ಹಳಿಯಾಳ:- ಕಳೆದ ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ಕನ್ನಡ ನಾಡು, ನುಡಿ, ಜಲ ಮತ್ತು ಸಂಸ್ಕøತಿ ಸಂರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ಕಾರ್ಯಕ್ರಮ, ಹೋರಾಟಗಳನ್ನು ಮಾಡುತ್ತಾ ಬಂದಿದ್ದು ತಾಲೂಕಿನಲ್ಲಿ ಸಂಘಟನೆಗೆ ಒಂದು ಶಾಶ್ವತ ಕಟ್ಟಡದ ವ್ಯವಸ್ಥೆ ಇಲ್ಲವಾಗಿದ್ದು ಸಂಘಟನೆಗೆ ತೀವೃ ತೊಂದರೆಯಾಗುತ್ತಿದ್ದು ಕನ್ನಡ ಸಂಘಟನೆಗಳಿಗೆ ಸಾಮಾಜಿಕ ಕೆಲಸಕ್ಕಾಗಿ ಕೆಲಸ ನಿರ್ವಹಿಸಲು ಕಟ್ಟಡಕ್ಕಾಗಿ ಜಾಗ ಮಂಜೂರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದೆ. ವೇದಿಕೆಯ ಕಾರ್ಯಕರ್ತರು ಇಲ್ಲಿಯ ಪುರಸಭೆ ಕಾರ್ಯಾಲಯಕ್ಕೆ ಆಗಮಿಸಿ ಮುಖ್ಯಾಧಿಕಾರಿ ಚೌಗಲೆ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಭಾಷಾ ಸಮನ್ವಯತೆ ಹಾಗೂ ಸಾಮರಸ್ಯದಿಂದ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಇಲ್ಲಿವರೆಗೆ ಹಲವಾರು ಕಾರ್ಯಕ್ರಮ ಮಾಡಿದ್ದು ಪ್ರತಿ ವರ್ಷ ನಾಡ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದು. ಅನ್ಯಾಯದ ವಿರುದ್ದ ಹೋರಾಟ ಮಾಡಿ ನೊಂದವರ ಧನಿಯಾಗಿ ಕಾರ್ಯನಿರ್ವಹಿಸಿದೆ. ಸಾಮಾಜಿಕ ಸಂಘಟನೆಯಾಗಿರುವ ಕರವೇಗೆ ತಾಲೂಕಿನಲ್ಲಿ ಸಾರ್ವಜನೀಕ ಕೆಲಸಕ್ಕಾಗಿ ಈವರೆಗೆ ಸ್ವಂತ ಕಟ್ಟಡವಿಲ್ಲ ಕಾರಣ ಇನ್ನಷ್ಟು ಹೆಚ್ಚಿನ ಸಾಮಾಜಿಕ ಕೆಲಸ ನಿರ್ವಹಿಸಲು ಹಳಿಯಾಳ ಪಟ್ಟಣದಲ್ಲಿ ವೇದಿಕೆಗೆ 5ರಿಂದ 10 ಗುಂಟೆ ಜಾಗೆ ಮಂಜೂರಿ ಮಾಡುವಂತೆ ಆಗ್ರಹಿಸಲಾಗಿದೆ. ಪಟ್ಟಣದ ಹಿಂದೂ ರುದ್ರಭೂಮಿ ಬಳಿ ಇರುವ ಅಪ್ಪಾಸಾಹೇಬ ದೇಸಾಯಿ ಇವರ 293/1 ಲೇಔಟನಲ್ಲಿ ಪುರಸಭೆಗೆ ಬಿಟ್ಟುಕೊಟ್ಟಿರುವ ಜಾಗೆಯನ್ನು ಸಂಘಟನೆಗೆ ಮಂಜೂರಿ ಮಾಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಬೆಂಡಿಗೇರಿ ಮಠ ಪದಾಧಿಕಾರಿಗಳಾದ ಚಂದ್ರಕಾಂತ ದುರ್ವೆ, ಚಂದ್ರು ಅರಶೀಣಗೇರಿ, ವಿನೋದ ದೊಡ್ಡಮಣಿ, ಶ್ರೀಶೈಲ ಮಠದೇವರ, ಶಿವು ಡಮ್ಮಣಗಿಮಠ, ಮಹೇಶ ಆನೆಗುಂದಿ, ವಿಜಯ ಪಡ್ನೀಸ್, ರಘು ಅಯ್ಯಂಗಾರ, ಶಿವು ಶೆಟ್ಟಿ, ಸುಧಾಕರ ಕುಂಬಾರ, ಕಾರ್ತಿಕ ಕಳ್ಳಿಮನಿ, ಪ್ರಶಾಂತ ಪಾಟೀಲ್, ಅಶೋಕ ಪಾಟೀಲ್ ಇತರರು ಇದ್ದರು.
Leave a Comment