ಹೊನ್ನಾವರ.ಯೋಗವು ಮನುóಷ್ಯನ ಚಿತ್ತನ್ಯಾಸವನ್ನು ಹೆಚ್ಚಿಸುತ್ತದೆ. ಯೋಗವನ್ನು ದೈನಂದಿನ ಬದುಕಿನಲ್ಲಿ ಅಳುವಡಿಸಿಕೊಂಡವರು ನಿರೋಗಿಗಳಾಗಿ ಬಾಳುತ್ತಾರೆ. ಭಾರತದ ಋಷಿಮುನಿಗಳು ಜಗತ್ತಿಗೆ ಕೊಟ್ಟ ಶ್ರೇಷ್ಠ ಕೊಡುಗೆಗಳಲ್ಲಿ ಯೋಗವು ಅತ್ಯಂತ ಪ್ರಮುಖವಾಗಿದೆ ” ಎಂದು ಡಾ. ಎಸ್ ಎಸ್ ಹೆಗಡೆ ಅಭಿಪ್ರಾಯಪಟ್ಟರು.
ಅವರು ಎಸ್.ಡಿ.ಎಂ. ಪದವಿ ಕಾಲೇಜಿನ ಎನ್ ಸಿ ಸಿ, ಎನ್ ಎಸ್ ಎಸ್, ಸ್ಕೌಟ್ ಮತ್ತು ಗೈಡ್ಸ್ ವಿಭಾಗದವರು ಸಂಯೋಜಿಸಿದ ಯೋಗ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್ ಸಿ ಸಿ ನೌಕಾ ದಳದ ಸಬ್ ಲೆಫ್ಟಿನೆಂಟ ಸಂತೋಷ ವಿ ಗುಡಿಗಾರ ಮಾತನಾಡಿ ಇಂದಿನ ಯುವಜನತೆ ಜಿಮ್ನತ್ತ ಆಕರ್ಷಿತರಾಗಿ ಕೇವಲ ಶರೀರವನ್ನು ಬೆಳೆಸುತ್ತಾರೆ, ಇದರ ಬದಲು ಯೋಗವನ್ನು ರೂಢಿಸಿಕೊಂಡರೆ ಶರೀರ, ಆತ್ಮ,, ಬುದ್ಧಿ ಇವುಗಳ ಬಲವರ್ಧನೆ ಆಗುತ್ತದೆ. ಯುವಕರು ಯೊಗಾಭ್ಯಾಸಿಗಳಾಗಬೇಕು ಎಂದರು.
ಖ್ಯಾತ ಯೋಗ ತರಬೇತುದಾರರಾದ ಪ್ರಭಾಕರ ಗೌಡ ಸೇರಿದ ಗಣ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಯೋಗಾಸನವನ್ನು ಮಾಡಿಸಿ ಯೋಗದ ಪ್ರಯೋಜನಗಳನ್ನು ತಿಳಿಸಿದರು. ಎನ್ ಎಸ್ ಎಸ್ ಅಧಿಕಾರಿ ಪ್ರೋ. ಜಿ ಎಸ್ ಹೆಗಡೆ ಉಪಸ್ಥಿತರಿದ್ದರು.
ರೋವರ್ ಸ್ಕೌಟ್ ಲೀಡರ್ ಪ್ರಸನ್ನ ಸಿ ಶೇಟ್ ನಿರೂಪಿಸಿ, ವಂದಿಸಿದರು.
Leave a Comment