ಹಳಿಯಾಳ:- ಕರ್ನಾಟಕ ರಾಜ್ಯದಲ್ಲಿ ಮೊದಲು ಎಂಬಂತೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿ ಜಾರಿಗೆ ಬಂದಿರುವ ನಿರಂತರ(24*7) ಮಾದರಿಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ಬಗ್ಗೆ ತಿಳಿಯಲು ದೂರದ ಹಿಮಾಚಲ ಪ್ರದೇಶದ ಶಿಮ್ಲಾದಿಂದ ಅಲ್ಲಿಯ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡ ಗುರುವಾರ ಹಳಿಯಾಳ ಪುರಸಭೆಗೆ ಭೇಟಿ ನೀಡಿ ಮಾಹಿತಿ ಪಡೆಯಿತು. ಶಿಮ್ಲಾದ ಮಹಾನಗರ ಪಾಲಿಕೆಯ ಉಪ ಮಹಾಪೌರ ರಾಕೇಶ ಕುಮಾರ ಶರ್ಮಾ ನೇತೃತ್ವದಲ್ಲಿ 14ಕ್ಕೂ ಹೆಚ್ಚು ಸದಸ್ಯರು ಹಾಗೂ 5 ಅಧಿಕಾರಿಗಳನ್ನೊಳಗೊಂಡ ತಂಡ ಹಳಿಯಾಳ ಪುರಸಭೆಗೆ ಭೇಟಿ ನೀಡಿ ಹಳಿಯಾಳ ಪಟ್ಟಣದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಜಾರಿಯಾಗಿರುವ ಮಹಾರಾಷ್ಟ್ರದ ಜೈನ ಇರಿಗೇಶನ್ ಅವರಿಂದ ನಿರ್ವಹಿಸಲ್ಪಡುತ್ತಿರುವ 24*7 ಮಾದರಿಯ ಕುಡಿಯುವ ನೀರಿನ ಕಾಮಗಾರಿ, ಅನುಷ್ಠಾನದ ಸಾದಕ, ಬಾಧಕಗಳ ಕುರಿತು ಅಧಿಕಾರಿ ಹಾಗೂ ಪುರಸಭೆ ಸದಸ್ಯರೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡರು. ಹಳಿಯಾಳ ಪುರಸಭೆಯ ಸಭಾ ಭವನದಲ್ಲಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಶಿಮ್ಲಾದ ನಿಯೋಗದಲ್ಲಿದ್ದ ಸದಸ್ಯರನ್ನು ಹಳಿಯಾಳ ಪುರಸಭೆಯವರು ಗೌರವಯುತವಾಗಿ ಸನ್ಮಾನಿಸಿ ಸ್ವಾಗತಿಸಿದರೇ ಶಿಮ್ಲಾದ ಸದಸ್ಯರು ಪುರಸಭೆ ಅಧ್ಯಕ್ಷರಿಗೆ ಶಿಮ್ಲಾ ಪ್ರದೇಶದ ಸಾಂಪ್ರದಾಯಿಕ ಟೊಪ್ಪಿಯನ್ನು ತೊಡಿಸಿ ಗೌರವಿಸಿದರು. ಸಭೆಯ ಬಳಿಕ ಪಟ್ಟಣದ ನೀರು ಸರಬರಾಜಿನ ವಿವಿಧ ಸ್ಥಳಗಳಿಗೆ ಬಳಿಕ ದಾಂಡೇಲಿ, ಕರ್ಕಾದಲ್ಲಿರುವ ನೀರೆತ್ತುವ ಜಾಕವೆಲ್ಗಳಿಗೆ ತೆರಳಿ ಸವಿಸ್ತøತ ಮಾಹಿತಿಯನ್ನು ಶಿಮ್ಲಾದ ಸದಸ್ಯರ ತಂಡ ಪಡೆಯಿತು. ಕರ್ನಾಟಕ ರಾಜ್ಯದ ಬಗ್ಗೆ
