ಹೊನ್ನಾವರ : ಪಟ್ಟಣದ ರಾಮ ಮಂದಿರದ ಸಮೀಪದ ನಿವಾಸಿ ವನಜಾ (ವೃಂದಾ) ವೇಂಕಟೇಶ ನಾಯಕ ಇವರಿಗೆ ಸಂದಾಯಮಾಡಬೇಕಾದ ಹಣದ ಬಗ್ಗೆ ಕೃಷ್ಣಾನಂದ ರಾಮಚಂದ್ರ ಶ್ಯಾನಭಾಗ ಇವರು ನೀಡಿದ ಚೇಕ್ ಬೊನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ 6 ವರ್ಷಗಳ ಕಾಲ ವಿಚಾರಣೆ ನಡೆಸಿದ ಹೆಚ್ಚುವರಿ ಜೆಎಮ್ಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸನ್ಮತಿ ಎಸ್.ಆರ್ ಆರೋಪಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು 4.70000 ರೂ. ದಂಡ ನೀಡುವಂತೆ ಅದರಲ್ಲಿ 10.000 ರೂ. ಸರ್ಕಾರಕ್ಕೆ ಭರಿಸುವಂತೆ ತೀರ್ಪು ನೀಡಿದೆ. ದಂಡ ಭರಿಸಲು ತಪ್ಪಿದಲ್ಲಿ 3 ತಿಂಗಳ ಶಿಕ್ಷೆ ಆದೇಶ ನೀಡಿದೆ. ಪಿರ್ಯಾದಿಯ ಪರ ಜಿ.ಜಿ.ಭಟ್ ಚೌಕಿ ವಾದ ಮಂಡಿಸಿದ್ದರು.
Leave a Comment