• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

24*7 ಕುಡಿಯುವ ನೀರಿನ ಯೋಜನೆ ಬಗ್ಗೆ ಅಧ್ಯಯನಕ್ಕೆ ಹಳಿಯಾಳ ಪುರಸಭೆಗೆ ಶಿಮ್ಲಾ ಮಹಾನಗರ ಪಾಲಿಕೆ ಸದಸ್ಯರ ನಿಯೋಗ ಭೇಟಿ, ಕರ್ನಾಟಕದ ರಾಜ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿಮ್ಲಾ ಸದಸ್ಯರು

July 12, 2018 by Yogaraj SK Leave a Comment

ಹಳಿಯಾಳ:- ಕರ್ನಾಟಕ ರಾಜ್ಯದಲ್ಲಿ ಮೊದಲು ಎಂಬಂತೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿ ಜಾರಿಗೆ ಬಂದಿರುವ ನಿರಂತರ(24*7) ಮಾದರಿಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ಬಗ್ಗೆ ತಿಳಿಯಲು ದೂರದ ಹಿಮಾಚಲ ಪ್ರದೇಶದ ಶಿಮ್ಲಾದಿಂದ ಅಲ್ಲಿಯ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡ ಗುರುವಾರ ಹಳಿಯಾಳ ಪುರಸಭೆಗೆ ಭೇಟಿ ನೀಡಿ ಮಾಹಿತಿ ಪಡೆಯಿತು.  ಶಿಮ್ಲಾದ ಮಹಾನಗರ ಪಾಲಿಕೆಯ ಉಪ ಮಹಾಪೌರ ರಾಕೇಶ ಕುಮಾರ ಶರ್ಮಾ ನೇತೃತ್ವದಲ್ಲಿ 14ಕ್ಕೂ ಹೆಚ್ಚು ಸದಸ್ಯರು ಹಾಗೂ 5 ಅಧಿಕಾರಿಗಳನ್ನೊಳಗೊಂಡ ತಂಡ ಹಳಿಯಾಳ ಪುರಸಭೆಗೆ ಭೇಟಿ ನೀಡಿ ಹಳಿಯಾಳ ಪಟ್ಟಣದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಜಾರಿಯಾಗಿರುವ ಮಹಾರಾಷ್ಟ್ರದ ಜೈನ ಇರಿಗೇಶನ್ ಅವರಿಂದ ನಿರ್ವಹಿಸಲ್ಪಡುತ್ತಿರುವ 24*7 ಮಾದರಿಯ ಕುಡಿಯುವ ನೀರಿನ ಕಾಮಗಾರಿ, ಅನುಷ್ಠಾನದ ಸಾದಕ, ಬಾಧಕಗಳ ಕುರಿತು ಅಧಿಕಾರಿ ಹಾಗೂ ಪುರಸಭೆ ಸದಸ್ಯರೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡರು.  ಹಳಿಯಾಳ ಪುರಸಭೆಯ ಸಭಾ ಭವನದಲ್ಲಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಶಿಮ್ಲಾದ ನಿಯೋಗದಲ್ಲಿದ್ದ ಸದಸ್ಯರನ್ನು ಹಳಿಯಾಳ ಪುರಸಭೆಯವರು ಗೌರವಯುತವಾಗಿ ಸನ್ಮಾನಿಸಿ ಸ್ವಾಗತಿಸಿದರೇ ಶಿಮ್ಲಾದ ಸದಸ್ಯರು ಪುರಸಭೆ ಅಧ್ಯಕ್ಷರಿಗೆ ಶಿಮ್ಲಾ ಪ್ರದೇಶದ ಸಾಂಪ್ರದಾಯಿಕ ಟೊಪ್ಪಿಯನ್ನು ತೊಡಿಸಿ ಗೌರವಿಸಿದರು.  ಸಭೆಯ ಬಳಿಕ ಪಟ್ಟಣದ ನೀರು ಸರಬರಾಜಿನ ವಿವಿಧ ಸ್ಥಳಗಳಿಗೆ ಬಳಿಕ ದಾಂಡೇಲಿ, ಕರ್ಕಾದಲ್ಲಿರುವ ನೀರೆತ್ತುವ ಜಾಕವೆಲ್‍ಗಳಿಗೆ ತೆರಳಿ ಸವಿಸ್ತøತ ಮಾಹಿತಿಯನ್ನು ಶಿಮ್ಲಾದ ಸದಸ್ಯರ ತಂಡ ಪಡೆಯಿತು.  ಕರ್ನಾಟಕ ರಾಜ್ಯದ ಬಗ್ಗೆ

