ಹೊನ್ನಾವರ : ಕೇಂದ್ರದ ಮೋದಿ ಸರಕಾರದ ಅಧೀನದಲ್ಲಿರುವ ಸಿ.ಬಿ.ಐ.ಗೆ ಪರೇಶ ಮೇಸ್ತನ ಸಾವಿನ ತನಿಖೆಯ ಜವಾಬ್ದಾರಿ ನೀಡಿದ್ದಲ್ಲಿ ಕೇವಲ 7 ದಿನಗಳಲ್ಲಿ ನ್ಯಾಯ ಕೊಡಿಸುವುದಾಗಿ ಮುಗ್ಧ ಜನರಿಗೆ ಪ್ರಚೋದನೆ ನೀಡಿದ್ದ ಬಿ.ಜೆ.ಪಿ. ಮುಖಂಡರುಗಳು 7ತಿಂಗಳಾದರೂ ತನಿಖೆಯ ಬಗ್ಗೆ ಸೊಲ್ಲೇತ್ತದಿರುವುದನ್ನು ಖಂಡಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಮೂರು ಹಂತದಲ್ಲಿ ಹೋರಾಟ ನಡೆಸಲಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ತಿಳಿಸಿದ್ದಾರೆ.
ಅವರು ಇಂದು ಹೊನ್ನಾವರದ ಸೊಶಿಯಲ್ ಕ್ಲಬ್ ಸಭಾಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಏರ್¥Àಡಿಸಿದ ಕಾರ್ಯಕರ್ತರ ಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ಮಾತನಾಡುತ್ತಾ ಅಮಾಯಕ ಬಡ ಕುಟುಂಬದ ಪರೇಶ ಮೇಸ್ತನ ನಿಗೂಢ ಸಾವಿನ ಕುರಿತು ನ್ಯಾಯಕ್ಕಾಗಿ ಎಲ್ಲರೂ ಕೂಡಿ. ಹೋರಾಡ ಬೇಕಾಗಿದೆ. ಮಾಜಿ ಶಾಸಕಿ ಶಾರದಾ ಶೆಟ್ಟಿ, ಸಚಿವ ಆರ್.ವಿ.ದೇಶಪಾಂಡೆ ಮತ್ತು ಸಾರ್ವಜನಿಕರ ಬತ್ತಾಯದ ಮೇರೆಗೆ ಹಿಂದಿನ ಸಿದ್ದರಾಮಯ್ಯ ಸರಕಾರ ತನಿಖೆಯ ಜವಾದ್ದಾರಿಯನ್ನು ಸಿ.ಬಿ.ಐ.ಗೆ ನೀಡಿದೆ. ಆದರೆ ಕೇಂದ್ರ ಸರಕಾರ ಮತ್ತು ನಮ್ಮ ಜಿಲ್ಲೆಯವರೇ ಆದ ಸಚಿವ ಅನಂತಕುಮಾರ ಹೆಗಡೆ ಶ್ರೀಘ್ರ ತನಿಖೆಗೆ ಒತ್ತಾಯಿಸದೇ ಮುಂದಿನ ಲೋಕಸಭಾ ಚುನಾವಣೆಯವರೆಗೂ ಸಾವಿನ ನಿಗೂಢತೆಯನ್ನು ಜೀವಂತವಾಗಿಟ್ಟು ಕಳೆದ ವಿಧಾನಸಭಾ ಚುನಾವಣೆಯಂತೆ ರಾಜಕೀಯ ಲಾಭ ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ. ಎಂದು ಅವರು ಆಪಾದಿಸಿದ್ದಾರೆ.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಬರುವ ಮಂಗಳವಾರ ದಿ.10 ರಂದು ಮುಂಜಾನೆ 10ಗಂಟೆಗೆ ಪಟ್ಟಣ ಪಂಚಾಯತ ಆವರಣದಲ್ಲಿರುವ ಮಹಾತ್ಮಾ ಗಾಂಧಿಯವರ ಪುತ್ಧಳಿಕೆಗೆ ಮಾಲಾರ್ಪಣೆ ಮಾಡಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡು ಶ್ರೀಘ್ರ ತನಿಖೆಗೆ ಒತ್ತಾಯಿಸಿ ಎಚ್ಚರಿಸಲಾಗುವುದು. 15 ದಿನಗಳೂಳಗಾಗಿ ತನಿಖೆಯ ಬಗ್ಗೆ ಸೂಕ್ತ ಮಾಹಿತಿಯನ್ನು ಸಂಬಂದಿತ ಅಧಿಕಾರಿಗಳು ನೀಡದಿದ್ದಲ್ಲಿ ಎರಡನೇ ಹಂತವಾಗಿ “ಹೊನ್ನಾವರ ಬಂದ್” ಆಚರಿಸಿ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು .