ಹೊನ್ನಾವರ: ಮನುಷ್ಯನಿಗೆ ಆರೋಗ್ಯ ಎನ್ನುವುದು ಅತಿಮುಖ್ಯ, ಜೀವನದಲ್ಲಿ ಎನನ್ನು ಸಾಧಿಸಬಹುದು ಭಗವಂತ ನೀಡಿದ ದೇಹ ಸದೃಡವಾಗಿದ್ದರೆ ಮಾತ್ರ. ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿ ದೇವಾಲಯದ ಧರ್ಮದರ್ಶಿಗಳಾದ ಮಾರುತಿ ಗೂರುಜಿ ಅಭಿಪ್ರಾಯಿಸಿದರು.
ತಾಲೂಕಿನ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವಿರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ, ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ ವತಿಯಿಂದ ಸ್ವಸ್ಥ-ಸದೃಡ-ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಎಂಬ ಧ್ಯೆಯ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಡೆಂಗ್ಯೂ ಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ದೇಹದ ಆರೋಗ್ಯದ ರಕ್ಷಣೆಗಾಗಿ ನಾವು ವಿಷೇಶ ಕಾಳಜಿ ವಹಿಸಬೇಕಾಗುತ್ತದೆ, ಅದು ಆಹಾರ ಪದ್ದತಿಯ ಜೊತೆಗೆ ನಮ್ಮ ಸುತ್ತ-ಮುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಳ್ಳುವುದರ ಮೂಲಕ ಉತ್ತಮ ಆಹಾರ ಸ್ವಿಕಾರ ಮಾಡುವ ಮೂಲಕ ದೇಹದ ರಕ್ಷಣೆ ಮಾಡಿಕೊಳ್ಳಬೇಕು, ಆರೋಗ್ಯ ಸರಿ ಇದ್ದರೆ ಮಾತ್ರ ಉದ್ಯೋಗ ಮಾಡಬಹುದು, ವಿದ್ಯೆ ಕಲಿಯಬಹುದು ಅಥವಾ ಸಮಾಜದಲ್ಲಿ ಯಾವುದೇ ತರಹದ ಎಳ್ಗೆ ಕಾಣಬಹುದು ಎಂದು ವಿದ್ಯಾರ್ಥಿಗಳಿಗೆ ಆರೋಗ್ಯದ ಮಹತ್ವದ ಕುರಿತು ಕಿವಿಮಾತು ಹೇಳಿದರು. ಎಲ್ಲಾಸಿರಿ ಸಂಪತ್ತುಗಳಿದ್ದರು ಆರೋಗ್ಯ ಸರಿ ಇಲ್ಲದಿದ್ದರೆ ಎಲ್ಲವು ವ್ಯರ್ಥವೇ. ಈ ನಿಟ್ಟಿನಲ್ಲಿ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ ವಿದ್ಯಾರ್ಥಿಗಳಿಂದ ನಮ್ಮ ಭಾಗದಲ್ಲಿ ಹರಡಿರುವ ಡೆಂಗ್ಯು ಜ್ವರದ ಬಗ್ಗೆ ಎಲ್ಲರಿಗು ಜಾಗೃತಿಯನ್ನು ಮುಟ್ಟಿಸುವಲ್ಲಿ ಅಭಿಯಾನ ಹಮ್ಮಿಕೊಂಡಿದ್ದು ಇದು ಯಶಸ್ವಿಯಾಗಲಿ, ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಹುಟ್ಟಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪ್ರಾಂಶುಪಾಲರಾದ ಶ್ರೀನಿವಾಸ್, ಪಾಲಕರ ಕಮಿಟಿಯ ಉಪಾಧ್ಯಕ್ಷ ನರೇಂದ್ರ ನಾಯ್ಕ, ಮಾರುತಿ ಗೂರುಜಿಯವರ ಧರ್ಮಪತ್ನಿ ಅರ್ಪಿತಾ ಮಾರುತಿ, ಶಾಲಾ ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ಶಾಲಾ ಆವರಣದಿಂದ ಜಾಥಾ ಆರಂಭವಾಯಿತು. ಶಾಲಾ ಬಸ್ ಮೂಲಕ ಉಪ್ಪೋಣಿ, ಮೂಡ್ಕಣಿ, ಸರಳಗಿ ಸೇರಿದಂತೆ ಗೆರುಸೊಪ್ಪಾ ಸುತ್ತ-ಮುತ್ತಲ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಡೆಂಗ್ಯು ಜಾಗೃತಿ ಜಾಥಾ ನಡೆಸಿದರು. ಶಾಲಾ ಶಿಕ್ಷಕ ವೃಂದದವರು ಜಾಥಾದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಡೆಂಗ್ಯೂ ಜಾಗೃತಿ ಕುರಿತ ಕರಪತ್ರ ಹಂಚಿದರು.
Leave a Comment