ಶ್ಲಾಘನೆ:- ಶಿಮ್ಲಾದ ಮಹಾನಗರ ಪಾಲಿಕೆಯ ಉಪ ಮಹಾಪೌರ ರಾಕೇಶ ಕುಮಾರ ಶರ್ಮಾ ಮಾತನಾಡಿ ತನ್ನ ಅನೇಕ ತಪ್ಪುಗಳಿಂದಾಗಿ ಶಿಮ್ಲಾ ತನ್ನ ಪ್ರತಿಷ್ಠೆಯನ್ನು ಕಳೆದುಕೊಳ್ಳುತ್ತಿದೆ ಅದಕ್ಕೆ ಸಾರ್ವಜನೀಕರು, ಜನಪ್ರತಿನಿಧಿಗಳು ಕಾರಣಿಕರ್ತರಾಗಿದ್ದಾರೆ ಆದರೇ ಕರ್ನಾಟಕ ಪ್ರತಿಷ್ಠೆಯ ರಾಜ್ಯವಾಗಿದ್ದು ಕರ್ನಾಟಕ ಹೆಸರು ಗೌರವಯುತ ಉಚ್ಚ ಸ್ಥಾನದಲ್ಲಿದ್ದು ಅದನ್ನು ರಾಜ್ಯದವರು ಕಾಯ್ದುಕೊಂಡು ಹೋಗಬೇಕು ಕರ್ನಾಟಕದ ಬಗ್ಗೆ ತಮಗೆ ಅಪಾರ ಹೆಮ್ಮೆ, ಗೌರವ ಇದೆ ಎಂದು ರಾಜ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಈ ನಿಯೋಗದಲ್ಲಿ ಶಿಮ್ಲಾ ಮಹಾನಗರ ಪಾಲಿಕೆಯ ಸದಸ್ಯರಾದ ರಾಕೇಶ ಚವ್ವಾಣ, ಕುಲದೀಪ ಠಾಕುರ, ವಿವೇಕ ಶರ್ಮಾ, ಕಿರಣಬಾಬಾ, ದಿವಾಕರ ಶರ್ಮಾ,ತನುಜಾ ಚೌದರಿ, ಕಮಲೇಶ ಮೆಹತಾ, ರೇಣು, ಶಾರದಾ ಚೌಹಾನ,ಮೀರಾ ಶರ್ಮಾ,ಆರ್ಸಿ ಚೌಹಾನ,ಸುಶ್ಮಾ ಕೊಟಿಯಾಲಾ, ಸತ್ಯಾ ಕೌಂದಲ ಅಧಿಕಾರಿಗಳಾದ ಧರ್ಮೆಂದರ್, ಡಿಡಿ ಮಿಶ್ರಾ, ಈಶ್ವರ, ರಾಜೇಶ ಮನಹೋತ್ರಾ, ಬೊಪೆಶ, ಅಭಿಷೇಕ ಇದ್ದರು. ಸಭೆಯಲ್ಲಿ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಹಿರಿಯ ಸದಸ್ಯ ಶ್ರೀಕಾಂತ ಹೂಲಿ, ಸುರೇಶ ತಳವಾರ, ಸತ್ಯಜೀತ ಗಿರಿ, ಉಮೇಶ ಬೊಳಶೆಟ್ಟಿ, ಮಾಲಾ ಬ್ರಗಾಂಜಾ, ಪುರಸಭೆ ಮುಖ್ಯಾಧಿಕಾರಿ ಚೌಗಲೆ ಇತರರು ಇದ್ದರು. ಅಧಿಕಾರಿ ವರ್ಗದವರು, ಸದಸ್ಯರು ಅವರೊಂದಿಗೆ ತೆರಳಿ ನಿರಂತರ ಕುಡಿಯುವ ನೀರಿನ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀಡಿದರು.
Leave a Comment