ಹಳಿಯಾಳ:- ಪಟ್ಟಣದ ಮಿನಿ ವಿಧಾನ ಸೌಧದ ಆವರಣದಲ್ಲಿ ಕಂದಾಯ, ಕೌಶಲ್ಯಾಭಿವೃದ್ದಿ ಹಾಗೂ ಜಿವನೊಪಾಯ ಇಲಾಖೆಗಳ ಸಚಿವ ಆರ್ ವ್ಹಿ ದೇಶಪಾಂಡೆ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭಲ್ಲಿ ಅವರು ಕೃಷಿ ಅಭಿಯಾನ ಯೊಜನೆಯಡಿಯಲ್ಲಿ ತಾಲೂಕಿನ ರೈತರಿಗೆ ಕೃಷಿಗಾಗಿ ಅಗತ್ಯವಿರುವ ರೊಟೊವೆಟರ, ಮಿನಿ ಟ್ಯಾಕ್ಟರ, ಬ್ಯಾಟರಿ ಸ್ಪ್ರೆಯರ್ ಹಾಗೂ ಮುಂತಾದ ಕೃಷಿ ಪರಿಕರಗಳನ್ನು ಕೃಷಿ ಇಲಾಖೆಯಿಂದ ಆಯ್ದ ಫಲಾನುಭವಿಗಳಿಗೆ ವಿತರಿಸಿದರು. ಬಳಿಕ ಮಾತನಾಡಿದ ಅವರು ಸರ್ಕಾರ ಕೃಷಿಗಾಗಿ ರೈತರಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳನ್ನು ದುರುಪಯೋಗ ಮಾಡದೆ ಅವುಗಳನ್ನು ಕೃಷಿಗಾಗಿ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ದಿ ಹೊಂದಿರಿ ಎಂದು ಕರೆ ನೀಡಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣ್ಣಾ ಪಾಟೀಲ, ಪುರಸಭಾ ಅಧ್ಯಕ್ಷ ಶಂಕರ ಬೆಳಗಾಂವಕರ, ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ಸುಭಾಸ ಕೊರ್ವೆಕರ, ತಾ.ಪಂ ಸದಸ್ಯರಾದ ದೇಮಾಣಿ ಶಿರೋಜಿ, ತಹಶಿಲ್ದಾರ ವಿಧ್ಯಾದರ ಗುಳಗುಳಿ, ಸಹಾಯಕ ಕೃಷಿ ನಿರ್ದೆಶಕ ನಾಗೇಶ ನಾಯ್ಕ, ಕೃಷಿ ಅಧಿಕಾರಿಗಳಾದ ಎಸ್ ಆರ್ ದೇಸಾರ, ಸುನಂದಾ ಸಿತೊಳಿ, ಅಕ್ಷತಾ ಹೊಸಮನಿ, ರೇಣುಕಾ ಜೋಶಿ, ಎಸ್ ಎಸ್ ಗಜೆಂದ್ರಗಡ, ಕೆ.ಬಿ ಬೇಟಗೇರಿ, ಎಂ.ಸಿ ಸುಧಾಕರ, ಎ.ಡಿ ನಾಯ್ಕ ಪಿ.ಎಫ್ ಕಶೀಲಕರ ಇದ್ದರು.
Leave a Comment