ಶ್ಲಾಘನೆ:- ಶಿಮ್ಲಾದ ಮಹಾನಗರ ಪಾಲಿಕೆಯ ಉಪ ಮಹಾಪೌರ ರಾಕೇಶ ಕುಮಾರ ಶರ್ಮಾ ಮಾತನಾಡಿ ತನ್ನ ಅನೇಕ ತಪ್ಪುಗಳಿಂದಾಗಿ ಶಿಮ್ಲಾ ತನ್ನ ಪ್ರತಿಷ್ಠೆಯನ್ನು ಕಳೆದುಕೊಳ್ಳುತ್ತಿದೆ ಅದಕ್ಕೆ ಸಾರ್ವಜನೀಕರು, ಜನಪ್ರತಿನಿಧಿಗಳು ಕಾರಣಿಕರ್ತರಾಗಿದ್ದಾರೆ ಆದರೇ ಕರ್ನಾಟಕ ಪ್ರತಿಷ್ಠೆಯ ರಾಜ್ಯವಾಗಿದ್ದು ಕರ್ನಾಟಕ ಹೆಸರು ಗೌರವಯುತ ಉಚ್ಚ ಸ್ಥಾನದಲ್ಲಿದ್ದು ಅದನ್ನು ರಾಜ್ಯದವರು ಕಾಯ್ದುಕೊಂಡು ಹೋಗಬೇಕು ಕರ್ನಾಟಕದ ಬಗ್ಗೆ ತಮಗೆ ಅಪಾರ ಹೆಮ್ಮೆ, ಗೌರವ ಇದೆ ಎಂದು ರಾಜ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.  ಈ ನಿಯೋಗದಲ್ಲಿ ಶಿಮ್ಲಾ ಮಹಾನಗರ ಪಾಲಿಕೆಯ ಸದಸ್ಯರಾದ ರಾಕೇಶ ಚವ್ವಾಣ, ಕುಲದೀಪ ಠಾಕುರ, ವಿವೇಕ ಶರ್ಮಾ, ಕಿರಣಬಾಬಾ, ದಿವಾಕರ ಶರ್ಮಾ,ತನುಜಾ ಚೌದರಿ, ಕಮಲೇಶ ಮೆಹತಾ, ರೇಣು, ಶಾರದಾ ಚೌಹಾನ,ಮೀರಾ ಶರ್ಮಾ,ಆರ್ಸಿ ಚೌಹಾನ,ಸುಶ್ಮಾ ಕೊಟಿಯಾಲಾ, ಸತ್ಯಾ ಕೌಂದಲ ಅಧಿಕಾರಿಗಳಾದ ಧರ್ಮೆಂದರ್, ಡಿಡಿ ಮಿಶ್ರಾ, ಈಶ್ವರ, ರಾಜೇಶ ಮನಹೋತ್ರಾ, ಬೊಪೆಶ, ಅಭಿಷೇಕ ಇದ್ದರು.   ಸಭೆಯಲ್ಲಿ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಹಿರಿಯ ಸದಸ್ಯ ಶ್ರೀಕಾಂತ ಹೂಲಿ, ಸುರೇಶ ತಳವಾರ, ಸತ್ಯಜೀತ ಗಿರಿ, ಉಮೇಶ ಬೊಳಶೆಟ್ಟಿ, ಮಾಲಾ ಬ್ರಗಾಂಜಾ, ಪುರಸಭೆ ಮುಖ್ಯಾಧಿಕಾರಿ ಚೌಗಲೆ ಇತರರು ಇದ್ದರು.   ಅಧಿಕಾರಿ ವರ್ಗದವರು, ಸದಸ್ಯರು ಅವರೊಂದಿಗೆ ತೆರಳಿ ನಿರಂತರ ಕುಡಿಯುವ ನೀರಿನ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀಡಿದರು.

watermarked 12 hly 3 Himachal pradesh SHIMLA MUNCIPAL COUNCIL MEMBERS VISIT HALIYAL TMC

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 24*7 ಕುಡಿಯುವ ನೀರಿನ ಯೋಜನೆ, 24*7 ಮಾದರಿಯ, ಅಧ್ಯಯನ, ಅನುಷ್ಠಾನದ ಸಾದಕ, ಅವರಿಂದ, ಕರ್ನಾಟಕದ ರಾಜ್ಯ, ಕುಡಿಯುವ ನೀರಿನ ಕಾಮಗಾರಿ, ನಿರ್ವಹಿಸಲ್ಪಡುತ್ತಿರುವ, ಬಗ್ಗೆ, ಬಾಧಕಗಳ, ಮಹಾರಾಷ್ಟ್ರದ ಜೈನ ಇರಿಗೇಶನ್, ಮೆಚ್ಚುಗೆ ವ್ಯಕ್ತಪಡಿಸಿದ ಶಿಮ್ಲಾ ಸದಸ್ಯರು, ವೆಚ್ಚದಲ್ಲಿ ಜಾರಿಯಾಗಿರುವ, ಶಿಮ್ಲಾ ತನ್ನ ಪ್ರತಿಷ್ಠೆಯನ್ನು ಕಳೆದುಕೊಳ್ಳುತ್ತಿದೆ, ಶಿಮ್ಲಾ ಮಹಾನಗರ ಪಾಲಿಕೆ ಸದಸ್ಯರ ನಿಯೋಗ ಭೇಟಿ, ಶಿಮ್ಲಾದ ಮಹಾನಗರ ಪಾಲಿಕೆ, ಹಳಿಯಾಳ ಪಟ್ಟಣದಲ್ಲಿ 18 ಕೋಟಿ ರೂ., ಹಳಿಯಾಳ ಪುರಸಭೆಗೆ, ಹಿಮಾಚಲ ಪ್ರದೇಶದ ಶಿಮ್ಲಾದಿಂದ ಅಲ್ಲಿಯ ಮಹಾನಗರ ಪಾಲಿಕೆಯ ಸದಸ್ಯರು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...