ಹಳಿಯಾಳ:- ತಾಲೂಕಿನ ಆಂಗ್ಲ ಮತ್ತು ಉರ್ದು ಮಾಧ್ಯಮ ಶಾಲೆಯ 1 ರಿಂದ 5 ನೇ ತರಗತಿಯ ಮಕ್ಕಳಿಗೆ ಈವರೆಗೆ ಕನ್ನಡ ಮಾದ್ಯಮದ ಪುಸ್ತಕಗಳನ್ನು ಪೂರೈಸದಿರುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಆಕ್ಷೇಪ ವ್ಯಕ್ತಪಡಿಸಿದ್ದು ಕೂಡಲೇ ಪುಸ್ತಕಗಳನ್ನು ಪೂರೈಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹ್ಮದ ಮುಲ್ಲಾಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ.
ಪ್ರತಿಭಟನಾ ಮೇರವಣಿಗೆ ಮೂಲಕ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ವೇದಿಕೆಯವರು ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಂಗ್ಲ ಮತ್ತು ಉರ್ದು ಮಾದ್ಯಮದ ಶಾಲೆಗಳಲ್ಲಿ ಶಾಲೆ ಪ್ರಾರಂಭವಾಗಿ 2 ತಿಂಗಳು ಕಳೆದರೂ ಕನ್ನಡ ಮಾದ್ಯಮದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸದೇ ಕನ್ನಡ ಮಾದ್ಯಮದ ಕಲಿಕೆಯಿಂದ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡುತ್ತಿರುವುದು ದುರ್ದೈವದ ಸಂಗತಿ.
ಸರಕಾರ ಹಾಗೂ ಕನ್ನಡ ಸಂಘಟನೆಗಳು ಕನ್ನಡದ ಭಾಷೆಯ ಉಳಿವಿಗಾಗಿ ಸಾಕಷ್ಟು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಹಳಿಯಾಳ ತಾಲೂಕಿನ ವಿದ್ಯಾರ್ಥಿಗಳನ್ನು ಈ ರೀತಿ ಕನ್ನಡ ಕಲಿಕೆಯಿಂದ ವಂಚಿತರನ್ನಾಗಿ ಮಾಡದೇ ಒಂದು ವಾರದಲ್ಲಿ ಪುಸ್ತಕಗಳನ್ನು ಪೂರೈಸಬೇಕು ಎಂ ದು ಆಗ್ರಹಿಸಿದ್ದು ಒಂದಾನುವೇಳೆ ಕನ್ನಡ ಪುಸ್ತಕಗಳನ್ನು ಪೂರೈಸದಿದ್ದರೆ ಹಳಿಯಾಳದ ಶೀಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರು ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಪದಾಧಿಕಾರಿಗಳಾದ ಚಂದ್ರಕಾಂತ ದುರ್ವೆ, ಚಂದ್ರು ಅರಶೀಣಗೇರಿ, ವಿನೋದ ದೊಡ್ಡಮಣಿ, ಮಹೇಶ ಆನೆಗುಂದಿ, ಶ್ರೀಶೈಲ ಮಠದೇವರ, ಶಿವು ಡಮ್ಮಣಗಿಮಠ, ವಿಜಯ ಪಡ್ನೀಸ್, ರಘು ಅಯ್ಯಂಗಾರ, ಶಿವು ಶೆಟ್ಟಿ, ಸುಧಾಕರ ಕುಂಬಾರ, ಪ್ರಶಾಂತ, ಅಶೋಕ ಪಾಟೀಲ್, ಈರಯ್ಯಾ ಹೀರೆಮಠ, ನಾಗಯ್ಯಾ ಓಶೀಮಠ, ಪ್ರಕಾಶ ನಾಡಗೌಡ್ರು, ಮಂಜು ಹೊಂಡದಕಟ್ಟಿ, ಮಂಜು ದೇಸಾಯಿ, ಸುರೇಶ, ರಾಮಾ, ಕಾರ್ತಿಕ, ನಂದು ಕರಂಜೇಕರ, ಸುನೀಲ, ವಿನಾಯಕ, ಸಂಗಯ್ಯಾ, ನವನಿತ, ವಿಜಯ, ತುಕಾರಾಮ ಇದ್ದರು.
Leave a Comment