಳ ನಿಬಂಧಕರಾಗಿ ಸೇವೆ ಸಲ್ಲಿಸಿ ನಿವ್ರತ್ತರಾಗಿದ್ದರು. ಇವರು ನಿವ್ರತ್ತಿಯ ನಂತರ ಪ್ರತಿಷ್ಟಿತ ಹೊನ್ನಾವರ ನಗರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಪ್ರಸಕ್ತ ಸಾಲಿನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಪತ್ನಿ, ಒರ್ವ ಪುತ್ರ, ಇಬ್ಬರು ಪುತ್ರಿಯರು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಸಂತಾಪ: ಭಟ್ಕಳ ಶಾಸಕ ಸುನೀಲ್ ನಾಯ್ಕ, ಬಿಜೆಪಿ ಅಧ್ಯಕ್ಷ ಸುಬ್ರಾಯ ನಾಯ್ಕ, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಉಮೇಶ ನಾಯ್ಕ, ಕೇಶವ ನಾಯ್ಕ ಬಳ್ಕೂರು, ಹೊನ್ನಾವರ ಅರ್ಬನ ಬ್ಯಾಂಕ್ ಅಧ್ಯಕ್ಷ ರಾಘವ ವಿಷ್ಣು ಬಾಳೇರಿ, ಬ್ಯಾಂಕ್ ನಿರ್ದೇಶಕರು, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಯೋಗೇಶ್ ರಾಯ್ಕರ್ , ನಿರ್ದೇಶಕ ಸತೀಶ್ ತಾಂಡೇಲ್ ಹಾಗೂ ಅಪಾರ ಅಭಿಮಾನಿಗಳು ಇವರ ಅಂತಿಮ ದರ್ಶನ ಪಡೆದರು.
Leave a Comment