ಹಳಿಯಾಳ : ರಕ್ತದಾನದಿಂದ ಒಂದು ಜೀವ ಉಳಿಸಲು ಸಾಧ್ಯ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡಲು ಮುಂದಾಗಬೇಕೆಂದು ಕೆ.ಎಲ್.ಇ ಬ್ಲಡ ಬ್ಯಾಂಕ್ ಬೆಳಗಾವಿಯ ವೈದ್ಯ ಡಾ. ಬಸವರಾಜ ದೇವಗಿ ಕರೆ ನೀಡಿದರು.
ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಮುಂದಾಳತ್ವದಲ್ಲಿ ತಾಲೂಕ ಆಸ್ಪತ್ರೆ ಹಳಿಯಾಳ, ಅರಣ್ಯ ತರಬೇತಿ ಕೇಂದ್ರ, ತಟ್ಟಿಹಳ್ಳÀ, ಮತ್ತು ಕೆ.ಎಲ್.ಇ ಬ್ಲಡ ಬ್ಯಾಂಕ್ ಬೆಳಗಾವಿ ಇವರ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಳಿಯಾಳ ಅರಣ್ಯ ಇಲಾಖೆಯ ,ಡಿ.ಎಪ್.ಒ. ಡಾ ರಮೇಶ, ಅರಣ್ಯ ತರಬೇತಿ ಕೇಂದ್ರದ ಎ,ಸಿ.ಎಪ್ ಸಿ.ಆರ್. ಅಶೋಕ ಬಾಬು, ಕೆ.ಎಲ್.ಇ ಬ್ಲಡ ಬ್ಯಾಂಕ್ ಬೆಳಗಾವಿಯ ಪಿ.ಆರ್.ಓ ಶಿವಾನಂದ ಖಾನಾಪೂರ ವೇದಿಕೆಯ ಮೇಲಿದ್ದರು.
ಅರಣ್ಯ ತರಬೇತಿ ಕೇಂದ್ರದ ಶಿಭಿರಾರ್ಥಿಗಳು, ಸಿಬ್ಬಂದಿ ವರ್ಗದವರು, ಭಾಗವಹಿಸಿ ಒಟ್ಟು 105 ಜನರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಹಳಿಯಾಳ ತಾಲೂಕ ಆಸ್ಪತ್ರೆಯ ಆರೋಗ್ಯ ನೀರಿಕ್ಷಕ ಪ್ರಕಾಶ ಮಾನೆ, ಡಾ ಸ್ಟ್ಯಾನ್ಲಿ, ಅರಣ್ಯಾಧಿಕಾರಿ ಗಣೇಶ ಶೆಟ್ಟರ, ಸಂತೋಷ ಪರೀಟ, ಬ್ರೀಜೇಸ್, ಸುರೇಶ ಗಾವಡೆ, ನಾರಾಯಣ ರಾಂದೇವಾಡಿ ಇದ್ದರು.
Leave a Comment