ಹಳಿಯಾಳ: ಪಟ್ಟಣದಿಂದ ಕೇವಲ 5 ಕೀಮಿ ಅಂತರದಲ್ಲಿರುವ ನೀರಲಗಾ ಗ್ರಾಮದಲ್ಲಿ ಮಾರಣಾಂತಿಕ ಡೆಂಘ್ಯು ಜ್ವರಕ್ಕೆ ಶಾಲಾ ವಿದ್ಯಾರ್ಥಿನಿಯೋರ್ವಳು ಅಸುನಿಗಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಠಿಸಿದೆ. ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಅಪೂರ್ವಾ ವಿಷ್ಣು ಕೊಲೆಕರ(11) ಡೆಂಘ್ಯೂ ಜ್ವರಕ್ಕೆ ಬಲಿಯಾಗಿರುವ ಮುಗ್ದ ಬಾಲಕಿಯಾಗಿದ್ದಾಳೆ. ಈಕೆಯ ತಂದೆ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದು. ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ್ದು ಸ್ವಾಮಿ ವಿವೇಕಾನಂದ ಶಾಲೆಯ ಶೀಕ್ಷಕ ವರ್ಗದವರು ಗ್ರಾಮಕ್ಕೆ ತೆರಳಿ ಬಾಲಕಿಯ ಅಂತ್ಯಕ್ರೀಯೆಯಲ್ಲಿ ಪಾಲ್ಗೊಂಡಿದ್ದಾರೆ. ತಾಲೂಕಿನ ನೀರಲಗಾ ಗ್ರಾಮದಲ್ಲಿ ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಭಾಗಶಃ ಗ್ರಾಮದಲ್ಲಿ ಜನರು ಜ್ವರದಿಂದ ಬಳಲುತ್ತಿರುವ ಬಗ್ಗೆ ಪಟ್ಟಣದ ಖಾಸಗಿ ವೈದ್ಯರು ಮಾಹಿತಿ ನೀಡಿದ್ದರು. ಅಲ್ಲದೇ ಮೃತ ಬಾಲಕಿಯ ಅಣ್ಣ ವಿಶಾಲ ಕೂಡ ವೀಪರಿತ ಜ್ವರದಿಂದ ಬಳಲುತ್ತಿದ್ದ ಇಬ್ಬರನ್ನು ದಾಂಡೇಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದಾಗ ಅವರು ಧಾರವಾಡದ ಖ್ಯಾತ ಮಕ್ಕಳ ತಜ್ಞ ದೇಶಪಾಂಡೆ ಅವರ ಬಳಿ ದಾಖಲಾಗುವಂತೆ ಸಲಹೆ ನೀಡಿದಾಗ ಪಾಲಕರು ಮಕ್ಕಳನ್ನು ಆ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ವಿಶಾಲ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖವಾಗಿದ್ದಾನೆ. ಆದರೇ ಅಪೂರ್ವಾನ ಆರೋಗ್ಯದಲ್ಲಿ ಚೇತರಿಕೆ ಕಾಣದ ಕಾರಣ ಅವಳನ್ನು ಎಸ್ಡಿಎಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ವಿದ್ಯಾರ್ಥಿನಿ ಮೃತಳಾಗಿದ್ದಾಳೆಂದು ಗ್ರಾಮಸ್ಥರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಈ ಗ್ರಾಮದಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಜನರು ವೀಪರಿತ ಜ್ವರದಿಂದ ಬಳಲುತ್ತಿದ್ದು ಪಟ್ಟಣ, ದಾಂಡೇಲಿ, ಧಾರವಾಡ, ಹುಬ್ಬಳ್ಳಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಗಾಗಿದ್ದು ಗ್ರಾಮದಲ್ಲಿ ಡೆಂಘ್ಯೂ ಜ್ವರ ಹರಡಿದೆ ಎನ್ನುವುದು ಗ್ರಾಮಸ್ಥರ ಆತಂಕದ ಮಾತಾಗಿದೆ. ಈ ಕುರಿತು ಹಳಿಯಾಳ ತಾಲೂಕಾ ಆಸ್ಪತ್ರೆಯ ಆರೋಗ್ಯಾಧಿಕಾರಿ ಹಾಗೂ ಗ್ರಾಮ ಪಂಚಾಯತನವರಿಗೆ ತಿಳಿಸಿದರು ಕೂಡ ಈವರಗೆ ಯಾರು ಗ್ರಾಮಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
Leave a Comment