ಅದಕ್ಕೂ ಮಣಿಯದಿದ್ದಲ್ಲಿ “ಕಾರವಾರ ಚಲೋ” ಹಮ್ಮಿ ಕೊಂಡು ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ತೆಂಗೇರಿ ತಿಳಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಿ ಶಾರದಾ ಎಂ.ಶೆಟ್ಟಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿನಾಕಾರಣ, ಅನಗತ್ಯವಾಗಿ ಕೋಮುವಾದಿಗಳು ನನ್ನ ವಿರುದ್ಧ ಅಪಪ್ರಚಾರ ನಡೆಸಿ ನನ್ನ ಸೋಲಿಗೆ ಕಾರಣರಾದರು ಎಂದರು . ಆದರೂ ನಾನು ಸೋಲಿನಿಂದ ದೃತಿಗೆಡದೆ ನಿರಂತರವಾಗಿ ಕಾರ್ಯಕರ್ತರ ಸಂಪರ್ಕದಲ್ಲಿದ್ದು ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಪ್ರಯತ್ನಿಸುವುದ್ದಾಗಿ ತಿಳಿಸಿದರು. ನನ್ನ ಕಾಲಾವದಿಯಲ್ಲಿ ನಡೆದ ಅನೇಕ ಅಭಿವೃಧ್ದಿ ಕಾರ್ಯಗಳೇ ಪಕ್ಷಕ್ಕೆ ಶ್ರೀರಕ್ಷೆÉ ಎಂದರು. ಮತ್ತು ಹೊನ್ನಾವರದಲ್ಲಿ ತ್ವೇಷಮಯ ವಾತಾವರಣವಿದ್ದರೂ ಅದನ್ಕೆಲ್ಲಾ ದಿಟ್ಕತನದಿಂದ ಎದುರಿಸಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಬಗ್ಗೆ ಹಗಲು-ರಾತ್ರಿ ಪರಿಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಮಾಜಿ ಸಚಿವ ಆರ್.ಎನ್.ನಾಯ್ಕ ಮಾತಾನಾಡಿ ಕೇವಲ ಅಭಿವೃಧಿ ಕಾರ್ಯಗಳಿಂದಷ್ಟೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲಾ ಎಂದರು. ಏಳೆಂಟು ಬಾರಿ ಸತತವಾಗಿ ಚುನಾವಣೆಯಲ್ಲಿ ಗೆಲ್ಲುತ್ತಾ ಬಂದವರ ಕ್ಷೇತ್ರದಲ್ಲಿ ಅಭಿವೃಧಿಯೇ ಕಂಡಿರುವುದಿಲ್ಲ. ಆದರೂ ಅವರು ಚುನಾವಣೆಯಲ್ಲಿ ಸತತವಾಗಿ ಗೆಲ್ಲುತ್ತಾರೆ ಎಂದರು.
ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಹುಸೇನ ಖಾದ್ರಿ ಮಾತನಾಡಿ ಪಕ್ಷವನ್ನು ತಳಹಂತದಿಂದ ಸಂಘÀಟಿಸುವ ಕಾರ್ಯವಾಗಬೇಕಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ವiಹಿಳಾ ಕಾಂಗ್ರೆಸ್ ಅಧ್ಯಕ್ಷೆ ತಾರಾ ಗೌಡ, ಹೊನ್ನಾವರ ಪಟ್ಟಣ ಪಂಚಾಯತ ಅಧ್ಯಕ್ಷ ರಾಜಶ್ರೀ ನಾಯ್ಕ, ಕಾಂಗ್ರೆಸ್ ಕಾರ್ಮಿಕ ಸಂಘಟನೆಯ ಆಗ್ನೇಲ್ ಡಯಾಸ್, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ ,ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮನಾಥ ನಾಯ್ಕ ,ಕರ್ಕಿ ಮುಂತಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ದಾಮೋದರ್ ನಾಯ್ಕ ಸ್ವಾಗತಿಸಿದರು. ಲಂಬೋದರ ನಾಯ್ಕ ವಂದಿಸಿದರು.
Leave a Comment