ಹಳಿಯಾಳ:- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಜೆಕ್ಟ್ ಸ್ಪರ್ಧೆ ಹಾಗೂ ಪ್ರದರ್ಶನ-2018 ರಲ್ಲಿ ಕರ್ನಾಟಕ ಲಾ ಸೊಸೈಟಿ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗದ ಕೊನೆಯ ವರ್ಷದ ವಿದ್ಯಾರ್ಥಿಗಳು ಎರಡನೆಯ ಸ್ಥಾನವನ್ನು ಗಳಿಸಿದ್ದಾರೆಂದು ಪ್ರಾಂಶುಪಾಲ ಡಾ|| ವಿ. ವಿ. ಕಟ್ಟಿ ತಿಳಿಸಿದ್ದಾರೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ರಮೇಶ ಎಸ್, ಕೇದಾರ್ ಕೆ, ಸೋಮಯ್ಯ ಹೆಚ್ ಮತ್ತು ಬಸವರಾಜ ಕೆ ವಿದ್ಯುತ್ ಪ್ರಸರಣ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಲೈನ್ಮನಗಳ ಭದ್ರತೆ ಹಾಗೂ ಸುರಕ್ಷತೆಗಾಗಿ ಅಭಿವೃದ್ಧಿ ಪಡಿಸಿದ್ದ “Fault detection of overhead transmission lines of feeder side” ಎಂಬ ಸಾಧನವು ಪ್ರಶಸ್ತಿ ಪಡೆದಿದೆ. ಪ್ರದಾನ ಸಮಾರಂಭದಲ್ಲಿ ವಿತಾವಿ ಬೆಳಗಾವಿಯ ಉಪಕುಲಪತಿಗಳಾದ ಡಾ|| ಕರಿಸಿದ್ದಪ್ಪ ಹಾಗೂ ಪದ್ಮವಿಭೂಷಣ ಪುರಸ್ಕøತ ಹಿರಿಯ ವಿಜ್ಞಾನಿಗಳಾದ ಡಾ|| ವಿ.ಕೆ. ಆತ್ರ್ರೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ವಿತಾವಿ ಬೆಳಗಾವಿಯು 15,000 ರೂಪಾಯಿಗಳ ನಗದು ಪಾರಿತೋಷಕ ನೀಡಿ ಪುರಸ್ಕರಿಸಿತು. ಈ ಪ್ರಾಜೆಕ್ಟ್ನ ನಿರ್ಮಾಣ ಕಾರ್ಯಕ್ಕೆ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕರುಗಳಾದ ಪ್ರೊ. ತೃಪ್ತಿ ಪಿ. ಹಾಗೂ ಪ್ರೊ. ರಾಜೇಶ್ವರಿ ಎನ್. ಮಾರ್ಗದರ್ಶನ ನೀಡಿದ್ದರೆಂದು ತಿಳಿಸಿರುವ ಕಟ್ಟಿ ಮಹಾವಿದ್ಯಾಲಯದ ಆಡಳಿತ ಮಂಡಳಿ, ಮುಖ್ಯಸ್ಥರಾದ ಡಾ|| ಎ. ಹೆಚ್. ಮಿಶ್ರಿಕೋಟಿ, ಎಲ್ಲಾ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ.
Leave a Comment