ಹಳಿಯಾಳ:- ಪಟ್ಟಣದ ಬಸ್ ನಿಲ್ದಾಣದ ಎದುರು ಪುರಸಭೆ ನಿರ್ಮಿಸುತ್ತಿರುವ 14 ಅಂಗಡಿಗಳ ನಿರ್ಮಾಣ ಕಾಮಗಾರಿ ನಿಯಮ ಬದ್ದವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಹೇಳಿದ್ದಾರೆ. ಪುರಸಭೆಯ ಈ ಕಾಮಗಾರಿ ವಿರೋಧಿಸಿ ಕೂಡಲೇ ಕಾಮಗಾರಿ ನಿಲ್ಲಿಸುವಂತೆ ವಿವಿಧ ಸಂಘಟನೆಯವರು, ಸಾರ್ವಜನಿಕರು ಸಲ್ಲಿಸಿದ ಮನವಿಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೇಗೆ ಉತ್ತರಿಸಿದ ಮುಖ್ಯಾಧಿಕಾರಿಯವರು ಕಳೆದ 4 ವರ್ಷಗಳ ಹಿಂದೆ ಬಸ್ ನಿಲ್ದಾಣ ಎದುರಿನ ರಸ್ತೆ ಅಗಲಿಕರಣಕ್ಕಾಗಿ ಹಳೆ ಬಸ್ ನಿಲ್ದಾಣ ಎದುರಿನ ಪುರಸಭೆಯ 14 ಗುಡಂಗಡಿಗಳನ್ನು ತೆರವುಗೊಳಿಸಲಾಗಿತ್ತು ಅಲ್ಲದೇ ಆ ವ್ಯಾಪಾರಸ್ಥರಿಗೆ ಜೀವನೋಪಾಯಕ್ಕಾಗಿ ಪುನಃ ಅಂಗಡಿ ನಿರ್ಮಿಸಿಕೊಡುವ ಭರವಸೆ ನೀಡಿಲಾಗಿತ್ತು. ಅದರಂತೆ ಸಾರಿಗೆ ಸಂಸ್ಥೆಗೆ ಸೇರಿದ ಹೊಸ ನಿಲ್ದಾಣದ ಎದುರಿನ 700ಸ್ಕ್ವೇರ್ ಮೀಟರ್ ಜಾಗೆಯನ್ನು 5ಲಕ್ಷರೂ ವೆಚ್ಚದಲ್ಲಿ ಪುರಸಭೆಯು ಖರೀದಿಸಿದ್ದು ಇದನ್ನು ಸಚಿವ ಆರ್.ವಿ.ದೇಶಪಾಂಡೆಯವರು ಸರ್ಕಾರದ ಮಟ್ಟದಲ್ಲಿ ಮಂಜೂರಿ ಮಾಡಿಸಿದ್ದು 20 ಲಕ್ಷ ರೂ. ವೆಚ್ಚದಲ್ಲಿ 14 ಸಣ್ಣ ಅಂಗಡಿಗಳನ್ನು ನಿರ್ಮಿಸಲು ಟೆಂಡರ್ ಕರೆದಿದ್ದು ಗುತ್ತಿಗೆದಾರ ಶ್ರೀನಿವಾಸ ಘೊಟ್ನೇಕರ ಅವರು ಗುತ್ತಿಗೆ ಪಡೆದು ಕಾಮಗಾರಿ ಪ್ರಾರಂಭಿಸಿದ್ದು ಕಾನೂನು ಬದ್ದವಾಗಿ ಈ ಕಾಮಗಾರಿ ನಡೆದಿದೆ ಎಂದು ಮುಖ್ಯಾಧಿಕಾರಿ ಕೇಶವ ಚೌಗಲೆ ಹೇಳಿದರು. ಆದರೇ ಈ ಬಗ್ಗೆ ಹಿರಿಯ ನಾಗರೀಕರ ವೇದಿಕೆಯ ಬಸವರಾಜ ಉಪ್ಪಿನ, ಆಟೋ ರೀಕ್ಷಾ ಸಂಘದ ಕುಮಾರ, ಸತ್ತಾರ, ಬಾಬು ಮಾತನಾಡಿ ಪಟ್ಟಣದಲ್ಲಿ ಎಲ್ಲೆ ಮನೆ, ಅಂಗಡಿ ಸಂಕೀರ್ಣ ನಿರ್ಮಿಸಬೇಕಿದ್ದರೇ ಗಟಾರನಿಂದ 15ರಿಂದ 20ಅಡಿ(ಫೂಟ) ಬಿಟ್ಟು ಹಿಂದೆ ಕಟ್ಟಲು ಪರವಾನಿಗೆ ನೀಡುತ್ತಾರೆ ಇಲ್ಲವೇ ಪರವಾನಿಗೆಯನ್ನು ಪಡೆಯಲು ವರ್ಷಾನುಗಟ್ಟಲೇ ಓಡಾಡಬೇಕಾಗುತ್ತದೆ ಆದರೇ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆಯೇ ಎಂಬಂತಾಗಿದ್ದು ಜನನಿಬಿಡಿ ರಸ್ತೆ ಪಕ್ಕವೇ, ಗಟಾರವನ್ನು ಬಳಸಿ ಪುರಸಭೆಯು ಕಾಮಗಾರಿ ನಡೆಸುತ್ತಿರುವುದು ದುರ್ದೈವದ ಸಂಗತಿಯಾಗಿದ್ದು ಕಾಮಗಾರಿ ಕೂಡಲೇ ನಿಲ್ಲಿಸಿ ಬೇರೆಡೆ ಅಂಗಡಿ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ.
Leave a Comment